Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೆಟ್ರೋದಲ್ಲಿ ಪ್ರಯಾಣಿಸಿದ ಅಕ್ಷಯ್ ಕುಮಾರ್: ಯಾರೂ ಕಂಡುಹಿಡಿದಿಲ್ಲ
Recommended Video
ಮೆಟ್ರೋ ವಿರೋಧಿಸಿ ಸಾಮಾಜಿಕ ಹೋರಾಟಗಾರರು, ಪರಿಸರ ಪ್ರೇಮಿಗಳು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ, ಮೆಟ್ರೋ ಪ್ರಯಾಣ ಮಾಡಿ ಪ್ರತಿಭಟನೆಕಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ನಟ ಅಕ್ಷಯ್ ಕುಮಾರ್.
''ಘಾಟ್ ಕೋಪರ್ ನಿಂದ ವರ್ಸೋವಾಗೆ 'ಬಾಸ್ ರೀತಿ' ಮುಂಬೈ ಮೆಟ್ರೋದಲ್ಲಿ ಪ್ರಯಾಣ ಮಾಡುವ ಮೂಲಕ ಅತಿ ಹೆಚ್ಚು ಟ್ರಾಫಿಕ್ ಗೆ ಸೆಡ್ಡು ಹೊಡೆದೆ'' ಎಂದು ಅಕ್ಷಯ್ ಕುಮಾರ್ ಮೆಟ್ರೋದಲ್ಲಿ ಪ್ರಯಾಣ ಮಾಡಿರುವ ವಿಡಿಯೋ ಪೋಸ್ಟ್ ಮಾಡಿದ್ದಾರೆ.
''ಘಾಟ್ ಕೋಪರ್ ದಲ್ಲಿ ಚಿತ್ರೀಕರಣ ಮುಗಿಸಿ ವರ್ಸೋವಾಗೆ ಹೋಗಬೇಕಿತ್ತು. 13 ಕಿಮೀ ದೂರ ಇತ್ತು. ನನ್ನ ಮ್ಯಾಪ್ ನಲ್ಲಿ ನೋಡಿದಾಗ 2 ಗಂಟೆ ಸಮಯ ಬೇಕು ಎಂದು ತೋರಿಸುತ್ತಿತ್ತು. ಇಂತಹ ಸಮಯದಲ್ಲಿ ನನ್ನ ನಿರ್ದೇಶಕ ರಾಜ್ ಮೆಹ್ತಾ ಮೆಟ್ರೋದಲ್ಲಿ ಹೋಗು ಎಂದರು. ಜನ ಹೆಚ್ಚು ಇರ್ತಾರೆ ಹೇಗೆ ಎಂದು ಪ್ರಶ್ನಿಸಿದ್ದಕ್ಕೆ ಟ್ರೈ ಮಾಡು ಎಂದರು, ಅದಕ್ಕೆ ಬಂದೆ'' ಎಂದು ಅಕ್ಷಯ್ ಕುಮಾರ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋವನ್ನ ಕೂಡ ಮೆಟ್ರೋ ರೈಲಿನ ಒಳಗಡೆಯೇ ಮಾಡಿದ್ದಾರೆ.
ಅಮಿತಾಭ್ ಬಚ್ಚನ್ ಟ್ವೀಟ್ ವಿರೋಧಿಸಿ ಮನೆ ಮುಂದೆ ಪ್ರತಿಭಟನೆ
ಅಕ್ಷಯ್ ಕುಮಾರ್ ಅವರು ಮೆಟ್ರೋದಲ್ಲಿ ಪ್ರಯಾಣ ಮಾಡುವ ಮೂಲಕ ಮುಂಬೈ ಮೆಟ್ರೋಗೆ ಬೆಂಬಲ ಸೂಚಿಸಿದ್ದಾರೆ ಎಂದು ಸಾಮಾಜಿಕ ಹೋರಾಟಗಾರರು ಟೀಕಿಸುತ್ತಿದ್ದಾರೆ.
ಮೆಟ್ರೋ ಕಾಮಗಾರಿ ಹಿನ್ನಲೆ ಅರೇ ಕಾಲೋನಿಯಲ್ಲಿ ಸುಮಾರು 2600ಕ್ಕೂ ಅಧಿಕ ಗಿಡಮರಗಳನ್ನ ಕಡಿಯಲು ಮುಂಬೈ ಮಹಾನಗರ ಪಾಲಿಕೆ ಮುಂದಾಗಿದೆ. ಇದನ್ನ ಖಂಡಿಸಿ ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಅಮಿತಾಭ್ ಬಚ್ಚನ್ ಕೂಡ ಮುಂಬೈ ಮೆಟ್ರೋ ಬೆಂಬಲಿಸಿದ್ದಕ್ಕೆ ಅವರ ಮನೆ ಮುಂದೆ ಪ್ರತಿಭಟನೆ ಮಾಡಲಾಗಿತ್ತು.