Don't Miss!
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- News Karnataka Lok Sabha Election 2024: ಮೊದಲ ದಿನ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪೋಲೆಂಡ್ ನಿಂದ 50 ಆಕ್ಸಿಜನ್ ಸಾಂದ್ರಕ ಖರೀದಿಸಿದ ಬಿಗ್ ಬಿ ಅಮಿತಾಬ್ ಬಚ್ಚನ್
ದೇಶದಲ್ಲಿ ಕೋವಿಡ್-19ನಿಂದ ಭೀಕರಸ್ಥಿತಿ ಉಂಟಾಗಿದ್ದು, ಪರಿಹಾರ ಕಾರ್ಯಕ್ಕೆ ಅನೇಕರು ಸಹಾಯ ಮಾಡುತ್ತಿದ್ದಾರೆ. ಕೆಲವು ಸಿನಿಮಾ ಸೆಲೆಬ್ರಿಟಿಗಳು ಸಹ ಕೈ ಜೋಡಿಸಿದ್ದು, ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ 2 ಕೋಟಿ ದೇಣಿಗೆ ನೀಡಿದ್ದಲ್ಲದೇ ವಿದೇಶದಿಂದ ಆಕ್ಸಿಜನ್ ಸಾಂದ್ರಕಗಳನ್ನು ಖರೀದಿಸಿ ದೇಶಕ್ಕೆ ಜೀವರಕ್ಷಕ ವ್ಯವಸ್ಥೆ ಮಾಡಿಸಿದ್ದಾರೆ.
ಸಂಕಷ್ಟದ ಪರಿಸ್ಥಿತಿಯಲ್ಲೂ ಸೆಲೆಬ್ರಿಟಿಗಳು ಎನಿಸಿಕೊಂಡವರು ಸಹಾಯ ಮಾಡುತ್ತಿಲ್ಲ ಎಂದು ಅನೇಕರು ಆಕ್ಷೇಪವೆತ್ತಿದ್ದರು. ಅಮಿತಾಬ್ ವಿರುದ್ಧ ಅನೇಕರು ಅಸಮಾಧಾನ ಹೊರಹಾಕಿದ್ದರು. ಇದರಿಂದ ಬೇಸರಗೊಂಡ ಅಮಿತಾಬ್ ಕೋವಿಡ್ ಸಂಕಷ್ಟದ ಸಮಯದಲ್ಲಿ ತಾವು ಮಾಡಿದ ಸಹಾಯದ ಪಟ್ಟಿ ನೀಡುವ ಮೂಲಕ ಉತ್ತರ ನೀಡಿದ್ದರು.
ಅಮಿತಾಬ್ ಬಚ್ಚನ್ ಏನೂ ಮಾಡಿಲ್ಲ ಎಂದವರಿಗೆ ಸಮಾಜ ಸೇವೆಯ ಪಟ್ಟಿ ನೀಡಿದ ನಟ
ಕೋವಿಡ್-19 ವಿರುದ್ಧದ ಹೋರಾಟಕ್ಕೆ 2 ಕೋಟಿ ರೂ. ದೇಣಿಗೆ ನೀಡಿದ ಬೆನ್ನಲ್ಲೇ ಅಮಿತಾಬ್ ಆಕ್ಸಿಜನ್ ಮತ್ತು ವೆಂಟಿಲೇಟರ್ ಸಹಾಯ ಮಾಡುತ್ತಿದ್ದಾರೆ.
ಅಮಿತಾಬ್ ಪೋಲೆಂಡ್ ನಿಂದ ಆಮ್ಲಜನಕ ಸಾಂದ್ರಕಗಳನ್ನು ಖರೀದಿಸಿದ್ದಾರೆ. ಆಕ್ಸಿಜನ್ ಸಾಂದ್ರಕಗಳನ್ನು ಬೇರೆ ಮೂಲದಿಂದ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು. ಅದರಂತೆ ಈಗ ಪೋಲೆಂಡ್ ನಿಂದ ಖರೀದಿಸುವ ಮೂಲಕ ದೇಶಕ್ಕೆ ಜೀವರಕ್ಷಕ ತಂದಿದ್ದಾರೆ.
ಪೋಲೆಂಡ್ ಜೊತೆ ಅಮಿತಾಬ್ ವಿಶೇಷವಾದ ಸಂಬಂಧ ಹೊಂದಿದ್ದಾರೆ. ಅಮಿತಾಬ್ ತಂದೆ, ಪ್ರಸಿದ್ಧ ಕವಿ ಹರಿವಂಶ್ ರೈ ಬಚ್ಚನ್ ಅವರನ್ನು ಗೌರವಿಸಿದ ನಗರ. ಈಗ ಅದೆ ನಗರದಿಂದ ಭಾರತಕ್ಕೆ ಆಕ್ಸಿಜನ್ ತರಿಸಿದ್ದಾರೆ.
ಪೋಲೆಂಡ್ ನ ರೋಕ್ಲ ನಗರದ ಮೇಯರ್ ಮತ್ತು ಭಾರತದ ರಾಯಭಾರಿ ಜೊತೆ ಮಾತುಕತೆ ನಡೆಸಿ 50 ಆಕ್ಸಿಜನ್ ಸಾಂದ್ರಕಗಳನ್ನು ಆರ್ಡರ್ ಮಾಡಿದ್ದಾರೆ. ಈ ಬಗ್ಗೆ ಅಮಿತಾಬ್ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದು, ಆಕ್ಸಿಜನ್ ತುರ್ತು ಅವಶ್ಯಕತೆ ಇದ್ದ ಕಾರಣ ತ್ವರಿತ ಮೂಲಗಳು ಸಿಗದಿದ್ದಾಗ ನನ್ನ ಸ್ನೇಹಿತ ಮತ್ತು ಪೋಲೆಂಡ್ ನ ರೊಕ್ಲಾದಲ್ಲಿರುವ ಭಾರತೀಯ ರಾಯಭಾರಿ ಸಹಾಯ ಕೇಳಿದೆ. ತಕ್ಷಣ 50 ಆಕ್ಸಿಜನ್ ಸಾಂದ್ರಕಗಳಿಗೆ ಆರ್ಡರ್ ಮಾಡಿದ್ದೀನಿ' ಎಂದಿದ್ದಾರೆ.
Recommended Video
ಈ ಸಾಂದ್ರಕಗಳು ಮೇ 15 ರಂದು ತಲುಪಲಿದೆ. ಇದಕ್ಕೆ ಸಹಾಯಕರಾದ ಎಲ್ಲರಿಗೂ ನನ್ನ ಕೃತಜ್ಞತೆಗಳು ಎಂದಿದ್ದಾರೆ. ಈಗಾಗಲೇ 20 ವೆಂಟಿಲೇಟರ್ ಆರ್ಡರ್ ಮಾಡಿದ್ದು ಅದರಲ್ಲಿ 10 ವೆಂಟಿಲೇಟ್ ಗಳನ್ನು ಬಿಎಂಸಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಇನ್ನು ಉಳಿದ 10 ವೆಂಟಿಲೇಟರ್ ಗಳು ಈ ತಿಂಗಳ ಕೊನೆಯಲ್ಲಿ ತುಲುಪಲಿದ್ದು, ಬೇರೆ ಬೇರೆ ಆಸ್ಪತ್ರೆಗೆ ನೀಡುವುದಾಗಿ ಹೇಳಿದ್ದಾರೆ.