Don't Miss!
- Finance ರಿಲಯನ್ಸ್ ಪವರ್ ಕಂಪೆನಿಯಲ್ಲಿ ಅನಿಲ್ ಅಂಬಾನಿಯ ಜೆಎಸ್ಡಬ್ಲ್ಯುನಿಂದ 132 ಕೋಟಿ ರೂ.ಗಳ ಹೂಡಿಕೆ
- News Oppo: ಓಪ್ಪೋ ಕಂಪನಿಯ ಎರಡು ಫೋನ್ಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸಿದ್ಧ
- Sports ದಿನೇಶ್ ಕಾರ್ತಿಕ್ ಟಿ20 ವಿಶ್ವಕಪ್ಗೆ ಆಯ್ಕೆಯಾಗಬಾರದು; ಇರ್ಫಾನ್ ಪಠಾಣ್ ಹೀಗೆ ಹೇಳಿದ್ದೇಕೆ?
- Technology Smart TVs: ವಿಶೇಷ ಫೀಚರ್ಸ್ ಆಯ್ಕೆಯ 10000ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್ ಟಿವಿಗಳಿವು!
- Lifestyle ಹಾಲು ಜೇನಿನಂತಿರುವ ಸಂಬಂಧ ಹಾಳಾಗುತ್ತಿರುವ ಲಕ್ಷಣಗಳಿವು..!
- Automobiles ಪೆಟ್ರೋಲ್ ಎಂಜಿನ್ಗಳಲ್ಲಿ ಮಾತ್ರ ಬರಲಿದೆ ರೆನಾಲ್ಟ್ನ ಬ್ರಹ್ಮಾಸ್ತ್ರ ಡಸ್ಟರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿಯ ಮೇಲೆ ಅತ್ಯಾಚಾರ ಕೇಸ್: ಬಾಲಿವುಡ್ ನಟನಿಗೆ ಮಧ್ಯಂತರ ರಿಲೀಫ್
ಬಾಲಿವುಡ್ ನಟಿಯ ಮೇಲೆ ಅತ್ಯಾಚಾರವೆಸಗಿರುವ ಆರೋಪ ಎದುರಿಸುತ್ತಿರುವ ನಟ ಆದಿತ್ಯ ಪಾಂಚೋಲಿಗೆ ಮುಂಬೈ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಈ ಮೂಲಕ ಬಂಧನ ಭೀತಿಯಲ್ಲಿದ್ದ ನಟನಿಗೆ ಕೊಂಚ ರಿಲೀಫ್ ಸಿಕ್ಕಿದೆ. ಆಗಸ್ಟ್ 3ರ ವರೆಗೂ ಬಂಧಿಸುವ ಅಗತ್ಯವಿಲ್ಲ ಎಂದು ವಿಚಾರಣೆ ಬಳಿಕ ಕೋರ್ಟ್ ತಿಳಿಸಿದೆ.
ಆದಿತ್ಯ ಪಾಂಚೋಲಿ 2004 ರಿಂದ 2006ರ ವರೆಗೂ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಹಿಂದಿ ಚಿತ್ರರಂಗದ ಖ್ಯಾತ ನಟಿ ಆರೋಪ ಮಾಡಿದ್ದಾರೆ. 'ಮದ್ಯಪಾನ ಸೇವಿಸಿ ತನ್ನನ್ನು ದೈಹಿಕವಾಗಿ ಅನುಭವಿಸಲು ಪ್ರಯತ್ನಿಸಿದ್ದರು. ಕೆಲವು ಸಮಯದಲ್ಲಿ ತನ್ನ ಜೊತೆ ಸ್ನೇಹಪೂರ್ವಕವಾಗಿ ಇದ್ದ ಫೋಟೋಗಳನ್ನ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ, ದುಡ್ಡಿಗಾಗಿ ಪೀಡಿಸುತ್ತಿದ್ದ' ಎಂದು ಆ ನಟಿ ದೂರು ನೀಡಿದ್ದರು.
ರಾಧಿಕಾ ಆಪ್ಟೆಯ ಹಸಿಬಿಸಿ ದೃಶ್ಯ ಲೀಕ್: ಸಮಾಜದ ಮನಸ್ಥಿತಿ ಪ್ರಶ್ನಿಸಿದ ನಟಿ
'ಈ ಸಂಬಂಧ ಈ ಹಿಂದೆಯೊಮ್ಮೆ ಪೊಲೀಸ್ ದೂರು ನೀಡಿದ್ದೆ. ಆ ಸಮಯದಲ್ಲಿ ಪೊಲೀಸರು ಆದಿತ್ಯ ಪಾಂಚೋಲಿ ವಿರುದ್ಧ ಯಾವುದೇ ಕ್ರಮ ಜರುಗಿಸದೇ ಬಿಟ್ಟು ಕಳುಹಿಸಿದರು. ಈ ಘಟನೆ ಆದ ಬಳಿಯೂ ಆ ನಟ ತನ್ನ ಸ್ವಭಾವವನ್ನ ಬದಲಾಯಿಸಿಕೊಂಡಿಲ್ಲ. ಆತನಿಂದ ಮತ್ತೆ ಮತ್ತೆ ಬೆದರಿಕೆ ಬರುತ್ತಿದ್ದ ಕಾರಣ ನಾನು ಮತ್ತೆ ಪೊಲೀಸ್ ದೂರು ನೀಡಿದ್ದೇನೆ' ಎಂದು ಆ ನಟಿ ಉಲ್ಲೇಖಿಸಿದ್ದಾರೆ.
ಆ ನಟಿ ನೀಡಿದ ದೂರಿನ ಅನ್ವಯ ಮುಂಬೈ ಪೊಲೀಸರು ಆದಿತ್ಯ ಪಾಂಚೋಲಿ ವಿರುದ್ಧ ಹಲವು ಸೆಕ್ಷನ್ ಗಳ ಅಡಿ ಎಫ್.ಐ.ಆರ್ ದಾಖಲಿಸಿದ್ದರು. ಐಪಿಸಿ ಸೆಕ್ಷನ್ 376 (ಅತ್ಯಾಚಾರ), ಸೆಕ್ಷನ್ 378, ಸೆಕ್ಷನ್ 384 (ಸುಲಿಗೆ) ಸೇರಿದಂತೆ 341, 342, 323 ಹಾಗೂ 506 ಸೆಕ್ಷನ್ ಅಡಿ ದೂರು ದಾಖಲಿಸಿಕೊಂಡಿದ್ದಾರೆ.
ಟಿಕ್ ಟಾಕ್ ನಲ್ಲಿ ಕೋಮು ಪ್ರಚೋದನೆ ವಿಡಿಯೋ ಮಾಡುತ್ತಿದ್ದ ಬಿಗ್ ಬಾಸ್ ನಟ ಅರೆಸ್ಟ್
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಿತ್ಯ ಪಾಂಚೋಲಿ ಪ್ರತಿಕ್ರಿಯೆ ನೀಡಿದ್ದರು. ''ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಾಗಿದೆ. ನಾನು ತಪ್ಪು ಮಾಡಿಲ್ಲ. ಅದಕ್ಕೆ ನನ್ನ ಬಳಿ ಸಾಕ್ಷಿಗಳಿವೆ. ಎಫ್.ಐ.ಆರ್ ದಾಖಲಾದ ಬಳಿಕ ನನ್ನನ್ನು ಪೊಲೀಸರು ಸಂಪರ್ಕಿಸಿದ್ದರು. ಅವರ ವಿಚಾರಣೆಗೆ ನಾನು ಎಲ್ಲ ರೀತಿಯಲ್ಲೂ ಸ್ಪಂದಿಸಿದ್ದೇನೆ'' ಎಂದು ತಿಳಿಸಿದ್ದಾರೆ.
ಸದ್ಯ ಈ ಪ್ರಕರಣದ ವಿಚಾರಣೆ ನಡೆಸಿದ್ದ ಮುಂಬೈ ಕೋರ್ಟ್ ನಟ ಆದಿತ್ಯ ಪಾಂಚೋಲಿ ಅವರಿಗೆ ಆಗಸ್ಟ್ 3ರ ವರೆಗೂ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.