Don't Miss!
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಲಿವುಡ್ ಗೆ ಚೆಂಗನೆ ನೆಗೆದ ಬೆಳಗಾವಿ ಚಿಗರೆ ಲಕ್ಷ್ಮಿ ರೈ
ಇಷ್ಟು ವರ್ಷಗಳ ಕಾಲ ದಕ್ಷಿಣದಲ್ಲೇ ಸುತ್ತು ಹೊಡೆಯುತ್ತಿದ್ದ ಬೆಳಗಾವಿ ಚೆಲುವೆ ಲಕ್ಷ್ಮಿ ರೈ (ಹೊಸ ಹೆಸರು ರಾಯ್ ಲಕ್ಷ್ಮಿ) ಇದೀಗ ಬಾಲಿವುಡ್ ಗೆ ಚೆಂಗನೆ ನೆಗದಿದ್ದಾರೆ. ಅದರಲ್ಲೂ ಯಶಸ್ವಿ ನಿರ್ದೇಶಕ ಎಂದು ಗುರುತಿಸಿಕೊಂಡಿರುವ ತಮಿಳಿನ ಎ ಆರ್ ಮುರುಗದಾಸ್ ಅವರ ಚಿತ್ರದಲ್ಲಿ ಎಂಬುದು ವಿಶೇಷ.
ಮುರುಗದಾಸ್ ಅವರ 'ಅಕಿರಾ' ಚಿತ್ರದಲ್ಲಿ ರಾಯ್ ಲಕ್ಷ್ಮಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ. ಪೂರ್ಣ ಪ್ರಮಾಣದ ನಾಯಕಿಯಾಗಿ ಸೋನಾಕ್ಷಿ ಸಿನ್ಹಾ ಇದ್ದು, ರಾಯ್ ಅತಿಥಿ ಪಾತ್ರಕ್ಕೆ ಸೀಮಿತವಾಗಿದ್ದಾರೆ. ಈ ಬಗ್ಗೆ ಲಕ್ಷ್ಮಿ ರೈ ಅವರಿಗೆ ಬೇಸರವೇನೂ ಇಲ್ಲ. ['ಶೃಂಗಾರ' ತಾರೆ ಲಕ್ಷ್ಮಿ ರೈ ಕುರಿತ ಕೆಲವು ಸಂಗತಿಗಳು]
ಅವರು ಮಾತನಾಡುತ್ತಾ, "ಈ ಚಿತ್ರದ ಅತಿಥಿ ಪಾತ್ರದ ಮೂಲಕ ತಾನು ಬಾಲಿವುಡ್ ಗೆ ಅಡಿಯಿಡುತ್ತಿದ್ದೇನೆ. ಆದರೆ ಬಹಳ ಗಮನಾರ್ಹ ಪಾತ್ರ. ಹಾಗಾಗಿಯೇ ಈ ಪಾತ್ರವನ್ನು ಅಂಗೀಕರಿಸಿದೆ. ಚಿತ್ರದಲ್ಲಿ ಬೋಲ್ಡ್ ಆಗಿ ಕಾಣಿಸುತ್ತಿದ್ದೇನೆ. ಇದುವರೆಗೂ ನಾನು ಮಾಡದಂತಹ ಪಾತ್ರವಿದು" ಎಂದಿದ್ದಾರೆ.
ಕಾಸ್ಟಿಂಗ್ ನಿರ್ದೇಶಕರೊಬ್ಬರು ನನ್ನ ಹೆಸರನ್ನು ಸೂಚಿಸಿದರಂತೆ, ಮುರುಗದಾಸ್ ಅವರಿಂದ ಕರೆಬಂತು. ಅವರ ಚಿತ್ರಗಳಲ್ಲಿ ಅಭಿನಯಿಸಬೇಕು ಎಂಬುದು ಪ್ರತಿಯೊಬ್ಬರ ಕನಸು. ಪಾತ್ರದ ಬಗ್ಗೆ ಅವರು ಹೇಳಿದಾಗ ನಾನು ನೋ ಹೇಳಲು ಸಾಧ್ಯವಾಗಲೇ ಇಲ್ಲ ಎನ್ನುತ್ತಾರೆ ಲಕ್ಷ್ಮಿ. [ಫಿಲ್ಮಿಬೀಟ್ ಕನ್ನಡ ಉಚಿತ ಸುದ್ದಿಸಾರಂಗಿ]
ದಕ್ಷಿಣದ ಚಿತ್ರಗಳಿಗೆ ಹೋಲಿಸಿದರೆ ಬಾಲಿವುಡ್ ಚಿತ್ರಗಳು ಭಿನ್ನವಾಗಿರುತ್ತವೆ ಎನ್ನುವ ರಾಯ್ ಲಕ್ಷ್ಮಿ ಅವರ ಪಾಲಿಗೆ 'ಅಕಿರಾ' ಚಿತ್ರ ಮೊದಲ ಮೆಟ್ಟಿಲು. ಮುಂದೆ ಈ ಚಿತ್ರ ಅವರಿಗೆ ಬಾಲಿವುಡ್ ನಲ್ಲಿ ಒಳ್ಳೆಯ ಆಫರ್ ಗಳನ್ನು ತಂದುಕೊಟ್ಟರೂ ಅಚ್ಚರಿಯಿಲ್ಲ. (ಏಜೆನ್ಸೀಸ್)