ಮಂಡ್ಯದ ಕಿಕ್ಕೇರಿ ಗ್ರಾಮದ ಜನರಿಗೆ ಬೆಳಕಾದ ನಟಿ ಅಲಿಯಾ ಭಟ್
ಸಿನಿಮಾ ನಟ ನಟಿಯರು ತಮ್ಮ ಸಮಾಜಮುಖಿ ಕೆಲಸಗಳ ಮೂಲಕ ಜನರಿಗೆ ಹತ್ತಿರ ಆಗುತ್ತಾರೆ. ಈಗ ಬಾಲಿವುಡ್ ನಟಿ ಅಲಿಯಾ ಭಟ್ ಕೂಡ ಕನ್ನಡಿಗರ ಪ್ರೀತಿಗೆ ಪಾತ್ರವಾಗಿದ್ದಾರೆ. ಅವರ ಕೆಲಸವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.
ನಟಿ ಅಲಿಯಾ ಭಟ್ ಇದೀಗ ಮಂಡ್ಯದ ಕಿಕ್ಕೇರಿ ಗ್ರಾಮಕ್ಕೆ ಬೆಳಕು ನೀಡಿದ್ದಾರೆ. ಬೆಂಗಳೂರಿನ ಎ.ಆರ್.ಓ.ಎಚ್.ಎ ಸಂಸ್ಥೆ ಪ್ಲಾಸ್ಟಿಕ್ ಬಾಟಲ್ಗಳನ್ನ ಮರುಬಳಕೆ ಮಾಡಿ ವಿದ್ಯುತ್ ಇಲ್ಲದ ಹಳ್ಳಿಯ ಮನೆಗಳಿಗೆ ಸೋಲಾರ್ ಲೈಟ್ ಅನ್ನು ಒದಗಿಸುತ್ತಿದೆ. ಈ ಸಂಸ್ಥೆ ಇತ್ತೀಚೆಗಷ್ಟೆ 'ಲಿಟರ್ ಆಫ್ ಲೈಟ್' ಎಂಬ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಈ ಕಾರ್ಯಕ್ರಮಕ್ಕೆ ಅಲಿಯಾ ಚಾರಿಟಿ ನೀಡಿದ್ದರು.
'ಮಿ ವಾರ್ಡ್ ರೋಬ್ ಈಸ್ ಸು ವಾರ್ಡ್ ರೋಬ್' ಕಾರ್ಯಕ್ರಮದಲ್ಲಿ ಆಲಿಯಾ ಭಟ್ ತಮ್ಮ ಡಿಸೈನರ್ ಬಟ್ಟೆಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದರು. ಇದರಿಂದ ಬಂದ ಹಣವನ್ನು ಚಾರಿಟಿಗೆ ನೀಡಿದ್ದಾರೆ.

ಅಲಿಯಾ ಭಟ್ ನೀಡಿದ್ದ ಹಣದಿಂದ ಎ.ಆರ್.ಓ.ಎಚ್.ಎ ಸಂಸ್ಥೆ ಮಂಡ್ಯದ ಕಿಕ್ಕೇರಿ ಗ್ರಾಮಕ್ಕೆ ಸೋಲಾರ್ ದೀಪವನ್ನು ಒದಗಿಸಿದೆ. ಇದರಿಂದ ಕತ್ತಲಿನಲ್ಲಿ ಇದ್ದ 40 ಕುಟುಂಬಗಳಿಗೆ ಬೆಳಕು ಸಿಕ್ಕಿದೆ.


Click it and Unblock the Notifications











