Don't Miss!
- News Neha Hiremath: ನೇಹಾ ಹಿರೇಮಠ್ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ನೀಡಲು ವಿಎಚ್ಪಿ ಒತ್ತಾಯ
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕರಣ್ ಬಳಿಕ ಶಾರುಖ್ ಸಂಸ್ಥೆಯಿಂದನೂ ಕಾರ್ತಿಕ್ ಆರ್ಯನ್ ಔಟ್: ಕಾರಣವೇನು?
ಬಾಲಿವುಡ್ ಸ್ಟಾರ್ ನಟ ಕಾರ್ತಿಕ್ ಆರ್ಯನ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ಕರಣ್ ಜೋಹರ್ ಧರ್ಮ ಸಂಸ್ಥೆಯಿಂದ ಬ್ಯಾನ್ ಆದ ಬೆನ್ನಲ್ಲೇ ಈಗ ಶಾರುಖ್ ಖಾನ್ ಅವರ ರೆಡ್ ಚಿಲ್ಲಿಸ್ ಬ್ಯಾನರ್ ನಿಂದನೂ ಹೊರದಬ್ಬಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಸುದ್ದಿ ಕೇಳಿ ಕಾರ್ತಿಕ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಟ್ಟಿಗೆದ್ದಿದ್ದಾರೆ.
ಕರಣ್ ಜೋಹರ್ ನಿರ್ಮಾಣದ ದೋಸ್ತಾನ-2 ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಆದರೆ ಸೃಜನಶೀಲ ಭಿನ್ನಾಭಿಪ್ರಾಯ ಎನ್ನುವ ಕಾರಣ ಕೇಳಿ ಕಾರ್ತಿಕ್ ಚಿತ್ರದ ಭಾಗವಾಗಿಲ್ಲ ಎಂದು ಧರ್ಮ ಸಂಸ್ಥೆ ಹೇಳಿತ್ತು. ಆದರೆ ಮೂಲಗಳ ಪ್ರಕಾರ ಕಾರ್ತಿಕ್ ಗೆ ವೃತ್ತಿಪರತೆ ಇಲ್ಲ ಎಂದು ಆರೋಪಿಸಿ ಸಿನಿಮಾದಿಂದ ಹೊರಹಾಕಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು.
ದೋಸ್ತಾನ-2 ಚಿತ್ರದಿಂದ ಮಾತ್ರವಲ್ಲದೇ ಧರ್ಮ ಸಂಸ್ಥೆಯಿಂದನೇ ಶಾಶ್ವತವಾಗಿ ಹೊರಗಿಡಲಾಗಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಇದೀಗ ಶಾರುಖ್ ಸಂಸ್ಥೆಯಿಂದನೂ ಕಾರ್ತಿಕ್ ನನ್ನು ಹೊರದಬ್ಬಲಾಗಿದೆ. ಮುುಂದೆ ಓದಿ...
ಶಾರುಖ್ ನಿರ್ಮಾಣದ ಸಿನಿಮಾದಿಂದ ಕಾರ್ತಿಕ್ ಔಟ್
ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ನಿರ್ಮಾಣದ 'ಗುಡ್ ಬೈ ಫ್ರಡ್ಡಿ' (ತಾತ್ಕಾಲಿಕ ಹೆಸರು) ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ನಟಿಸುತ್ತಿದ್ದರು. ಚಿತ್ರಕ್ಕೆ ಅಜಯ್ ಬಹ್ಲ್ ಆಕ್ಷನ್ ಕಟ್ ಹೇಳುತ್ತಿದ್ದು, ಕತ್ರಿನಾ ಕೈಫ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೀಗ ಚಿತ್ರದಿಂದ ಕಾರ್ತಿಕ್ ಆರ್ಯನ್ ಔಟ್ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ಚಿತ್ರತಂಡದ ಮೂಲ ಹೇಳುವುದೇನು?
ಈ ಬಗ್ಗೆ ಆಂಗ್ಲ ವೆಬ್ ಪೋರ್ಟಲ್ ಬಾಲಿವುಡ್ ಹಂಗಾಮಗೆ ಚಿತ್ರತಂಡದ ಮೂಲ ನೀಡಿದ ಮಾಹಿತಿ ಪ್ರಕಾರ, 'ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ನಿರ್ಮಾಣದ, ಅಜಯ್ ಬಹ್ಲ್ ನಿರ್ದೇಶನದ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ನಟಿಸಬೇಕಿತ್ತು. ಚಿತ್ರೀಕರಣ ಪ್ರಾರಂಭವಾಗುವ ಮೊದಲೇ ಈ ಯೋಜನೆಯಿಂದ ಹೊರನಡೆದಿದ್ದಾರೆ' ಎಂದು ಹೇಳಿದ್ದಾರೆ.
ಸೃಜನಶೀಲ ಭಿನ್ನಾಭಿಪ್ರಾಯ ಎನ್ನುತ್ತಿದ್ದಾರೆ
ಕಾರ್ತಿಕ್ ಆರ್ಯನ್ ಮತ್ತು ನಿರ್ದೇಶಕ ಅಜಯ್ ಬಹ್ಲ್ ನಡುವೆ ಸೃಜನಶೀಲ ಭಿನ್ನಾಭಿಪ್ರಾಯ ಇದ್ದ ಕಾರಣ ಕಾರ್ತಿಕ್ ಆರ್ಯನ್ ಸಿನಿಮಾದಿಂದ ಹೊರನಡೆದಿರುವುದಾಗಿ ಹೇಳಿದ್ದಾರೆ. ಸ್ಕ್ರಿಪ್ಟ್ ನಲ್ಲಿ ಬದಲಾವಣೆ ಮಾಡಿದ ಬಳಿಕ ಕಾರ್ತಿಕ್ ಆರ್ಯನ್ ಅವರಿಗೆ ಇಷ್ಟವಾಗಿಲ್ಲ ಹಾಗಾಗಿ ಚಿತ್ರದಿಂದ ದೂರ ಸರಿದಿದ್ದಾರೆ ಎಂದು ಹೇಳಿದ್ದಾರೆ.
ಥ್ರಿಲ್ಲರ್ ಸಿನಿಮಾ ಬೇಡ ಎಂದ್ರಾ ಕಾರ್ತಿಕ್?
ಆದರೆ ಮತ್ತೊಂದು ಮೂಲದ ಪ್ರಕಾರ, ಕಾರ್ತಿಕ್ ಆರ್ಯನ್ ಎರಡು ವರ್ಷಗಳ ಹಿಂದಿಯೇ ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಇತ್ತೀಚಿಗೆ ಕೊರೊನಾ ಬಳಿಕ ಥ್ರಿಲ್ಲರ್ ಚಿತ್ರ ಧಮಾಕ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈ ಸಿನಿಮಾ ಬಳಿಕ ತಕ್ಷಣಕ್ಕೆ ಮತ್ತೊಂದು ಥ್ರಿಲ್ಲರ್ ಚಿತ್ರ ಮಾಡುವುದು ಬೇಡ, ವೃತ್ತಿ ಜೀವನಕ್ಕೆ ಸೂಕ್ತವಲ್ಲ ಎನ್ನುವ ಕಾರಣಕ್ಕೆ ಚಿತ್ರದಿಂದ ಹೊರಗುಳಿದಿದ್ದಾರೆ' ಎಂದು ಹೇಳಿದ್ದಾರೆ.
2 ಕೋಟಿ ರೂ. ವಾಪಸ್ ಮಾಡಿದ ಕಾರ್ತಿಕ್
ಆದರ ನಿಖರವಾದ ಕಾರಣ ಇನ್ನೂ ಬಹಿರಂಗವಾಗಿಲ್ಲ. ಈ ಬಗ್ಗೆ ಕಾರ್ತಿಕ್ ಆಗಲಿ ಅಥವಾ ರೆಡ್ ಚಿಲ್ಲೀಸ್ ಕಡೆಯಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಆದರೆ ಕಾರ್ತಿಕ್ ಚಿತ್ರಕ್ಕೆ ಒಪ್ಪಿಗೆ ನೀಡಲು ಪಡೆದಿದ್ದ ಸೈನಿಂಗ್ ಹಣ 2 ಕೋಟಿ ರೂ. ಅನ್ನು ವಾಪಸ್ ಮಾಡಿದ್ದಾರಂತೆ. ಸದ್ಯ ಕಾರ್ತಿಕ್ ಜಾಗಕ್ಕೆ ಮತ್ತೋರ್ವ ನಟನನ್ನು ಹುಡುಕುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇನ್ನೂ ದಾಸ್ತಾನ-2ಗೂ ಇನ್ನೂ ನಾಯಕ ಫಿಕ್ಸ್ ಆಗಿಲ್ಲ.
Recommended Video
ಅಭಿಮಾನಿಗಳ ಆಕ್ರೋಶ
ಕಾರ್ತಿಕ್ ಆರ್ಯನನ್ನು ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾದಿಂದ ಹೊರ ಹಾಕುತ್ತಿದ್ದಂತೆ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ಎರಡು ಸಂಸ್ಥೆ ಒಂದೇ ಕಾರಣ ಹೇಳಿ ಕಾರ್ತಿಕ್ ನನ್ನು ಹಾಕಿದೆ. ಇದನ್ನು ನಂಬಲು ಅಸಾಧ್ಯ, ಇದರ ಹಿಂದೆ ಬೇರೆ ಉದ್ದೇಶವಿದೆ ಎನ್ನುತ್ತಿದ್ದಾರೆ. ಕರಣ್ ಮತ್ತು ಶಾರುಖ್ ಸಂಸ್ಥೆ ಸುಳ್ಳು ಹೆಳುತ್ತಿದೆ ಎಂದು ಕಿಡಿ ಕಾರುತ್ತಿದ್ದಾರೆ.