Don't Miss!
- News Lok Sabha Election 2024: ಚಾಮರಾಜನಗರ ಕ್ಷೇತ್ರದಲ್ಲಿರುವ ಮತದಾರರ ವಿವರ-ಅಂಕಿಅಂಶಗಳ ಮಾಹಿತಿ
- Finance ನೂಡಲ್ಸ್ ಪ್ಯಾಕೆಟ್ ಒಳಗಿತ್ತು ವಜ್ರಗಳ ರಾಶಿ, ಬರೋಬ್ಬರಿ 6.46 ಕೋಟಿ ರೂ. ಮೌಲ್ಯದ ಚಿನ್ನ, ಡೈಮಂಡ್ ವಶ!
- Technology ಇಂದು ವಿವೋ T3x 5G ಸ್ಮಾರ್ಟ್ಫೋನ್ ಫಸ್ಟ್ ಸೇಲ್; ಬೆಲೆ 13,499ರೂ.!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕಿಲಾಡಿ' ಅಕ್ಷಯ್ ಕುಮಾರ್ ವೋಟ್ ಮಾಡದಿರಲು ಕಾರಣ ಇಲ್ಲಿದೆ!
ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿಲ್ಲ. ಈ ವಿಚಾರ ಈಗ ಟ್ರೋಲ್ ಪೇಜ್ ಗಳಿಗೆ ದೊಡ್ಡ ಆಹಾರವಾಗಿದೆ. ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಅಕ್ಷಯ್ ತಾನೆ ಹಕ್ಕು ಚಲಾಯಿಸದೆ ಇರುವುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಮತದಾನದ ಬಗ್ಗೆ ಜಾಗೃತಿ ಮೂಡಿಸುವಂತೆ ಸಿನಿಮಾ ತಾರೆಯರಲ್ಲಿ ಮನವಿ ಮಾಡಿಕೊಂಡಿದ್ದರು. ಅಕ್ಷಯ್ ಹೆಸರನ್ನು ಸೂಚಿಸಿದ್ದರು. ಅಷ್ಟೆಯಲ್ಲದೆ ಮೊನ್ನೆ ಮೊನ್ನೆಯಷ್ಟೆ ಪ್ರಧಾನಿ ನರೇಂದ್ರ ಮೋದಿ ಅವರ ಸಂದರ್ಶನ ಮಾಡಿ ವಿರೋದ ಪಕ್ಷದವರ ಕೆಂಗಣ್ಣಿಗು ಗುರಿಯಾಗಿದ್ದರು. ಇಷ್ಟೆಲ್ಲ ಮಾಡುವ ಅಕ್ಷಯ್ ಮಾತದಾನ ಯಾಕೆ ಮಾಡಲಿಲ್ಲ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ.
ಸಿಕ್ಸರ್ ಮೇಲೆ ಸಿಕ್ಸರ್ ಹೊಡಿತ್ತಿದ್ದಾರೆ ಅಕ್ಷಯ್ ಕುಮಾರ್
ಆದ್ರೆ ಈ ಬಗ್ಗೆ ಅಕ್ಷಯ್ ಕುಮಾರ್ ಅವರನ್ನ ಕೇಳಿದ್ರೆ ಉತ್ತರ ಕೊಡದೆ ಸಿಟ್ಟಾಗುತ್ತಾರೆ. ಮಾಧ್ಯಮದವರು ಕೇಳಿದ ಪ್ರಶ್ನೆಗೆ 'ಚಲಿಯೆ ಬೇಟಾ' ಎಂದು ಹೇಳುತ್ತಾ ಪತ್ರಕರ್ತನ ಬೆನ್ನು ತಟ್ಟಿ ಹಾಗೆ ವಾಪಸ್ ಆಗಿದ್ದಾರೆ. ಮತದಾನ ಮಾಡದೆ ಬಗ್ಗೆ ಎಲ್ಲೂ ಮಾತನಾಡಲು ಇಷ್ಟಪಡುತ್ತಿಲ್ಲ ಅಕ್ಷಯ್.
ಅಸಲಿಗೆ ಅಕ್ಷಯ್ ಮತದಾನ ಮಾಡದೆ ಇರಲು ಒಂದು ಬಲವಾದ ಕಾರಣವಿದೆ. ಯಾಕಂದ್ರೆ ಅಕ್ಷಯ್ ಹೆಸರು ಮತದಾನದ ಲಿಸ್ಟ್ ನಲ್ಲಿ ಇಲ್ಲ. ಕಿಲಾಡಿ ಕೆನಡಾದ ಪ್ರಜೆಯಾಗಿದ್ದಾರೆ. ಅವರ ಬಳಿ ಕೆನಡಾ ಪಾಸ್ ಪೋರ್ಟ್ ಇದೆ. ಹಾಗಾಗಿ ಅಕ್ಷಯ್ ಭಾರತದಲ್ಲಿ ತನ್ನ ಹಕ್ಕು ಚಲಾಯಿಸಲಿಲ್ಲ. ಆದ್ರೆ ಅಕ್ಕಿ ಇದನ್ನು ಎಲ್ಲಿಯೂ ಹೇಳಿಕೊಳ್ಳುತ್ತಿಲ್ಲ. ಬದಲಿಗೆ ಸಿಕ್ಕಪಟ್ಟೆ ಟ್ರೋಲ್ ಗೆ ಗುರಿಯಾಗಿದ್ದಾರೆ.