twitter
    For Quick Alerts
    ALLOW NOTIFICATIONS  
    For Daily Alerts

    ಹುತಾತ್ಮ ಯೋಧರ ಕುಟುಂಬದ ನೆರವಿಗೆ ಬಂದ ಬಚ್ಚನ್

    |

    ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರ ಕುಟುಂಬಕ್ಕೆ ನೆರವಾಗಲು ಸರ್ಕಾರದ ಜೊತೆಗೆ ವಿವಿಧ ಕ್ಷೇತ್ರದ ಗಣ್ಯರು ಕೂಡ ಬರುತ್ತಿದ್ದಾರೆ. ಇದೀಗ ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಸಹ ಯೋಧರ ಕುಟುಂಬಗಳ ಸಹಾಯಕ್ಕೆ ಮುಂದಾಗಿದ್ದಾರೆ.

    ದಾಳಿಯಲ್ಲಿ ಹತರಾದ ಭಾರತದ ಸೈನಿಕರ ಕುಟುಂಬಗಳಿಗೆ ತಲಾ 5 ಲಕ್ಷ ಹಣ ನೀಡುವುದಾಗಿ ಅವರ ಪಿ ಆರ್ ಒ ತಿಳಿಸಿದ್ದಾರೆ‌. ಯೋಧರ ಕುಟುಂಬಕ್ಕೆ ಹಣ ನೀಡಲಿದ್ದು, ಯಾವ ರೀತಿ ಅದನ್ನು ಸರಿಯಾಗಿ ತಲುಪಿಸಬೇಕು ಎಂಬ ಚರ್ಚೆ ಮಾಡುತ್ತಿದ್ದಾರಂತೆ. ಸರ್ಕಾರ ಇದಕ್ಕಾಗಿ ಒಂದು ವ್ಯವಸ್ಥೆ ಮಾಡಿದರೆ ಆ ಮೂಲಕ ತಮ್ಮ ಹಣವನ್ನು ತಲುಪಿಸುವ ನಿರ್ಧಾರಕ್ಕೆ ಬಂದಿದ್ದಾರಂತೆ. ಯೋಧರ ವಿಷಯ ತಿಳಿದ ದಿನ ತಮ್ಮೆಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಯೋಧರ ದುಃಖದಲ್ಲಿ ಭಾಗಿಯಾಗಿದ್ದರು.

    ಹುತಾತ್ಮ ಯೋಧ ಗುರು ಕುಟುಂಬಕ್ಕೆ ಧನ ಸಹಾಯ ಮಾಡಿದ 'ಬೆಲ್ ಬಾಟಂ' ತಂಡ ಹುತಾತ್ಮ ಯೋಧ ಗುರು ಕುಟುಂಬಕ್ಕೆ ಧನ ಸಹಾಯ ಮಾಡಿದ 'ಬೆಲ್ ಬಾಟಂ' ತಂಡ

    Amitabh Bachchan to donate 5 lakh to each CRPF martyrs family

    ಬಚ್ಚನ್ ಮಾತ್ರವಲ್ಲದೆ ಭಾರತದ ಕ್ರಿಕೆಟ್ ಆಟಗಾರರು ಸಹ ಯೋಧರ ಕುಟುಂಬದ ಸಹಾಯಕ್ಕೆ ಮುಂದೆ ಬಂದಿದ್ದಾರೆ. ಕನ್ನಡದ 'ಬೆಲ್ ಬಾಟಂ' ಹಾಗೂ 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರಗಳು ಯೋಧರ ಕುಟುಂಬಕ್ಕೆ ಧನ ಸಹಾಯ ಮಾಡುವುದಾಗಿ ಹೇಳಿವೆ.

    'ಯೋಧ ಗುರು' ಕುಟುಂಬಕ್ಕೆ 'ಕೆಮಿಸ್ಟ್ರಿ ಕರಿಯಪ್ಪ' ಚಿತ್ರತಂಡ ನೆರವು 'ಯೋಧ ಗುರು' ಕುಟುಂಬಕ್ಕೆ 'ಕೆಮಿಸ್ಟ್ರಿ ಕರಿಯಪ್ಪ' ಚಿತ್ರತಂಡ ನೆರವು

    ಘಟನೆಯ ವಿವರ

    ಫೆಬ್ರವರಿ 14 ರಂದು ಜಮ್ಮು ಕಾಶ್ಮಿರದ ಪುಲ್ವಾಮಾ ಬಳಿ ಭಾರತ ಸೈನಿಕರ ಮೇಲೆ ಜೈಷ್‌-ಏ ಮೊಹ್ಮದ್‌ ಉಗ್ರ ಸಂಘಟನೆ ದಾಳಿ ಮಾಡಿತ್ತು. ಇದರಲ್ಲಿ ಭಾರತದ 49 ಯೋಧರು ಹುತಾತ್ಮರಾದರು.

    English summary
    Bollywood actor Amitabh Bachchan to donate 5 lakh to each CRPF martyrs family.
    Monday, February 18, 2019, 8:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X