Don't Miss!
- News ಹಿರಿಯೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ಪಲ್ಟಿ: NHAIನ ಆ ಒಂದು ಯಡವಟ್ಟಿನ ವಿರುದ್ಧ ಭುಗಿಲೆದ್ದ ಆಕ್ರೋಶ
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುತ್ರಿಯ ಕೈಹಿಡಿದುಕೊಂಡಿದ್ದೇ ತಪ್ಪಾ.? ಐಶ್ವರ್ಯಗೆ ಟ್ರೋಲಿಗರ ಕಾಟ ತಪ್ಪುತ್ತಿಲ್ಲ.!
ಪ್ರತಿಷ್ಟಿತ ಮೆರಿಲ್ ಸ್ಟ್ರೀಪ್ ಅವಾರ್ಡ್ ನ ಪಡೆದು ನಟಿ ಐಶ್ವರ್ಯ ರೈ ಬಚ್ಚನ್ ಮೊನ್ನೆಯಷ್ಟೇ ಅಮೇರಿಕಾದಿಂದ ವಾಪಸ್ ಆದರು. ಮುಂಬೈ ವಿಮಾನ ನಿಲ್ದಾಣಕ್ಕೆ ಐಶ್ವರ್ಯ ರೈ ಬಚ್ಚನ್ ಬಂದಿಳಿದ ಕೂಡಲೆ ಅವರ ಫೋಟೋಗಳನ್ನು ಕ್ಲಿಕ್ಕಿಸಲು ಕ್ಯಾಮರಾಗಳು ರೆಡಿ ಆಗಿದ್ದವು.
ಏರ್ ಪೋರ್ಟ್ ನಿಂದ ಹೊರಗೆ ಬರುವಾಗ ಪುತ್ರಿ ಆರಾಧ್ಯ ಬಚ್ಚನ್ ಕೈಯನ್ನ ತಾಯಿ ಐಶ್ವರ್ಯ ರೈ ಹಿಡಿದುಕೊಂಡಿದ್ದರು. ಇದನ್ನೇ ತಪ್ಪು ಅಂತಿದ್ದಾರೆ ನೆಟ್ಟಿಗರು.!
ಇದಕ್ಕಿದ್ದಂತೆ ಭಾವುಕರಾಗಿ ಕಣ್ಣೀರಿಟ್ಟ ನಟಿ ಐಶ್ವರ್ಯ ರೈ: ಕಾರಣ ಏನು.?
ಮಗಳ ಕೈಯನ್ನ ತಾಯಿ ಹಿಡಿದುಕೊಂಡರೆ ತಪ್ಪೇನು ಅಂತ ನೀವು ಕೇಳಬಹುದು. ಆದ್ರೆ ಇದೇ ಟ್ರೋಲಿಗರಿಗೆ ಅಸ್ತ್ರವಾಗಿರುವುದು ಶಾಕಿಂಗ್ ಸಂಗತಿ. ''ಆ ಪುಟ್ಟ ಹುಡುಗಿಯಲ್ಲಿ ಇರುವ ವಿಶ್ವಾಸವನ್ನ ಐಶ್ವರ್ಯ ಕಸಿದುಕೊಳ್ಳುತ್ತಿದ್ದಾರೆ. ಮಗಳನ್ನ ಐಶ್ವರ್ಯ ಅತಿಯಾಗಿ ಪ್ರೊಟೆಕ್ಟ್ ಮಾಡುತ್ತಿದ್ದಾರೆ'' ಅಂತೆಲ್ಲಾ ಕಾಮೆಂಟ್ ಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದೆ.
ಆರಾಧ್ಯಗಿಂತಲೂ ಕರೀನಾ ಪುತ್ರ ತೈಮೂರ್ ಗೆ ವಿಶ್ವಾಸ ಹೆಚ್ಚಿದೆ ಅಂತಲೂ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಯಾರು ಏನೇ ಕಾಮೆಂಟ್ ಮಾಡಿದರೂ, ಅದಕ್ಕೆ ಐಶ್ವರ್ಯ ರೈ ತಲೆ ಕಡೆಸಿಕೊಳ್ಳುವುದಿಲ್ಲ. ''ಮಗಳ ಸುರಕ್ಷತೆಯೇ ಮೊದಲ ಆದ್ಯತೆ'' ಅಂತಾರೆ ಐಶ್ವರ್ಯ ರೈ ಬಚ್ಚನ್.
ಮಗಳ ತುಟಿಗೆ ಐಶ್ವರ್ಯ ಮುತ್ತು ಕೊಟ್ಟಿದ್ದು ದೊಡ್ಡ ಪಾಪವೇ.?!
ಆರಾಧ್ಯ ತುಟಿಗೆ ತಾಯಿ ಐಶ್ವರ್ಯ ಮುತ್ತು ಕೊಟ್ಟಿದ್ದಾಗಲೂ, ನೆಟ್ಟಿಗರು ಹೀಗೆ ಛೀಮಾರಿ ಹಾಕಿದ್ದರು. ಈಗ ಕೈ ಹಿಡಿದುಕೊಂಡಿದ್ದೂ ತಪ್ಪು ಅಂತಿದ್ದಾರೆ ಟ್ರೋಲಿಗರು. ತಾಯಿಯಾಗಿ ಐಶ್ವರ್ಯ ಏನೇ ಮಾಡಿದ್ರೂ ಪಾಪವೇ.?