ಫೋನಿ ಸಂತ್ರಸ್ತರಿಗೆ ನೆರವಾದ ಬಾಲಿವುಡ್ ನಟ ಅಕ್ಷಯ್ ಕುಮಾರ್
Recommended Video
ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಫೋನಿ ಸಂತ್ರಸ್ತರ ನೆರವಿಗೆ ದಾವಿಸಿದ್ದಾರೆ. ಫೋನಿ ಚಂಡಮಾರುತದ ಹೊಡೆತಕ್ಕೆ ಒಡಿಶಾ ಮತ್ತು ಪುರಿ ಸೇರಿದಂತೆ ಕರಾವಳಿ ತೀರದ ಜಿಲ್ಲೆಗಳು ತತ್ತರಿಸಿಹೋಗಿವೆ. ಚಂಡಮಾರುತದ ಪರಿಣಾಮ 16ಕ್ಕು ಹೆಚ್ಚು ಮಂದಿ ಸಾವನಪ್ಪಿದ್ದಾರೆ.
ಫೋನಿ ಚಂಡಮಾರುತದ ಬೀಕರ ಹೊಡೆತಕ್ಕೆ ಸಾವಿರಾರು ಕುಟುಂಬಗಳು ನಿರಾಶ್ರಿತರಾಗಿದ್ದಾರೆ. ಹೊತ್ತಿನ ಊಟಕ್ಕು ಪರದಾಡುವಂತಾಗಿದೆ. ಸದ್ಯ ಕಷ್ಟದಲ್ಲಿರುವ ಜನರ ನೆರವಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ದಾವಿಸಿದ್ದಾರೆ. ಸಂತ್ರಸ್ತರಿಗೆ 1 ಕೋಟಿ ಪರಿಹಾರ ನೀಡಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಅಕ್ಷಯ್ ಹಣವನ್ನು ನೀಡಿದ್ದಾರೆ.
ಅಂದ್ಹಾಗೆ ಅಕ್ಷಯ್ ತಂತ್ರಸ್ತರ ನೆರವಿಗೆ ದಾವಿಸುವುದು ಇದೇ ಮೊದಲೇನಲ್ಲ. ಕಷ್ಟ ಅಂದವರ ಪಾಲಿಗೆ ಅಕ್ಷಯ್ ಸದಾ ನೆರವಿನ ಹಸ್ತಾಚಾಚುತ್ತಾರೆ. ಈ ಹಿಂದೆ ಯೋದರಿಗೆ ನೆರವಾಗಿದ್ದರು. ಅಲ್ಲದೆ ಕೇರಳ ಮತ್ತು ಚೆನ್ನೈ ನೆರೆ ತಂತ್ರಸ್ತರ ಕಷ್ಟಕ್ಕು ಸ್ಪಂದಿಸಿದ್ದರು ಅಕ್ಷಯ್. ಇತ್ತೀಚಿಗಷ್ಟೆ ಅಕ್ಷಯ್ ಓಟ್ ಮಾಡಿಲ್ಲ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು.

ಕೆನಡಾದ ಪ್ರಜೆ ಆಗಿರುವ ಅಕ್ಷಯ್ ಬಾರತದಲ್ಲಿ ಮತ ಚಲಾಯಿಸುವ ಹಾಗಿಲ್ಲ. ಅಕ್ಷಯ್ ಕೆನಡಾ ಪಾಸ್ ಪೋರ್ಟ್ ಹೊಂದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದ ಅಕ್ಕಿ 'ನನ್ನ ರಾಷ್ಟ್ರಪ್ರೇಮದ ಬಗ್ಗೆ ಯಾರಿಗೂ ಹೇಳುವ ಅಗತ್ಯತೆ ಇಲ್ಲ' ಎಂದು ಹೇಳುವ ಮೂಲಕ ಕಾಳೆದವರ ಬಾಯಿ ಮುಚ್ಚಿಸಿದ್ರು. ಸದ್ಯ ಫೋನಿ ಚಂಡಮಾರುತ ಸಂತ್ರಸ್ತರಿಗೆ ನೆರವಾಗುವ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಹೃದಯಗೆದ್ದಿದ್ದಾರೆ.


Click it and Unblock the Notifications











