Don't Miss!
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಫಿ ಕಪ್ ನಲ್ಲಿ ಮಾನ ಮುಚ್ಚಿಕೊಂಡ ಶೆರ್ಲಿನ್!
ಬಾಲಿವುಡ್ ನಲ್ಲಿ ಬಿಚ್ಚಮ್ಮ ಎಂದೇ ಖ್ಯಾತಳಾಗಿರುವ ನಟಿ ಶೆರ್ಲಿನ್ ಚೋಪ್ರಾ ಮತ್ತೊಮ್ಮೆ ತಮ್ಮ ದೇಹಸಿರಿಯನ್ನು ಅನಾವರಣಗೊಳಿಸಿದ್ದಾರೆ. ಈ ಬಾರಿ ಅವರ ಮಾನ ಮುಚ್ಚಿದ್ದು ಕೇವಲ ಒಂದೇ ಒಂದು ಕಾಫಿ ಕಪ್ ! ಹೌದು ಇದು ಅಚ್ಚರಿಯಾದರೂ ನಿಜ. ಬೇಕಿದ್ದರೆ ಚಿತ್ರಗಳನ್ನು ನೋಡಿ. ನಿಮ್ಮ ಕಣ್ಣನ್ನು ನೀವೇ ನಂಬಲ್ಲ!
ಸದಾ ಸುದ್ದಿಯಲ್ಲಿ ಇರಬೇಕೆಂದರೆ ಶೆರ್ಲಿನ್ ಈ ರೀತಿ ಯಾವುದೋ ಒಂದು ಅಡ್ಡದಾರಿ ಹಿಡಿಯುತ್ತಲೇ ಬಂದಿದ್ದಾರೆ. ಈ ಬಾರಿ ಅವರ ತಲೆಗೆ ಹೊಳೆದದ್ದು ಕಾಫಿ ಕಪ್. ಅಷ್ಟೇ ಅದನ್ನೇ ತಮ್ಮ ಮಾನ ಕಾಪಾಡಿಕೊಳ್ಳಲು ಬಳಸಿದ್ದಾರೆ. ಈ ಮೂಲಕ ಕಾಫಿ ಕಪ್ ನಲ್ಲೂ ಮಹಿಳೆಯರು ಪ್ರಾಣ ಹೇಗೋ ಗೊತ್ತಿಲ್ಲ, ಆದರೆ ಮಾನವನ್ನಂತೂ ಕಾಪಾಡಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಕಾಲು ಮೇಲೆ ಕಾಲು ಹಾಕಿಕೊಂಡು ಆ ಭಾಗದಲ್ಲೊಂದು ಕಪ್ ಇಟ್ಟ ಹೊಸ ಫೋಟೋವನ್ನು ಹರಿಯಬಿಟ್ಟಿದ್ದಾರೆ. ಈ ರೀತಿಯ ಫೋಟೋಗಳು ಶೆರ್ಲಿನ್ ಅವರಿಗೆ ಹೊಸದಲ್ಲ ಬಿಡಿ. ಈ ಹಿಂದೆ ಹುಟ್ಟುಡುಗೆಯಲ್ಲೇ ದರ್ಶನ ನೀಡಿ ತಮ್ಮ ಅಭಿಮಾನಿಗಳನ್ನು ಹಳ್ಳಕ್ಕೆ ತಳ್ಳಿದ್ದರು.
ಪಡ್ಡೆಗಳ ಉಸಿರುಗಟ್ಟುವಂತೆ ಮಾಡಿದ ಶೆರ್ಲಿನ್
ಈ ಬಾರಿ ಏಕ್ ದಂ ಈ ರೀತಿ ಭಂಗಿಯಲ್ಲಿ ಕಾಣಿಸಿಕೊಂಡು ಪಡ್ಡೆಗಳು ಉಕ್ಕಿರಿಬಿಕ್ಕಿರಿಯಾಗಿ ಉಸಿರುಗಟ್ಟುವಂತೆ ಮಾಡಿದ್ದಾರೆ.
ಕಾಫಿ ಕಪ್ ಮೂಲಕ ಆ ಭಾಗ ಕವರ್ ಮಾಡಿದ ಶೆರ್ಲಿನ್
ತಮ್ಮ ಉತ್ತರ ಪ್ರದೇಶವನ್ನು ತಲೆಗೂದಲಿಂದ ಮುಚ್ಚಿಕೊಂಡಿದ್ದು, ಮಧ್ಯಪ್ರದೇಶವನು ಹಾಗೆಯೇ ಗಾಳಿಗೆ ಬಿಟ್ಟು ಬಂಗಾಳ ಕೊಲ್ಲಿಯ ಮೇಲೆ ಮೇಲೊಂದು ಕಾಫಿ ಕಪ್ ಇಡುವ ಮೂಲಕ ಆ ಭಾಗವನ್ನು ಕವರ್ ಮಾಡಿದ್ದಾರೆ.
ಪಾರದರ್ಶಕ ಉಡುಗೆಯಲ್ಲೂ ದರ್ಶನ
66ನೇ ಕ್ಯಾನೆ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಶೆರ್ಲಿನ್ ಪಾರದರ್ಶಕ ಉಡುಗೆಯಲ್ಲಿ ದರ್ಶನ ನೀಡಿದ್ದರು. ಅದಾದ ಬಳಿಕ ಈಗ ಈ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಕಾಮಸೂತ್ರ 3dಯಲ್ಲೂ ಇದೇ ಅವತಾರ
ಇನ್ನು ಶೆರ್ಲಿನ್ ಚೋಪ್ರಾ ಕಾಮಸೂತ್ರ 3d ಚಿತ್ರದಲ್ಲೂ ಅಭಿನಯಿಸಿದ್ದಾರೆ. ಈ ಚಿತ್ರ ಈಗಾಗಲೆ ಎಲ್ಲರ ನಿದ್ದೆಗೆಡಿಸಿರುವುದು ಗೊತ್ತೇ ಇದೆ.
ವಾತ್ಸಾಯನ ಕಾಮಸೂತ್ರ ಗ್ರಂಥವೇ ಇದಕ್ಕೆ ಸ್ಫೂರ್ತಿ
ವಾತ್ಸಾಯನ ಬರೆದ ಭಾರತದ ಅತ್ಯಂತ ಪ್ರಾಚೀನ ಗ್ರಂಥ 'ಕಾಮಸೂತ್ರ' ಮೂಲಾಧಾರವಾಗಿಟ್ಟುಕೊಂಡು ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ.
ರುಪೇಶ್ ಪೌಲ್ ಆಕ್ಷನ್ ಕಟ್ ಹೇಳಿರುವ ಚಿತ್ರ
ರುಪೇಶ್ ಪೌಲ್ ಆಕ್ಷನ್ ಕಟ್ ಹೇಳಲಿರುವ ಚಿತ್ರ. 2012ರ ಕ್ಯಾನೆ ಚಿತ್ರೋತ್ಸವದಲ್ಲಿ ಈ ಚಿತ್ರವನ್ನು ಪ್ರಕಟಿಸಲಾಯಿತು.