Don't Miss!
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- News ಎಸ್ಸಿ, ಎಸ್ಟಿ ಮೀಸಲಾತಿ ಮುಸ್ಲಿಮರಿಗೆ ಹಂಚಿಕೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುತ್ರಿಯ ಕೈಹಿಡಿದುಕೊಂಡಿದ್ದೇ ತಪ್ಪಾ.? ಐಶ್ವರ್ಯಗೆ ಟ್ರೋಲಿಗರ ಕಾಟ ತಪ್ಪುತ್ತಿಲ್ಲ.!
ಪ್ರತಿಷ್ಟಿತ ಮೆರಿಲ್ ಸ್ಟ್ರೀಪ್ ಅವಾರ್ಡ್ ನ ಪಡೆದು ನಟಿ ಐಶ್ವರ್ಯ ರೈ ಬಚ್ಚನ್ ಮೊನ್ನೆಯಷ್ಟೇ ಅಮೇರಿಕಾದಿಂದ ವಾಪಸ್ ಆದರು. ಮುಂಬೈ ವಿಮಾನ ನಿಲ್ದಾಣಕ್ಕೆ ಐಶ್ವರ್ಯ ರೈ ಬಚ್ಚನ್ ಬಂದಿಳಿದ ಕೂಡಲೆ ಅವರ ಫೋಟೋಗಳನ್ನು ಕ್ಲಿಕ್ಕಿಸಲು ಕ್ಯಾಮರಾಗಳು ರೆಡಿ ಆಗಿದ್ದವು.
ಏರ್ ಪೋರ್ಟ್ ನಿಂದ ಹೊರಗೆ ಬರುವಾಗ ಪುತ್ರಿ ಆರಾಧ್ಯ ಬಚ್ಚನ್ ಕೈಯನ್ನ ತಾಯಿ ಐಶ್ವರ್ಯ ರೈ ಹಿಡಿದುಕೊಂಡಿದ್ದರು. ಇದನ್ನೇ ತಪ್ಪು ಅಂತಿದ್ದಾರೆ ನೆಟ್ಟಿಗರು.!
ಇದಕ್ಕಿದ್ದಂತೆ ಭಾವುಕರಾಗಿ ಕಣ್ಣೀರಿಟ್ಟ ನಟಿ ಐಶ್ವರ್ಯ ರೈ: ಕಾರಣ ಏನು.?
ಮಗಳ ಕೈಯನ್ನ ತಾಯಿ ಹಿಡಿದುಕೊಂಡರೆ ತಪ್ಪೇನು ಅಂತ ನೀವು ಕೇಳಬಹುದು. ಆದ್ರೆ ಇದೇ ಟ್ರೋಲಿಗರಿಗೆ ಅಸ್ತ್ರವಾಗಿರುವುದು ಶಾಕಿಂಗ್ ಸಂಗತಿ. ''ಆ ಪುಟ್ಟ ಹುಡುಗಿಯಲ್ಲಿ ಇರುವ ವಿಶ್ವಾಸವನ್ನ ಐಶ್ವರ್ಯ ಕಸಿದುಕೊಳ್ಳುತ್ತಿದ್ದಾರೆ. ಮಗಳನ್ನ ಐಶ್ವರ್ಯ ಅತಿಯಾಗಿ ಪ್ರೊಟೆಕ್ಟ್ ಮಾಡುತ್ತಿದ್ದಾರೆ'' ಅಂತೆಲ್ಲಾ ಕಾಮೆಂಟ್ ಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದೆ.
ಆರಾಧ್ಯಗಿಂತಲೂ ಕರೀನಾ ಪುತ್ರ ತೈಮೂರ್ ಗೆ ವಿಶ್ವಾಸ ಹೆಚ್ಚಿದೆ ಅಂತಲೂ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಯಾರು ಏನೇ ಕಾಮೆಂಟ್ ಮಾಡಿದರೂ, ಅದಕ್ಕೆ ಐಶ್ವರ್ಯ ರೈ ತಲೆ ಕಡೆಸಿಕೊಳ್ಳುವುದಿಲ್ಲ. ''ಮಗಳ ಸುರಕ್ಷತೆಯೇ ಮೊದಲ ಆದ್ಯತೆ'' ಅಂತಾರೆ ಐಶ್ವರ್ಯ ರೈ ಬಚ್ಚನ್.
ಮಗಳ ತುಟಿಗೆ ಐಶ್ವರ್ಯ ಮುತ್ತು ಕೊಟ್ಟಿದ್ದು ದೊಡ್ಡ ಪಾಪವೇ.?!
ಆರಾಧ್ಯ ತುಟಿಗೆ ತಾಯಿ ಐಶ್ವರ್ಯ ಮುತ್ತು ಕೊಟ್ಟಿದ್ದಾಗಲೂ, ನೆಟ್ಟಿಗರು ಹೀಗೆ ಛೀಮಾರಿ ಹಾಕಿದ್ದರು. ಈಗ ಕೈ ಹಿಡಿದುಕೊಂಡಿದ್ದೂ ತಪ್ಪು ಅಂತಿದ್ದಾರೆ ಟ್ರೋಲಿಗರು. ತಾಯಿಯಾಗಿ ಐಶ್ವರ್ಯ ಏನೇ ಮಾಡಿದ್ರೂ ಪಾಪವೇ.?