Don't Miss!
- News ಆರ್ಥಿಕ ಸಾಮರ್ಥ್ಯ ಆಧರಿಸಿ ಮಗು ಸುಪರ್ದಿ ನಿರ್ಧರಿಸಲಾಗುವುದಿಲ್ಲ-ಹೈಕೋರ್ಟ್ ಆದೇಶ
- Finance ನೆಸ್ಲೆಯ ಸೆರೆಲಾಕ್ ಶಿಶು ಹಾಲಿನಲ್ಲಿ ಸಕ್ಕರೆ ಅಂಶ ಪತ್ತೆ: ತನಿಖಾ ವರದಿಯಲ್ಲಿ ಬಹಿರಂಗ
- Technology ಬೋರಿಂಗ್ ಫೋನ್ಗಾಗಿ ಕೈಜೋಡಿಸಿದ HMD, ಹೈನೆಕೆನ್ ಮತ್ತು ಬೊಡೆಗಾ! ಯಾತಕ್ಕಾಗಿ ಈ ಫೋನ್?
- Lifestyle ಆಕಾಶದಲ್ಲಿ ಮತ್ತೆ ಕಾಣಿಸಿಕೊಂಡ ವಿಚಿತ್ರ ವಸ್ತು.! ಸ್ಪಷ್ಟನೆ ಬೇಕೆಂದ ನಿವಾಸಿಗಳು..!
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಲಿವುಡ್ ತಾರೆ ಕಾಜೋಲ್ ಬಳೆ ಕದ್ದ ಠಕ್ಕ ಸಿಕ್ಕ
ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ಅವರ ಅರ್ಧಾಂಗಿ ಕಾಜೋಲ್ ದಂಪತಿಗಳ ಜುಹೂ ಬಂಗಲೆಯಲ್ಲಿ ಚಿನ್ನದ ಬಳೆಗಳು ಕಳುವಾಗಿದ್ದವು. ಈ ಬಳೆಗಳನ್ನು ಕದ್ದ ಠಕ್ಕರು ಸಿಕ್ಕಿಬಿದ್ದಾರೆ. ಬಂಗಲೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ನೌಕರರೇ ಆ ಖತರ್ನಾಕ್ ಕಳ್ಳರು.
ಕಾಜೋಲ್ ದಂಪತಿಗಳ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಗಾಯತ್ರಿ ದೇವೇಂದ್ರ (22), ಸಂತೋಷ್ ಪಾಂಡೆ (33) ಬಳೆಗಳನ್ನು ಕದ್ದವರೆಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಕೊಟ್ಟ ಮಾಹಿತಿ ಹೀಗಿದೆ...ಕಳೆದ ಎರಡು, ಮೂರು ವರ್ಷಗಳಿಂದ ಗಾಯತ್ರಿ ದೇವೇಂದ್ರ, ಸಂತೋಷ್ ಪಾಂಡೆ ಎಂಬುವವರು ದೇವಗನ್ ಮನೆಯನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ.
ಆ ಬಳಿಕ ಕಾಜೋಲ್ ಅವರು ಜುಹೂ ಪೊಲೀಸ್ ಠಾಣೆಯಲ್ಲಿ ತಮ್ಮ ಚಿನ್ನದ ಬಳೆಗಳು ಕಳುವಾಗಿರುವ ಬಗ್ಗೆ ದೂರು ನೀಡಿದ್ದರು. ಸರಿಸುಮಾರು ರು.5 ಲಕ್ಷ ಬೆಲೆಬಾಳುವ 17 ಬಳೆಗಳು ಕಾಣೆಯಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಬೀರುವಿನಲ್ಲಿದ್ದ ಆಭರಣಗಳ ಕಪಾಟಿನಿಂದ ಬಳೆಗಳನ್ನು ಅಪಹರಿಸಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕೇಸು ನಮೂದಿಸಿಕೊಂಡಿದ್ದರು. ಮನೆಯ ನೌಕರರು, ಅನುಮಾನಿತರನ್ನು ವಿಚಾರಣೆ ನಡೆಸಿದರು. ಮನೆಯ ನೌಕರರ ಪಾಲಿಗ್ರಾಫಿ ಪರೀಕ್ಷೆ ಮಾಡಿದ ಮೇಲೆ ಇವರಿಬ್ಬರೂ ಸಿಕ್ಕಿಬಿದ್ದಿದ್ದಾರೆ.
ವಿಚಾರಣೆ ಬಳಿಕ ಕದ್ದಿರುವುದನ್ನು ದೇವೇಂದ್ರ ಹಾಗೂ ಸಂತೋಷ್ ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ನಾಲ್ಕು ಬಳೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಬಳೆಗಳನ್ನು ಕರಗಿಸಲಾಗಿದೆ. ಅಂದಹಾಗೆ ಅಜಯ್ ದೇವಗನ್ ಮನೆಯಲ್ಲಿ ಕಳ್ಳತನ ನಡೆಯುತ್ತಿರುವುದು ಇದು ಎರಡನೇ ಬಾರಿ. 2008ರಲ್ಲಿ ಒಮ್ಮೆ ಮನೆಯಲ್ಲಿ ಆಭರಣಗಳು ಕಳುವಾಗಿದ್ದವು. ಆಗಲೂ ಮನೆಯ ನೌಕರನೇ ಕದ್ದಿದ್ದ. (ಏಜೆನ್ಸೀಸ್)