Don't Miss!
- News ಆಕ್ಸಿಸ್ ಬ್ಯಾಂಕ್ಗೆ ಬರೋಬ್ಬರಿ 7,129 ಕೋಟಿ ರೂಪಾಯಿ ಲಾಭ!
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿಗಾಗಿ 'ಬಜೆಟ್' ಹೆಚ್ಚಿಸಲು ಸಿದ್ಧ, ಆದರೆ ಷರತ್ತು ಅನ್ವಯ ಎಂದಿದ್ದ ನಿರ್ಮಾಪಕ
ಚಿತ್ರರಂಗದಲ್ಲಿ ಒಳಿತು ಮತ್ತು ಕೆಡಕು ಎರಡೂ ಇವೆ. ಅನೇಕ ನಟಿಯರು ತಾವು ಎದುರಿಸಿದ ಸಂಕಟಗಳ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಕಾಸ್ಟಿಂಗ್ ಕೌಚ್ ಬಗ್ಗೆ ಆಗಾಗ್ಗೆ ಮಾತನಾಡುವ ಧೈರ್ಯವನ್ನು ನಟಿಯರು ಪ್ರದರ್ಶಿಸುತ್ತಿರುತ್ತಾರೆ. ಆದರೆ ತಮಗೆ ಕಿರುಕುಳ ನೀಡಿದ ವ್ಯಕ್ತಿಯ ಹೆಸರು ಬಾಯಿಬಿಡಲು ಅವರಿಗೆ ಸಾಧ್ಯವಾಗುವುದಿಲ್ಲ. ಏಕೆಂದರೆ ಅದು ತಮ್ಮ ವೃತ್ತಿ ಬದುಕಿಗೇ ಕುತ್ತು ತರುತ್ತದೆ ಎಂಬ ಭಯ.
'ಟಿವಿಎಫ್ ಟ್ರಿಪ್ಲಿಂಗ್', 'ಫೋರ್ ಮೋರ್ ಶಾಟ್ಸ್ ಪ್ಲೀಸ್' ಸೇರಿದಂತೆ ಕೆಲವು ಪ್ರಸಿದ್ಧ ವೆಬ್ ಸೀರೀಸ್ಗಳಲ್ಲಿ ನಟಿಸಿರುವ ಮಾನ್ವಿ ಗಗ್ರೂ ಇಂತಹದೇ ಕೆಟ್ಟ ಅನುಭವವನ್ನು ತಾವು ಎದುರಿಸಿದ್ದಾಗಿ ಹೇಳಿಕೊಂಡಿದ್ದಾರೆ. ವೆಬ್ ಸೀರೀಸ್ ಒಂದರಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಕಾಂಪ್ರೊಮೈಸ್ ಮಾಡಿಕೊಳ್ಳುವಂತೆ ಹೇಳಿದ್ದರೆಂಬ ಆಘಾತಕಾರಿ ಮಾಹಿತಿ ಹೊರಗೆಡವಿದ್ದಾರೆ. ಮುಂದೆ ಓದಿ..
ಮತ್ತೊಂದು ಚಿತ್ರಕ್ಕೆ ಪವನ್ ಕಲ್ಯಾಣ್ ಸಹಿ; ಕನ್ನಡ ಮೂಲದ ನಟಿ ನಾಯಕಿ?
ವೆಬ್ ಸೀರೀಸ್ನಲ್ಲಿ ನಟಿಸಲು ಆಫರ್
ವೆಬ್ ತಾಣವೊಂದಕ್ಕೆ ಇತ್ತೀಚಿಗೆ ಸಂದರ್ಶನ ನೀಡಿದ್ದ 34 ವರ್ಷದ ನಟಿ ಮಾನ್ವಿ ಗಗ್ರೂ, ತಮಗೆ ಕಳೆದ ವರ್ಷ ಅನಾಮಿಕ ಸಂಖ್ಯೆಯೊಂದರಿಂದ ಕರೆ ಬಂದಿತ್ತು. ವೆಬ್ ಸೀರೀಸ್ ಒಂದರಲ್ಲಿ ನಟಿಸುವಂತೆ ಆಫರ್ ನೀಡಿದ್ದರು. ಆಗ ಮಾನ್ವಿ, ತಮಗೆ ಬಜೆಟ್ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂದು ತಿಳಿಸಿದ್ದರು. ಆಗ ಆ ನಿರ್ಮಾಪಕ, ಬಜೆಟ್ಅನ್ನು ಮೂರು ಪಟ್ಟು ಹೆಚ್ಚಿಸುತ್ತೇನೆ, ಆದರೆ ಒಂದು ಷರತ್ತು ಅನ್ವಯ ಎಂದಿದ್ದರು.
ತೆಲುಗು ಚಿತ್ರರಂಗದ ಅನಿಷ್ಟವೊಂದರ ಬಗ್ಗೆ ಅನುಷ್ಕಾ ಶೆಟ್ಟಿ ಹೇಳಿಕೆ
ಮೊದಲು ಕಥೆ ಹೇಳಿ ಎಂದೆ
'ಅವರು ನನಗೆ ಬಜೆಟ್ ಬಗ್ಗೆ ಹೇಳಿದರು. ಆಗ ನಾನು ಇಲ್ಲ ಸಾಧ್ಯವಾಗದು. ಇದು ತೀರಾ ಕಡಿಮೆಯಾಯಿತು. ಅದಿರಲಿ, ನಾವೇಕೆ ಬಜೆಟ್ ಬಗ್ಗೆ ಮಾತನಾಡುತ್ತಿದ್ದೇವೆ? ಮೊದಲು ನನಗೆ ಕಥೆ ಹೇಳಿ. ನನಗೆ ಆಸಕ್ತಿ ಇದ್ದರೆ ಮಾತ್ರ ಮತ್ತು ನಿಮಗೂ ನನ್ನನ್ನು ಚಿತ್ರದಲ್ಲಿ ಹಾಕಿಕೊಳ್ಳಬೇಕೆಬ ಆಸಕ್ತಿ ಇದ್ದರೆ ನಾವು ಸಂಭಾವನೆ, ಡೇಟ್ಸ್ ಮುಂತಾದವುಗಳ ಬಗ್ಗೆ ಮಾತನಾಡೋಣ' ಎಂದು ಹೇಳಿದ್ದಾಗಿ ಮಾನ್ವಿ ತಿಳಿಸಿದ್ದಾರೆ.
ಮೂರು ಪಟ್ಟು ಹಣ ಕೊಡುತ್ತೇನೆ...
'ನಾವು ಬಜೆಟ್ ಓಕೆ ಅನಿಸಿದರೆ ಮುಂದುವರಿಯಬಹುದು ಎಂಬ ಕಾರಣಕ್ಕೆ ಜನರನ್ನು ಕೇಳುತ್ತಿದ್ದೇವೆ ಎಂದರು. ನಾನು ಬಜೆಟ್ ಕಡಿಮೆಯಾಯಿತು, ಆಗುವುದಿಲ್ಲ ಎಂದಿದ್ದಕ್ಕೆ, ಮರು ಮಾತಿನಲ್ಲಿಯೇ ಬಜೆಟ್ಅನ್ನು ಮೂರು ಪಟ್ಟು ಹೆಚ್ಚಿಸುವುದಾಗಿ ಹೇಳಿದರು. ನಾನು ಇಷ್ಟು ಪ್ರಮಾಣದ ಹಣವನ್ನೂ ನಿಮಗೆ ನೀಡಬಲ್ಲೆ. ಆದರೆ ಅದಕ್ಕೆ ನೀವು ಕೆಲವು ಕಾಂಪ್ರೊಮೈಸ್ ಮಾಡಿಕೊಳ್ಳಬೇಕಾಗುತ್ತದೆ' ಎಂದಿದ್ದಾಗಿ ವಿವರಿಸಿದ್ದಾರೆ.
ಅವಕಾಶ ಕೊಡಲು ಹಾಸಿಗೆ ಹಂಚಿಕೋ ಎಂದು ಕರೆದಿದ್ದ ನಿರ್ದೇಶಕ: ಕರಾಳ ಅನುಭವ ಬಿಚ್ಚಿಟ್ಟ ನಟಿ
ಮೀ ಟೂ ಚಳವಳಿ ಬಳಿಕವೂ ಬದಲಾಗಿಲ್ಲ
ಈ ಫೋನ್ ಕರೆಯಿಂದ ಮಾನ್ವಿ ಬಹಳ ಅಪ್ಸೆಟ್ ಆಗಿದ್ದರಂತೆ. ಮೀ ಟೂ ಚಳವಳಿ ನಡೆದ ಬಳಿಕವೂ ಉದ್ಯಮದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಅವರಿಗೆ ಬೇಸರ ತಂದಿದೆ. 'ನನ್ನನ್ನು ಯಾವುದು ರೊಚ್ಚಿಗೆಬ್ಬಿಸಿತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಆತನನ್ನು ನಾನು ಬೈಯತೊಡಗಿದೆ. ಫೋನಿಡು ಎಷ್ಟು ಧೈರ್ಯ ನಿನಗೆ. ಪೊಲೀಸರಿಗೆ ದೂರು ನೀಡುತ್ತೇನೆ ಎಂದೆ. ನಿಜಕ್ಕೂ ನನಗೆ ಹುಚ್ಚು ಹಿಡಿದಂತೆ ಆಗಿತ್ತು' ಎಂದಿದ್ದಾರೆ.