Just In
Don't Miss!
- Lifestyle
ದಿನ ಭವಿಷ್ಯ: ನಿಮ್ಮ ರಾಶಿಗೆ ಶನಿವಾರ ದಿನ ಹೇಗಿರಲಿದೆ ನೋಡಿ
- News
ದಿಢೀರ್ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಕಾರಣ ನೀಡಿದ ಸಚಿವ ಕೆ. ಸುಧಾಕರ್
- Education
KSCCF Recruitment 2021: 45 ಲೆಕ್ಕಿಗರು, ಎಫ್ಡಿಎ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಮಾರ್ಚ್ ತಿಂಗಳಿನಲ್ಲಿ ಹ್ಯುಂಡೈ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ
- Sports
ಐಎಸ್ಎಲ್: ಸಮಬಲ ಸಾಧಿಸಿದ ಗೋವಾ ಎಫ್ಸಿ, ಮುಂಬೈ ಎಫ್ಸಿ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 05ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬನ್ಸಾಲಿಗಾಗಿ ನಿರ್ಧಾರ ಬದಲಿಸಿಕೊಂಡ ಅಕ್ಷಯ್ 'ಪ್ಯಾಡ್ ಮ್ಯಾನ್'
ಎಲ್ಲ ಸಮಸ್ಯೆಗಳನ್ನ ಬಗೆಹರಿಸಿಕೊಂಡು 'ಪದ್ಮಾವತ್' ಸಿನಿಮಾ ಜನವರಿ 25 ರಂದು ವರ್ಲ್ಡ್ ವೈಡ್ ತೆರೆಕಾಣಲು ಸಜ್ಜಾಗಿದೆ. ಈ ಮಧ್ಯೆ 'ಪದ್ಮಾವತ್' ಚಿತ್ರಕ್ಕೆ ಅಕ್ಷಯ್ ಕುಮಾರ್ ಸಿನಿಮಾ ಕಾಂಪಿಟೇಟರ್ ಆಗಿ ಪರಿಣಮಿಸಿತು.
ಎರಡು ಚಿತ್ರಗಳು ಒಟ್ಟಿಗೆ ತೆರೆ ಕಾಣುವುದರಿಂದ ಎರಡು ಚಿತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಎಂಬ ಲೆಕ್ಕಾಚಾರವನ್ನ ಬಾಲಿವುಡ್ ಪಂಡಿತರು ಹಾಕಿದ್ದರು. ಆದ್ರೆ, ಇದಕ್ಕೆ ತಲೆಕೆಡಿಸಿಕೊಳ್ಳದ ಎರಡು ಸಿನಿಮಾಗಳು ಅದೇ ದಿನ ಬರಲು ನಿರ್ಧರಿಸಿದ್ದರು. ಇದೀಗ, ದೀಢಿರ್ ಅಂತ ಅಕ್ಷಯ್ ನಿರ್ಣಯ ಬದಲಾಯಿಸಿಕೊಂಡಿದ್ದು, 'ಪದ್ಮಾವತ್' ಚಿತ್ರಕ್ಕಾಗಿ 'ಪ್ಯಾಡ್ ಮ್ಯಾನ್' ಮುಂದೂಡಲಾಗಿದೆ.
ದೇಶದ ಎಲ್ಲಾ ಪ್ರೇಕ್ಷಕರಿಗೂ ಪದ್ಮಾವತ್ ದರ್ಶನ
ಹೌದು, ಸಂಜಯ್ ಲೀಲಾ ಬನ್ಸಾಲಿ ಅವರು ನಟ ಅಕ್ಷಯ್ ಕುಮಾರ್ ಅವರನ್ನ ಭೇಟಿ ಮಾಡಿ 'ಪ್ಯಾಡ್ ಮ್ಯಾನ್' ಚಿತ್ರವನ್ನ ಮುಂದೂಡಿ ಎಂದು ಮನವಿ ಮಾಡಿಕೊಂಡಿದ್ದರು. ಅದಕ್ಕೆ ಸ್ಪಂದಿಸಿದ ಅಕ್ಕಿ 'ಪ್ಯಾಡ್ ಮ್ಯಾನ್' ಚಿತ್ರವನ್ನ ಫೆಬ್ರವರಿ 9 ಕ್ಕೆ ಶಿಫ್ಟ್ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಬನ್ಸಾಲಿ ಹಾಗೂ ಅಕ್ಷಯ್ ಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಬಳಿಕ ಮಾತನಾಡಿದ ಬನ್ಸಾಲಿ, ಎಲ್ಲರಿಗೂ ಗೊತ್ತಿರುವ ಹಾಗೆ, ಪದ್ಮಾವತ್ ಚಿತ್ರ ಈಗಾಗಲೇ ಹೆಚ್ಚು ಅಡೆತಡೆಗಳನ್ನ ದಾಟಿ ಬಂದಿದೆ. ಹೀಗಾಗಿ, ಅಕ್ಷಯ್ ಕುಮಾರ್ ಅವರನ್ನ ಕೇಳಿಕೊಂಡೆ. ಅವರು 2 ನಿಮಿಷದಲ್ಲಿ ಒಪ್ಪಿಕೊಂಡು ಸಿನಿಮಾವನ್ನ ಮುಂದೂಡಿದ್ದಾರೆ. ಅವರಿಗೆ ಧನ್ಯವಾದಗಳು ಎಂದರು.
ಅಂದ್ಹಾಗೆ, ಅಕ್ಷಯ್ ಕುಮಾರ್ ಅಭಿನಯದ 'ಗಬ್ಬರ್ ಈಸ್ ಬ್ಯಾಕ್' ಹಾಗೂ 'ರೌಡಿ ರಾಥೋರ್' ಚಿತ್ರಗಳನ್ನ ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣ ಮಾಡಿದ್ದರು.