Don't Miss!
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಕ್ಷಯ್ ಕುಮಾರ್ ಗಿಂತ ಸ್ಮಾರ್ಟ್, ಎತ್ತರ, ಒಳ್ಳೆಯವನು ಈ ಹುಡುಗ
ಬಾಲಿವುಡ್ ನಟ ಅಕ್ಷಯ್ ಕುಮಾರ್ ನಿಜ ಜೀವನದಲ್ಲೂ ಹೀರೋ. ಸಿನಿಮಾಗಳ ಮೂಲಕ ಮನರಂಜನೆ ನೀಡುವ ಈ ಸ್ಟಾರ್ ನಟ, ಅದೇಷ್ಟೋ ಸಾಮಾಜಿಕ ಕೆಲಸಗಳನ್ನ ಕೂಡ ಮಾಡ್ತಿದ್ದಾರೆ. ತಮ್ಮ ಪ್ರತಿಯೊಂದು ಸಿನಿಮಾದಲ್ಲೂ ಕೂಡ ಸಮಾಜಕ್ಕೊಂದು ಉತ್ತಮ ಸಂದೇಶ ನೀಡುತ್ತಾ ಬಂದಿದ್ದಾರೆ.
ಇಂತಹ ನಟನಿಗಿಂತ ಸ್ಮಾರ್ಟ್, ಎತ್ತರವಾಗಿರುವ, ಬುದ್ದಿವಂತನಾಗಿರುವ, ಒಳ್ಳೆಯವನಾಗಿರುವ ಹುಡುಗನನ್ನ ಸ್ವತಃ ಅಕ್ಷಯ್ ಕುಮಾರ್ ಅವರೇ ಪರಿಚಯ ಮಾಡಿಕೊಟ್ಟಿದ್ದಾರೆ.
ಅಕ್ಷಯ್ ಕುಮಾರ್ 'ಕೇಸರಿ' ಪೋಸ್ಟರ್ ಹೇಳುತ್ತಿದೆ ಸಿಖ್ಖರ ವೀರಕಥೆ
ಹೌದು, ಅಕ್ಷಯ್ ಕುಮಾರ್ ಅವರ ಮಗನ ಅರವ್ ಇತ್ತೀಚಿಗಷ್ಟೆ 16ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಈ ವಿಶೇಷವಾಗಿ ಶುಭಕೋರಿರುವ ನಟ ಅಕ್ಷಯ್ ಕುಮಾರ್ ತಮ್ಮ ಮಗನ ಬಗ್ಗೆ ಹೀಗೆ ಕೊಂಡಾಡಿದ್ದಾರೆ.
''ನನಗಿಂತ ಎತ್ತರ, ನನಗಿಂತ ಸ್ಮಾರ್ಟ್, ನನಗಿಂತ ಹೆಚ್ಚು ಶ್ರೀಮಂತ, ನನಗಿಂತ ಒಳ್ಳೆಯ ವ್ಯಕ್ತಿ. ನೀನು ಯಾವಾಗಲೂ ಖುಷಿಯಾಗಿರು, ಹ್ಯಾಪಿ ಬರ್ತಡೇ'' ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಅಕ್ಷಯ್ ಕುಮಾರ್ ಅಭಿನಯದ 'ಕೇಸರಿ' ಸೆಟ್ ನಲ್ಲಿ ಅಗ್ನಿ ಅವಘಡ.!
ಇನ್ನು ಅರವ್ ಸಿನಿಮಾ ಇಂಡಸ್ಟ್ರಿಗೆ ಬರುವ ಬಗ್ಗೆ ಈ ಹಿಂದಿನಿಂದಲೂ ಚರ್ಚೆಯಾಗುತ್ತಿದೆ. ಆದ್ರೆ, ಸದ್ಯಕ್ಕೆ ಶಿಕ್ಷಣದ ಬಗ್ಗೆ ಮಾತ್ರ ಗಮನ ಹರಿಸುತ್ತಿರುವುದಾಗಿ ಅಕ್ಷಯ್ ಕುಮಾರ್ ತಿಳಿಸಿದ್ದರು.
ಸದ್ಯ, ಅಕ್ಷಯ ಕುಮಾರ್ 'ಕೇಸರಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಕೇಸರಿ' ಚಿತ್ರವನ್ನ ಪಂಜಾಬಿಯ ಖ್ಯಾತ ನಿರ್ದೇಶಕ ಅನುರಾಗ್ ಸಿಂಗ್ ಡೈರೆಕ್ಟ್ ಮಾಡುತ್ತಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಹಾಗೂ ಕೇಪ್ ಆಫ್ ಗುಡ್ ಫಿಲ್ಮ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಕೇಸರಿ ತೆರೆಗೆ ಬರಲಿದೆ.
'ಕೇಸರಿ' ಸಿನಿಮಾ ಐತಿಹಾಸಿಕ ಕಥೆಯಾಗಿದ್ದು, 1987ರಲ್ಲಿ ನಡೆದ ಸಾರಗರ್ಹಿ ಕದನದ ಕಥೆ ಹೊಂದಿದೆ. ಈ ಕದನದಲ್ಲಿ 21 ಸಿಖ್ಖರು, 10 ಸಾವಿರ ಅಫ್ಘಾನ್ ಗಳ ವಿರುದ್ಧ ಹೋರಾಡಿದ್ದರು. ಈ ಕಥೆಯನ್ನಿಟ್ಟು 'ಕೇಸರಿ' ಸಿನಿಮಾ ಮಾಡಲಾಗಿದೆ.