ಸುಶಾಂತ್ ಸಾವು ಅಸಾಮಾನ್ಯ, ದೇಹ ಹಳದಿ ಬಣ್ಣಕ್ಕೆ ತಿರುಗಿತ್ತು: ಆಂಬ್ಯುಲೆನ್ಸ್ ಸಹಾಯಕ ಬಿಚ್ಚಿಟ್ಟ ಸತ್ಯ
ಸುಶಾಂತ್ ಸಿಂಗ್ ಅವರದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವ ಅನುಮಾನ ಅನೇಕರನ್ನು ಕಾಡುತ್ತಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಪೊಲೀಸರು ಮತ್ತು ಮರಣೋತ್ತರ ವರದಿ ಇದು ಆತ್ಮಹತ್ಯೆ ಎಂದು ಹೇಳಲಾಗಿದೆ. ಆದರೆ ಸುಶಾಂತ್ ಸಿಂಗ್ ಅವರದ್ದು ಕೊಲೆ ಎನ್ನುವ ಅನುಮಾನ ಕೂಡ ವ್ಯಕ್ತವಾಗುತ್ತಿದೆ.
Recommended Video
ಸುಶಾಂತ್ ಸಿಂಗ್ ಸಾವಿನ ಬಳಿಕ ಮೃತ ದೇಹ ನೋಡಿದ ಆಂಬ್ಯುಲೆನ್ಸ್ ಸಹಾಯಕ ಸುಶಾಂತ್ ಸಿಂಗ್ ಸಾವು ಅಸಾಮಾನ್ಯ ಎಂದು ಹೇಳಿದ್ದಾರೆ. ಖಾಸಗಿ ವಾಹಿನಿ ಜೊತೆ ಮಾತನಾಡಿದ ಆಂಬ್ಯುಲೆನ್ಸ್ ಸಹಾಯಕ "ಒಬ್ಬ ವ್ಯಕ್ತಿ ನೇಣು ಹಾಕಿಕೊಂಡರೆ, ಅವರ ದೇಹವು ಹಳದಿ ಬಣ್ಣಕ್ಕೆ ತಿರುಗುವುದಿಲ್ಲ, ಆದರೆ ಸುಶಾಂತ್ ಸಿಂಗ್ ದೇಹ ಹಳದಿ ಬಣ್ಣಕ್ಕೆ ತಿರುಗಿತ್ತು" ಎಂದಿದ್ದಾರೆ.
"ನೇಣು ಹಾಕಿಕೊಂಡಾಗ, ಕುತ್ತಿಗೆಯ ಸುತ್ತ ಗುರುತು ಇರುತ್ತದೆ. ಆದರೆ ಸುಶಾಂತ್ ಸಿಂಗ್ ಕುತ್ತಿಗೆ ಅರ್ಧಂಬರ್ದ ಆಗಿತ್ತು. ಕಾಲುಗಳು ವಿಚಿತ್ರವಾಗಿ ಬಾಗಿದ್ದವು, ಒದೆಯುವ ಸ್ಥಿತಿಯಲ್ಲಿ ಇತ್ತು. ಕಾಲಿನಲ್ಲಿಯೂ ಕಲೆಗಳು ಆಗಿದ್ದವು" ಎಂದು ಬಹಿರಂಗ ಪಡಿಸಿದ್ದಾರೆ.

ಇದೀಗ ಸುಶಾಂತ್ ಸಿಂಗ್ ಪ್ರಕರಣ, ಸಿಬಿಐ ಮತ್ತು ಇಡಿ ತನಿಖೆ ನಡೆಸುತ್ತಿದೆ. ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಮತ್ತು ಸಹೋದರ ಶೋಯಿಕ್ ಮತ್ತು ಆಕೆಯ ತಂದೆ ಜಾರಿ ಇಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಇನ್ನೂ ಫರೀದಾಬಾದ್ ನಲ್ಲಿ ಅವರ ಕೆಕೆ ಸಿಂಗ್ ಅಳಿಯ ಒಪಿ ಸಿಂಗ್ ಮನೆಯಲ್ಲಿ ಸುಶಾಂತ್ ಅವರ ತಂದೆ ಕೆಕೆ ಸಿಂಗ್, ಹಿರಿಯ ಸಹೋದರಿ ರಾಣಿ ಸಿಂಗ್ ಹೇಳಿಕೆಯನ್ನು ಸಿಬಿಐ ದಾಖಲಿಸಿಕೊಂಡಿದೆ.


Click it and Unblock the Notifications











