Don't Miss!
- Sports PBKS vs MI: ಐಪಿಎಲ್ನಲ್ಲಿ ಈ ಇತಿಹಾಸ ನಿರ್ಮಿಸಿದ 2ನೇ ಆಟಗಾರ ರೋಹಿತ್ ಶರ್ಮಾ
- News ಸಿಎಂ ಸಿದ್ದರಾಮಯ್ಯಗೆ ಡಾ.ಕೆ.ಸುಧಾಕರ್ ಸವಾಲು!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Lifestyle ಊಟದ ರುಚಿ ಹೆಚ್ಚಿಸುತ್ತೆ ಚೌಳಿಕಾಯಿ ಪಲ್ಯ..! ಹೀಗೆ ಮಾಡಿ
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಾಕ್ ಡೌನ್ ಮಧ್ಯೆಯೇ ಗ್ರಾಜುಯೇಷನ್: ಅಮಿತಾಬ್ ಮೊಮ್ಮಗಳನ್ನು ಟ್ರೋಲ್ ಮಾಡಿದ ನೆಟ್ಟಿಗರು
ಅಮಿತಾಬ್ ಬಚ್ಚನ್ ಮಗಳು ಶ್ವೇತಾ ಬಚ್ಚನ್ ನಂದಾ ಅವರ ಪುತ್ರಿ ನವ್ಯಾ ನವೇಲಿ ನಂದಾ ನ್ಯೂಯಾರ್ಕ್ನ ಫೋರ್ಢಮ್ ವಿಶ್ವವಿದ್ಯಾಲಯದಿಂದ ಮೇ 6ರಂದು ಪದವಿ ಪಡೆದಿದ್ದಾರೆ. ಕೊರೊನಾ ವೈರಸ್ ಲಾಕ್ ಡೌನ್ ಕಾರಣದಿಂದ ಅವರ ಘಟಿಕೋತ್ಸವ ಸಮಾರಂಭ ನಡೆದಿಲ್ಲ.
Recommended Video
ಹೀಗಾಗಿ ಅವರ ಕುಟುಂಬವೇ ಅಮಿತಾಬ್ ಬಚ್ಚನ್ ಅವರ ಮುಂಬೈನ ಜಲ್ಸಾ ನಿವಾಸದಲ್ಲಿ ವಿಶೇಷ ಘಟಿಕೋತ್ಸವ ಸಮಾರಂಭ ಆಯೋಜಿಸಿ ಸಂಭ್ರಮಿಸಿದೆ. ನವ್ಯಾ ಪದವಿ ಸಮಾರಂಭದ ದಿರಿಸು ತೊಡುವ ಮೂಲಕ ಘಟಿಕೋತ್ಸವದ ಖುಷಿಯನ್ನು ಆಚರಿಸಿದ್ದಾರೆ. ಆಕೆಯ ಸಾಧನೆ ಬಗ್ಗೆ ಅಜ್ಜ ಅಮಿತಾಬ್ ಬಚ್ಚನ್ ಮತ್ತು ಸೋದರ ಮಾವ ಅಭಿಷೇಕ್ ಬಚ್ಚನ್ ಸುದೀರ್ಘ ಬರಹ ಬರೆದು ಶುಭಾಶಯ ಕೋರಿದ್ದಾರೆ. ಆದರೆ ಈ ಸಂಭ್ರಮಾಚರಣೆ ನೆಟ್ಟಿಗರ ಕೆಂಗಣ್ಣಗೆ ಗುರಿಯಾಗಿದೆ. ನವ್ಯಾ ಹಾಗೂ ಅಮಿತಾಬ್ ಕುಟುಂಬವನ್ನು ನೆಟಿಜನ್ಗಳು ಟ್ರೋಲ್ ಮಾಡಿದ್ದಾರೆ. ಮುಂದೆ ಓದಿ...
ರಿಷಿ ಕಪೂರ್ರನ್ನು ನೋಡಲು ಅಮಿತಾಬ್ ಒಮ್ಮೆಯೂ ಆಸ್ಪತ್ರೆಗೆ ಹೋಗಲಿಲ್ಲ: ಕಾರಣ ಇದು
ನಾವು ಕೆಲಸದ ಬಗ್ಗೆ ಯೋಚಿಸುತ್ತೇವೆ
'ನಾವು ಪದವಿ ಪೂರೈಸಿದಾಗ ಕೆಲಸ, ಹಣಕಾಸಿನ ವಿಚಾರದ ಬಗ್ಗೆ ಆಲೋಚನೆ ಮಾಡುತ್ತೇವೆ. ಆದರೆ ಶ್ರೀಮಂತ ವ್ಯಕ್ತಿಗಳು ಸಂಭ್ರಮಿಸುತ್ತಾರೆ. ಏಕೆಂದರೆ ಅವರು ತಾವೇನೋ ಮಹಾನ್ ಸಾಧನೆ ಮಾಡಿದ್ದೇವೆ ಎಂಬ ಭಾವನೆಯಲ್ಲಿರುತ್ತಾರೆ. ಆದರೆ ನಾವು ಜಿಆರ್ಇ/ಸಿಎಟಿ ಮುಂತಾದವುಗಳ ಬಗ್ಗೆ ಯೋಚಿಸುತ್ತೇವೆ. ಇದರ ಮೂಲಕ ನಾವು ಮುಂದೆ ಓದಲು ಒಳ್ಳೆಯ ಸಂಸ್ಥೆಗೆ ಹೋಗಬಹುದು ಎನ್ನುವುದು ನಮ್ಮ ಉದ್ದೇಶ' ಎಂದು ಅಭಿಷೇಕ್ ವರ್ಮಾ ಎಂಬುವವರು ಹೇಳಿದ್ದಾರೆ.
ಇದೆಂತಾ ಭಯಾನಕ ಜೀನ್ಸ್?
ಮಹಿಳಾ ವಿದ್ಯಾರ್ಥಿಗೆ ಸೂಕ್ತವಾದ ಪದವಿ ಗೌನ್ ಹೊಲಿಯುವ ಪ್ರಯತ್ನ ಮುಗಿದ ಬಳಿಕ ಆಕೆ ಅಂತಹ ಭಯಾನಕವಾದ ಜೀನ್ಸ್ ಪ್ಯಾಂಟ್ ಧರಿಸಿದ್ದಾಳೆ. ಯಾಕಣ್ಣ? ಎಂದು ಆರ್ಟಿ ಮಾರ್ಟಿನ್ ಎಂಬುವವರು ನವ್ಯಾ ಧರಿಸಿರುವ ಉಡುಗೆಯನ್ನು ಲೇವಡಿ ಮಾಡಿದ್ದಾರೆ.
ತೆಲುಗು ಚಿತ್ರರಂಗದ ದಿನಗೂಲಿ ಕಾರ್ಮಿಕರಿಗೆ ಅಮಿತಾಬ್ ಬಚ್ಚನ್ ಸಹಾಯ
ಎಲ್ಲದಕ್ಕೂ ಭಾರತ ಬೇಕು..
'ಅಭಿನಂದನೆಗಳು. ಆದರೆ ನ್ಯೂಯಾರ್ಕ್ ಏಕೆ? ನಾವು ಭಾರತದಲ್ಲಿ ಅನ್ನ ತಿನ್ನುತ್ತೇವೆ, ಭಾರತದಲ್ಲಿ ಸಂಪಾದಿಸುತ್ತೇವೆ, ಭಾರತದಲ್ಲಿ ಬದುಕುತ್ತೇವೆ, ಭಾರತದಲ್ಲಿ ಜನಪ್ರಿಯತೆ ಪಡೆಯುತ್ತೇವೆ, ಇತ್ಯಾದಿ... ಆದರೆ ಶಿಕ್ಷಣಕ್ಕೆ ನ್ಯೂಯಾರ್ಕ್. ನನಗೆ ಇದು ಅರ್ಥವಾಗುತ್ತಿಲ್ಲ' ಎಂದು ಸರ್ದಾರ್ ಸಿಂಗ್ ಕುಶ್ವಾಹ್ ಟೀಕಿಸಿದ್ದಾರೆ.
ಜನರಿಗೆ ಊಟ ಇಲ್ಲ...
ಎಂತಹ ಹಾಳಾದ ಮಗು ಇದು! ಜನರು ಊಟಕ್ಕಿಲ್ಲದೆ ಪರದಾಡುತ್ತಿದ್ದಾರೆ. ಆದರೆ ಈಕೆ ಗೌನ್ ಮತ್ತು ಟೊಪ್ಪಿ ಧರಿಸಲು ಬಯಸಿದ್ದಾಳೆ. ಕೆಲಸದವರು ಹೊಲಿದಿದ್ದಾ ಇದು? ಲಾಕ್ ಡೌನ್ ಸಮಯದಲ್ಲಿ ಶ್ರೀಮಂರಿಕೆಯ ದರ್ಪದವರ ಬೇಡಿಕೆಯಂತೆ ಜನರನ್ನು ಕೆಲಸಕ್ಕೆ ತೊಡಗಿಸಿದ್ದಾರೆಯೇ? ಎಂದು ಪ್ರಾಚಿ ದೇಸಾಯಿ ಎಂಬುವವರು ಕಿಡಿಕಾರಿದ್ದಾರೆ.