Don't Miss!
- News ಹಳೇ ಹುಲಿ ಪಿಸಿ ಮೋಹನ್ ಎದುರು ಮನ್ಸೂರ್ ಅಲಿ ಖಾನ್ ಕಣಕ್ಕೆ; ಮತ್ತೊಮ್ಮೆ ಇತಿಹಾಸ ಬರೆಯುತ್ತಾರಾ ಬಿಜೆಪಿ ಕಲಿ?
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫೋನಿ ಸಂತ್ರಸ್ತರಿಗೆ ನೆರವಾದ ಬಾಲಿವುಡ್ ನಟ ಅಕ್ಷಯ್ ಕುಮಾರ್
Recommended Video
ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಫೋನಿ ಸಂತ್ರಸ್ತರ ನೆರವಿಗೆ ದಾವಿಸಿದ್ದಾರೆ. ಫೋನಿ ಚಂಡಮಾರುತದ ಹೊಡೆತಕ್ಕೆ ಒಡಿಶಾ ಮತ್ತು ಪುರಿ ಸೇರಿದಂತೆ ಕರಾವಳಿ ತೀರದ ಜಿಲ್ಲೆಗಳು ತತ್ತರಿಸಿಹೋಗಿವೆ. ಚಂಡಮಾರುತದ ಪರಿಣಾಮ 16ಕ್ಕು ಹೆಚ್ಚು ಮಂದಿ ಸಾವನಪ್ಪಿದ್ದಾರೆ.
ಫೋನಿ ಚಂಡಮಾರುತದ ಬೀಕರ ಹೊಡೆತಕ್ಕೆ ಸಾವಿರಾರು ಕುಟುಂಬಗಳು ನಿರಾಶ್ರಿತರಾಗಿದ್ದಾರೆ. ಹೊತ್ತಿನ ಊಟಕ್ಕು ಪರದಾಡುವಂತಾಗಿದೆ. ಸದ್ಯ ಕಷ್ಟದಲ್ಲಿರುವ ಜನರ ನೆರವಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ದಾವಿಸಿದ್ದಾರೆ. ಸಂತ್ರಸ್ತರಿಗೆ 1 ಕೋಟಿ ಪರಿಹಾರ ನೀಡಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಅಕ್ಷಯ್ ಹಣವನ್ನು ನೀಡಿದ್ದಾರೆ.
'ಕಿಲಾಡಿ' ಅಕ್ಷಯ್ ಕುಮಾರ್ ವೋಟ್ ಮಾಡದಿರಲು ಕಾರಣ ಇಲ್ಲಿದೆ!
ಅಂದ್ಹಾಗೆ ಅಕ್ಷಯ್ ತಂತ್ರಸ್ತರ ನೆರವಿಗೆ ದಾವಿಸುವುದು ಇದೇ ಮೊದಲೇನಲ್ಲ. ಕಷ್ಟ ಅಂದವರ ಪಾಲಿಗೆ ಅಕ್ಷಯ್ ಸದಾ ನೆರವಿನ ಹಸ್ತಾಚಾಚುತ್ತಾರೆ. ಈ ಹಿಂದೆ ಯೋದರಿಗೆ ನೆರವಾಗಿದ್ದರು. ಅಲ್ಲದೆ ಕೇರಳ ಮತ್ತು ಚೆನ್ನೈ ನೆರೆ ತಂತ್ರಸ್ತರ ಕಷ್ಟಕ್ಕು ಸ್ಪಂದಿಸಿದ್ದರು ಅಕ್ಷಯ್. ಇತ್ತೀಚಿಗಷ್ಟೆ ಅಕ್ಷಯ್ ಓಟ್ ಮಾಡಿಲ್ಲ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು.
ಕೆನಡಾದ ಪ್ರಜೆ ಆಗಿರುವ ಅಕ್ಷಯ್ ಬಾರತದಲ್ಲಿ ಮತ ಚಲಾಯಿಸುವ ಹಾಗಿಲ್ಲ. ಅಕ್ಷಯ್ ಕೆನಡಾ ಪಾಸ್ ಪೋರ್ಟ್ ಹೊಂದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದ ಅಕ್ಕಿ 'ನನ್ನ ರಾಷ್ಟ್ರಪ್ರೇಮದ ಬಗ್ಗೆ ಯಾರಿಗೂ ಹೇಳುವ ಅಗತ್ಯತೆ ಇಲ್ಲ' ಎಂದು ಹೇಳುವ ಮೂಲಕ ಕಾಳೆದವರ ಬಾಯಿ ಮುಚ್ಚಿಸಿದ್ರು. ಸದ್ಯ ಫೋನಿ ಚಂಡಮಾರುತ ಸಂತ್ರಸ್ತರಿಗೆ ನೆರವಾಗುವ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಹೃದಯಗೆದ್ದಿದ್ದಾರೆ.