Don't Miss!
- Lifestyle ಗಾಯ ಗುಣವಾಗಲು, ದೃಷ್ಟಿ ಸುಧಾರಣೆ ಸೇರಿ ಕೀವಿ ಹಣ್ಣಿನ ಲಾಭ ಎಷ್ಟಿದೆ ಗೊತ್ತಾ?
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯೋಧರ ಭೇಟಿಯಾಗಿ 1 ಕೋಟಿ ದೇಣಿಗೆ ನೀಡಿದ ಅಕ್ಷಯ್ ಕುಮಾರ್
ಬಾಲಿವುಡ್ ನಟ ಅಕ್ಷಯ್ ಕುಮಾರ್ ಇಂದು ಬಿಎಸ್ಎಫ್ ಯೋಧರನ್ನು ಭೇಟಿಯಾಗಿ ಅವರೊಟ್ಟಿಗೆ ಕಾಲ ಕಳೆದಿದ್ದಾರೆ.
ಕಾಶ್ಮೀರದ ಬಂಡಿಪೋರ ಏರಿಯಾಕ್ಕೆ ಭೇಟಿ ನೀಡಿದ್ದ ಅಕ್ಷಯ್ ಕುಮಾರ್ ಅಲ್ಲಿ ಗಡಿ ಕಾಯುತ್ತಿರುವ ಬಿಎಸ್ಎಫ್ ಯೋಧರ ಜೊತೆ ದಿನ ಕಳೆದರು. ಅವರೊಟ್ಟಿಗೆ ನೃತ್ಯ ಮಾಡಿ, ಆಟವಾಡಿ ಸಮಯ ಕಳೆದ ಅಕ್ಷಯ್ ಕುಮಾರ್. ಗಡಿ ನಿಯಂತ್ರಣ ರೇಖೆ ಬಳಿ ಇರುವ ತುಲಾಯಿ ಹಳ್ಳಿಯಲ್ಲಿ ಶಾಲೆ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ದೇಣಿಗೆಯನ್ನು ಸಹ ನೀಡಿದರು.
ಜೊತೆಗೆ ಅಕ್ಷಯ್ ಕುಮಾರ್ ಹಾಗೂ ಬಿಎಸ್ಎಫ್ ಹಿರಿಯ ಅಧಿಕಾರಿಗಳು ಹುತಾತ್ಮ ಬಿಎಸ್ಎಫ್ ಯೋಧರಿಗೆ ಗೌರವ ಸಲ್ಲಿಸಿದರು. ಗ್ರಾಮಸ್ಥರು ಹಾಗೂ ಬಿಎಸ್ಎಫ್ ಯೋಧರು ನೆರೆದಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅಕ್ಷಯ್ ಕುಮಾರ್, ''ನೀವು ಇಲ್ಲಿ ಇಂಥಹಾ ಚಳಿಯಲ್ಲಿ, ಪ್ರತಿಕೂಲ ಹವಾಮಾನದಲ್ಲಿ ಕೆಲಸ ಮಾಡುತ್ತಿರುವುದು ಅತೀವ ಆಶ್ಚರ್ಯ ಮತ್ತು ನಿಮ್ಮ ಬಗ್ಗೆ ಅತೀವ ಗೌರವ ಮೂಡಿಸುತ್ತಿದೆ'' ಎಂದಿದ್ದಾರೆ.
ಅಕ್ಷಯ್ ಕುಮಾರ್, ಯೋಧರೊಟ್ಟಿಗೆ ಡಾನ್ಸ್ ಮಾಡುತ್ತಿರುವ ಆಟವಾಡುತ್ತಿರುವ, ಪರಸ್ಪರ ಶಕ್ತಿ ಪ್ರದರ್ಶನದ ಆಟಗಳಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಕ್ಷಯ್ ಕುಮಾರ್ ಸಹ ಕೆಲವು ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Recommended Video
''ನೆನಪುಳಿಯುವಂತೆ ಈ ದಿನವನ್ನು ಬಿಎಸ್ಎಫ್ ಯೋಧರೊಟ್ಟಿಗೆ ಕಳೆದಿದ್ದೇನೆ. ದಿನ-ರಾತ್ರಿ ನಮ್ಮ ಗಡಿ ಕಾಯುವ ಈ ಯೋಧರು ವೀರ ಹೃದಯದವರು. ಇಲ್ಲಿಗೆ ಬರುವುದು, ನಿಜ ಜೀವನದ ಹೀರೋಗಳನ್ನು ಭೇಟಿಯಾಗುವುದು ಸದಾ ವಿನಮ್ರ ಭಾವ ಮೂಡಿಸುತ್ತದೆ. ನನ್ನ ಹೃದಯವು ಗೌರವಾದರಗಳಿಂದ ತುಂಬಿ ಹೋಗಿದೆ'' ಎಂದಿದ್ದಾರೆ ಅಕ್ಷಯ್.