Don't Miss!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- News Raichur: ರಾಯಚೂರಿನಲ್ಲಿ ತಣ್ಣಗಾಗದ ಬಂಡಾಯದ ಬೆಂಕಿ: ಬಿವಿ ನಾಯಕ್, ತಿಪ್ಪರಾಜು ಜೊತೆ ಬಿಜೆಪಿ ಸಂಧಾನ ವಿಫಲ!
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಮಿತಾಬ್ ಬಚ್ಚನ್ ಕಾಳಜಿಯನ್ನು ಕೊಂಡಾಡಿದ ವರುಣ್ ಧವನ್
ಬಾಲಿವುಡ್ ಯುವ ನಟ ವರುಣ್ ಧವನ್ ಗೆ ಕೆಲವು ದಿನಗಳ ಹಿಂದಷ್ಟೆ ಕೊರೊನಾ ಸೋಂಕು ತಗುಲಿತ್ತು. ಇದೀಗ ಕೊರೊನಾದಿಂದ ಗುಣಮುಖರಾಗಿರುವ ವರುಣ್ ಧವನ್, ಕೊರೊನಾ ಅನುಭವ ಹಂಚಿಕೊಂಡಿದ್ದಾರೆ.
ಕೊರೊನಾ ದಿಂದ ಗುಣಮುಖರಾಗಿರುವ ವರುಣ್ ಧವನ್, ಕೂಲಿ ನಂ 1 ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಸಮಯದಲ್ಲಿ ಸಂದರ್ಶನವೊಂದರಲ್ಲಿ ಕೊರೊನಾ ಅನುಭವ ಹಂಚಿಕೊಂಡಿರುವ ವರುಣ್ ಧವನ್, ಅಮಿತಾಬ್ ಬಚ್ಚನ್ ಕಾಳಜಿ ಬಗ್ಗೆ ಕೊಂಡಾಡಿದ್ದಾರೆ.
ನಾನು ಕೊರೊನಾ ಸೋಂಕಿಗೆ ತುತ್ತಾಗಿ ಐಸೋಲೇಶನ್ನಲ್ಲಿ ಇದ್ದಾಗ ಪ್ರತಿದಿನ ನನ್ನ ಆರೋಗ್ಯದ ಮಾಹಿತಿ ಪಡೆದು ಸಲಹೆ ನೀಡುತ್ತಿದ್ದುದು ಅಮಿತಾಬ್ ಬಚ್ಚನ್ ಎಂದಿದ್ದಾರೆ ಅಮಿತಾಬ್ ಬಚ್ಚನ್.
'ನನಗೆ ಪ್ರತಿದಿನ ಕರೆ ಮಾಡಿ ನನ್ನ ಆರೋಗ್ಯದ ಮಾಹಿತಿ ಪಡೆಯುತ್ತಿದ್ದರು ಅಮಿತ್ ಜೀ. ಅವರೊಬ್ಬ ಅದ್ಭುತವಾದ ವ್ಯಕ್ತಿ' ಎಂದು ಕೊಂಡಾಡಿದ್ದಾರೆ ನಟ ವರುಣ್ ಧವನ್.
'ಜುಗ್ ಜುಗ್ ಜಿಯೊ' ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ನಟ ವರುಣ್ ಧವನ್, ನೀತಾ ಕಪೂರ್ ಹಾಗೂ ಇತರರಿಗೆ ಕೊರೊನಾ ಸೋಂಕು ತಗುಲಿತ್ತು. 'ಚಿತ್ರೀಕರಣ ಸೆಟ್ನಲ್ಲಿ ನಾವು ಸಾಕಷ್ಟು ಮುಂಜಾಗೃತ ಕ್ರಮ ತೆಗೆದುಕೊಂಡಿದ್ದೆವು, ಆದರೂ ಅದು ಹೇಗೆ ಕೊರೊನಾ ಸೋಂಕು ತಗುಲಿತೊ ಗೊತ್ತಿಲ್ಲ' ಎಂದಿದ್ದಾರೆ ವರುಣ್ ಧವನ್.
ಅದೃಷ್ಟವಶಾತ್ ನನ್ನ ರೋಗನಿರೋಧಕ ಶಕ್ತಿ ಚೆನ್ನಾಗಿತ್ತು, ನನಗೆ ಏನೂ ಆಗಲಿಲ್ಲ. ಆದರೆ ಎಲ್ಲರೂ ಸಾಧ್ಯವಾದಷ್ಟು ಎಚ್ಚರಿಕೆ ಇಂದ ಇರುವುದು ಉತ್ತಮ ಎಂದಿದ್ದಾರೆ ವರುಣ್ ಧವನ್.
ವರುಣ್ ಧವನ್, ನೀತಾ ಕಪೂರ್, ಕಿಯಾರಾ ಅಡ್ವಾಣಿ, ಪ್ರಾಜಕ್ತಾ ಅವರುಗಳಿಗೆ ಕೊರೊನಾ ಸೋಂಕು ತಗುಲಿತ್ತು. ಅನಿಲ್ ಕಪೂರ್ಗೂ ಕೊರೊನಾ ಆಗಿದೆ ಎನ್ನಲಾಗಿತ್ತು, ಆದರೆ ನಂತರ ಅವರ ವರದಿ ನೆಗೆಟಿವ್ ಬಂತು.
ನಟ ಅಮಿತಾಬ್ ಬಚ್ಚನ್ ಅವರಿಗೂ ಕೊರೊನಾ ಆಗಿತ್ತು, ಆದರೆ ಅವರು ಗುಣವಾದರು. ಅಮಿತಾಬ್ ಕುಟುಂಬದಲ್ಲಿ ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಹಾಗೂ ಆರಾಧ್ಯ ಗೆ ಕೊರೊನಾ ಸೋಂಕು ತಗುಲಿತ್ತು.