Don't Miss!
- Sports GT vs DC: ಡೆಲ್ಲಿ ವಿರುದ್ಧದ ಹೀನಾಯ ಸೋಲಿಗೆ ಇವರೇ ಕಾರಣ; ಶುಭ್ಮನ್ ಗಿಲ್ ಗರಂ
- News ಭಾರತೀಯ ರೈಲ್ವೆಗೆ 171 ವರ್ಷ: ಮೊದಲ ರೈಲು ಸಂಚಾರ ಎಲ್ಲಿಂದ ಎಲ್ಲಿಗೆ? ಪೋಸ್ಟ್ ಹಂಚಿಕೊಂಡ ರೈಲ್ವೆ
- Technology ಅಗ್ಗದ ದರದಲ್ಲಿ 5G ಫೋನ್ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡ್ಕೋಬೇಡಿ!
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Lifestyle ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬನ್ಸಾಲಿಗಾಗಿ ನಿರ್ಧಾರ ಬದಲಿಸಿಕೊಂಡ ಅಕ್ಷಯ್ 'ಪ್ಯಾಡ್ ಮ್ಯಾನ್'
ಎಲ್ಲ ಸಮಸ್ಯೆಗಳನ್ನ ಬಗೆಹರಿಸಿಕೊಂಡು 'ಪದ್ಮಾವತ್' ಸಿನಿಮಾ ಜನವರಿ 25 ರಂದು ವರ್ಲ್ಡ್ ವೈಡ್ ತೆರೆಕಾಣಲು ಸಜ್ಜಾಗಿದೆ. ಈ ಮಧ್ಯೆ 'ಪದ್ಮಾವತ್' ಚಿತ್ರಕ್ಕೆ ಅಕ್ಷಯ್ ಕುಮಾರ್ ಸಿನಿಮಾ ಕಾಂಪಿಟೇಟರ್ ಆಗಿ ಪರಿಣಮಿಸಿತು.
ಎರಡು ಚಿತ್ರಗಳು ಒಟ್ಟಿಗೆ ತೆರೆ ಕಾಣುವುದರಿಂದ ಎರಡು ಚಿತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಎಂಬ ಲೆಕ್ಕಾಚಾರವನ್ನ ಬಾಲಿವುಡ್ ಪಂಡಿತರು ಹಾಕಿದ್ದರು. ಆದ್ರೆ, ಇದಕ್ಕೆ ತಲೆಕೆಡಿಸಿಕೊಳ್ಳದ ಎರಡು ಸಿನಿಮಾಗಳು ಅದೇ ದಿನ ಬರಲು ನಿರ್ಧರಿಸಿದ್ದರು. ಇದೀಗ, ದೀಢಿರ್ ಅಂತ ಅಕ್ಷಯ್ ನಿರ್ಣಯ ಬದಲಾಯಿಸಿಕೊಂಡಿದ್ದು, 'ಪದ್ಮಾವತ್' ಚಿತ್ರಕ್ಕಾಗಿ 'ಪ್ಯಾಡ್ ಮ್ಯಾನ್' ಮುಂದೂಡಲಾಗಿದೆ.
ದೇಶದ ಎಲ್ಲಾ ಪ್ರೇಕ್ಷಕರಿಗೂ ಪದ್ಮಾವತ್ ದರ್ಶನ
ಹೌದು, ಸಂಜಯ್ ಲೀಲಾ ಬನ್ಸಾಲಿ ಅವರು ನಟ ಅಕ್ಷಯ್ ಕುಮಾರ್ ಅವರನ್ನ ಭೇಟಿ ಮಾಡಿ 'ಪ್ಯಾಡ್ ಮ್ಯಾನ್' ಚಿತ್ರವನ್ನ ಮುಂದೂಡಿ ಎಂದು ಮನವಿ ಮಾಡಿಕೊಂಡಿದ್ದರು. ಅದಕ್ಕೆ ಸ್ಪಂದಿಸಿದ ಅಕ್ಕಿ 'ಪ್ಯಾಡ್ ಮ್ಯಾನ್' ಚಿತ್ರವನ್ನ ಫೆಬ್ರವರಿ 9 ಕ್ಕೆ ಶಿಫ್ಟ್ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಬನ್ಸಾಲಿ ಹಾಗೂ ಅಕ್ಷಯ್ ಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಬಳಿಕ ಮಾತನಾಡಿದ ಬನ್ಸಾಲಿ, ಎಲ್ಲರಿಗೂ ಗೊತ್ತಿರುವ ಹಾಗೆ, ಪದ್ಮಾವತ್ ಚಿತ್ರ ಈಗಾಗಲೇ ಹೆಚ್ಚು ಅಡೆತಡೆಗಳನ್ನ ದಾಟಿ ಬಂದಿದೆ. ಹೀಗಾಗಿ, ಅಕ್ಷಯ್ ಕುಮಾರ್ ಅವರನ್ನ ಕೇಳಿಕೊಂಡೆ. ಅವರು 2 ನಿಮಿಷದಲ್ಲಿ ಒಪ್ಪಿಕೊಂಡು ಸಿನಿಮಾವನ್ನ ಮುಂದೂಡಿದ್ದಾರೆ. ಅವರಿಗೆ ಧನ್ಯವಾದಗಳು ಎಂದರು.
ಅಂದ್ಹಾಗೆ, ಅಕ್ಷಯ್ ಕುಮಾರ್ ಅಭಿನಯದ 'ಗಬ್ಬರ್ ಈಸ್ ಬ್ಯಾಕ್' ಹಾಗೂ 'ರೌಡಿ ರಾಥೋರ್' ಚಿತ್ರಗಳನ್ನ ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣ ಮಾಡಿದ್ದರು.