Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫೋನಿ ಸಂತ್ರಸ್ತರಿಗೆ ನೆರವಾದ ಬಾಲಿವುಡ್ ನಟ ಅಕ್ಷಯ್ ಕುಮಾರ್
Recommended Video
ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಫೋನಿ ಸಂತ್ರಸ್ತರ ನೆರವಿಗೆ ದಾವಿಸಿದ್ದಾರೆ. ಫೋನಿ ಚಂಡಮಾರುತದ ಹೊಡೆತಕ್ಕೆ ಒಡಿಶಾ ಮತ್ತು ಪುರಿ ಸೇರಿದಂತೆ ಕರಾವಳಿ ತೀರದ ಜಿಲ್ಲೆಗಳು ತತ್ತರಿಸಿಹೋಗಿವೆ. ಚಂಡಮಾರುತದ ಪರಿಣಾಮ 16ಕ್ಕು ಹೆಚ್ಚು ಮಂದಿ ಸಾವನಪ್ಪಿದ್ದಾರೆ.
ಫೋನಿ ಚಂಡಮಾರುತದ ಬೀಕರ ಹೊಡೆತಕ್ಕೆ ಸಾವಿರಾರು ಕುಟುಂಬಗಳು ನಿರಾಶ್ರಿತರಾಗಿದ್ದಾರೆ. ಹೊತ್ತಿನ ಊಟಕ್ಕು ಪರದಾಡುವಂತಾಗಿದೆ. ಸದ್ಯ ಕಷ್ಟದಲ್ಲಿರುವ ಜನರ ನೆರವಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ದಾವಿಸಿದ್ದಾರೆ. ಸಂತ್ರಸ್ತರಿಗೆ 1 ಕೋಟಿ ಪರಿಹಾರ ನೀಡಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಅಕ್ಷಯ್ ಹಣವನ್ನು ನೀಡಿದ್ದಾರೆ.
'ಕಿಲಾಡಿ' ಅಕ್ಷಯ್ ಕುಮಾರ್ ವೋಟ್ ಮಾಡದಿರಲು ಕಾರಣ ಇಲ್ಲಿದೆ!
ಅಂದ್ಹಾಗೆ ಅಕ್ಷಯ್ ತಂತ್ರಸ್ತರ ನೆರವಿಗೆ ದಾವಿಸುವುದು ಇದೇ ಮೊದಲೇನಲ್ಲ. ಕಷ್ಟ ಅಂದವರ ಪಾಲಿಗೆ ಅಕ್ಷಯ್ ಸದಾ ನೆರವಿನ ಹಸ್ತಾಚಾಚುತ್ತಾರೆ. ಈ ಹಿಂದೆ ಯೋದರಿಗೆ ನೆರವಾಗಿದ್ದರು. ಅಲ್ಲದೆ ಕೇರಳ ಮತ್ತು ಚೆನ್ನೈ ನೆರೆ ತಂತ್ರಸ್ತರ ಕಷ್ಟಕ್ಕು ಸ್ಪಂದಿಸಿದ್ದರು ಅಕ್ಷಯ್. ಇತ್ತೀಚಿಗಷ್ಟೆ ಅಕ್ಷಯ್ ಓಟ್ ಮಾಡಿಲ್ಲ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು.
ಕೆನಡಾದ ಪ್ರಜೆ ಆಗಿರುವ ಅಕ್ಷಯ್ ಬಾರತದಲ್ಲಿ ಮತ ಚಲಾಯಿಸುವ ಹಾಗಿಲ್ಲ. ಅಕ್ಷಯ್ ಕೆನಡಾ ಪಾಸ್ ಪೋರ್ಟ್ ಹೊಂದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದ ಅಕ್ಕಿ 'ನನ್ನ ರಾಷ್ಟ್ರಪ್ರೇಮದ ಬಗ್ಗೆ ಯಾರಿಗೂ ಹೇಳುವ ಅಗತ್ಯತೆ ಇಲ್ಲ' ಎಂದು ಹೇಳುವ ಮೂಲಕ ಕಾಳೆದವರ ಬಾಯಿ ಮುಚ್ಚಿಸಿದ್ರು. ಸದ್ಯ ಫೋನಿ ಚಂಡಮಾರುತ ಸಂತ್ರಸ್ತರಿಗೆ ನೆರವಾಗುವ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಹೃದಯಗೆದ್ದಿದ್ದಾರೆ.