Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ಶ್ರೀದೇವಿಗಾಗಿ ಕಿತ್ತಾಡಿಕೊಂಡಿದ್ದರು ಅನಿಲ್ ಕಪೂರ್ ಮತ್ತು ಬೋನಿ ಕಪೂರ್ ಸಹೋದರರು
ಭಾರತೀಯ ಚಿತ್ರರಂಗದ ಖ್ಯಾತ ನಟಿ ಶ್ರೀದೇವಿ ನಿಧನಹೊಂದಿ 3 ವರ್ಷಗಳಾಗಿವೆ. ದುರಂತ ಅಂತ್ಯ ಕಂಡ ಬಾಲಿವುಡ್ ಚಾಂದನಿ ಈಗ ನೆನಪು ಮಾತ್ರ. ಶ್ರೀದೇವಿ ಇಲ್ಲವಾದರು ಅವರ ಹೆಸರು ಆಗಾಗ ಸುದ್ದಿಯಲ್ಲಿರುತ್ತೆ.
Recommended Video
ಸದ್ಯ ಶ್ರೀದೇವಿ ಹೆಸರು ಮತ್ತೆ ಸದ್ದು ಮಾಡುತ್ತಿದೆ. ಬಾಲಿವುಡ್ ಖ್ಯಾತ ನಟಿ ಶ್ರೀದೇವಿಗಾಗಿ, ಪತಿ ಬೋನಿ ಕಪೂರ್ ಮತ್ತು ಅನಿಲ್ ಕಪೂರ್ ಇಬ್ಬರು ಕಿತ್ತಾಡಿಕೊಂಡಿರುವ ವಿಚಾರ ಈಗ ವೈರಲ್ ಆಗಿದೆ.ಲಾಕ್ ಡೌನ್ ಸಮಯದಲ್ಲಿ ಬೋನಿ ಕಪೂರ್ ಮತ್ತು ಅನಿಲ್ ಕಪೂರ್ ಗಲಾಟೆಯ ಮ್ಯಾಟ್ರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ಶ್ರೀದೇವಿಗಾಗಿ ಇಬ್ಬರು ಕಿತ್ತಾಡಿಕೊಂಡಿದ್ದೇಕೆ? ಮುಂದೆ ಓದಿ..
ಶ್ರೀದೇವಿಯನ್ನು ಮದುವೆ ಆಗುವುದಿಲ್ಲ ಎಂದಿದ್ದ ಕಮಲ್ ಹಾಸನ್: ಕಾರಣ ಏನು?
ಅನಿಲ್ ಕಪೂರ್ ಮತ್ತು ಬೋನಿ ಕಪೂರ್ ಸಹೋದರರು
ಬಾಲಿವುಡ್ ಖ್ಯಾತ ನಟ ಅನಿಲ್ ಕಪೂರ್ ಮತ್ತು ಬೋನಿ ಕಪೂರ್ ಸಹೋದರರು ಎನ್ನುವುದಕ್ಕಿಂತ ಉತ್ತಮ ಸ್ನೇಹಿತರು. ಈಗಲು ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ಆದರೆ ಒಂದು ಕಾಲದಲ್ಲಿ ಬೋನಿ ಕಪೂರ್ ಶ್ರೀದೇವಿ ಅವರನ್ನು ಮದುವೆ ಆಗುವ ಮೊದಲೆ, ಇಬ್ಬರು ಶ್ರೀದೇವಿ ವಿಚಾರದಲ್ಲಿ ಕಿತ್ತಾಡಿಕೊಂಡು ಮುನಿಸಿಕೊಂಡಿದ್ದರು.
ಮಿ.ಇಂಡಿಯಾ ಸಿನಿಮಾದ ಚಿತ್ರೀಕರಣದ ಸಮಯ
ಬಾಲಿವುಡ್ ನ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿರುವ ಮಿ.ಇಂಡಿಯಾ ಚಿತ್ರದಲ್ಲಿ ಶ್ರೀದೇವಿ ಮತ್ತು ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಸಮಯದಲ್ಲಿ ಬೋನಿ ಕಪೂರ್ ಮತ್ತು ಅನಿಲ್ ಕಪೂರ್ ಇಬ್ಬರು ಜಗಳವಾಡಿಕೊಂಡಿದ್ದರು. ಇದರ ಪರಿಣಾಮ ಅನಿಲ ಕಪೂರ್ ಕೋಪಮಾಡಿಕೊಂಡು ಚಿತ್ರೀಕರಣ ಸೆಟ್ ನಿಂದ ಹೊರಟೋಗಿದ್ದರು.
ಶ್ರೀದೇವಿ ಮಾತು ಧಿಕ್ಕರಿಸಿದ ಪತಿ ಬೋನಿ ಕಪೂರ್ ಹೊಸ ಚಿತ್ರಕ್ಕೆ ಒಪ್ಪಿಗೆ
ಬೋನಿ ಕಪೂರ್ ನಿರ್ಮಾಣದ ಸಿನಿಮಾ
ಮಿ.ಇಂಡಿಯಾ ಬೋನಿ ಕಪೂರ್ ನಿರ್ಮಾಣದ ಸಿನಿಮಾ. ಚಿತ್ರಕ್ಕೆ ನಟ ಅನಿಲ್ ಕಪೂರ್ ಸಹ ಬಂಡವಾಳ ಹೂಡಿದ್ದಾರೆ. ಬೋನಿ ಕಪೂರ್ ಇನ್ನೂ ಶ್ರೀದೇವಿಯನ್ನು ಮದುವೆ ಆಗಿರಲಿಲ್ಲ. ಈ ಸಿನಿಮಾಗೆ ಶ್ರೀದೇವಿಯೆ ನಾಯಕಿಯಾಗಿಬೇಕೆನ್ನುವುದು ಬೋನಿ ಕಪೂರ್ ಆಸೆ. ಅಂದರಂತೆ ಬೋನಿ ಕಪೂರ್ ಸಿನಿಮಾಗಾಗಿ ಶ್ರೀದೇವಿಯನ್ನು ಅಪ್ರೋಚ್ ಮಾಡಿದ್ದಾರೆ. ಆದರೆ ಶ್ರೀದೇವಿ ಸಿನಿಮಾದ ಆಫರ್ ನಿರಾಕರಿಸಿದ್ದಾರೆ.
ಸಂಭಾವನೆ ವಿಚಾರಕ್ಕೆ ಕಿರಿಕ್
ಸಂಭಾವನೆ ವಿಚಾರಕ್ಕೆ ನಟಿ ಶ್ರೀದೇವಿ ಮೊದಲು ಮಿ.ಇಂಡಿಯಾ ಸಿನಿಮಾದ ಆಫರ್ ಅನ್ನು ರಿಜೆಕ್ಟ್ ಮಾಡಿದ್ದಾರೆ. ಆನಂತರ 10 ಲಕ್ಷ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ. ಆದರೆ ಬೋನಿ ಕಪೂರ್, ಶ್ರೀದೇವಿ ಕೇಳಿದ ಸಂಭಾವನೆಗಿಂತ ಹೆಚ್ಚಿನ ಮೊತ್ತದ ಹಣ ಅಂದರೆ 11 ಲಕ್ಷ ಕೊಡಲು ಮುಂದಾಗಿದ್ದಾರೆ. ಇದು ಅನಿಲ್ ಕಪೂರ್ ಕೋಪಕ್ಕೆ ಕಾರಣವಾಯಿತು. ದೊಡ್ಡ ಮೊತ್ತದ ಸಂಭಾವನೆ ಕೊಡಲು ಅನಿಲ್ ಕಪೂರ್ ಒಪ್ಪಲಿಲ್ಲ.
ಇರ್ಫಾನ್ ಖಾನ್, ಶ್ರೀದೇವಿ ಸಾವಿನ ಬಗ್ಗೆ ಕುಹಕವಾಡಿದ ಪಾಕಿಸ್ತಾನಿ ನಿರೂಪಕ
ಹಣಕಾಸಿನ ಸಮಸ್ಯೆಯಲ್ಲಿದ್ದ ಶ್ರೀದೇವಿ
ಆಗಲೆ ಶ್ರೀದೇವಿ ದೊಡ್ಡ ನಟಿಯಾಗಿ ಗುರುತಿಸಿಕೊಂಡಿದ್ದರು. ಆದರೂ ಶ್ರೀದೇವಿಗೆ ಹಣಕಾಸಿನ ಸಮಸ್ಯೆ ಎದುರಾಗಿತ್ತು. ತಾಯಿಯ ಚಿಕಿತ್ಸೆಗೆ ಹಣ ಹೊಂದಿಸಲು ಶ್ರೀದೇವಿ ಪರದಾಡುತ್ತಿದ್ದರು. ಇದನ್ನು ಅರಿತ ಬೋನಿ ಕಪೂರ್, ಶ್ರೀದೇವಿ ನೆರವಿಗೆ ಬಂದಿದ್ದಾರೆ. ತಾಯಿಯ ಚಿಕಿತ್ಸೆಯ ಜವಾಬ್ದಾರಿ ವಹಿಸಿಕೊಂಡಿದ್ದು ಮಾತ್ರವಲ್ಲದೆ, ಯುಎಸ್ ಹೋಗಲು ಟಿಕೆಟ್ ಬುಕ್ ಮಾಡಿ ಶ್ರೀದೇವಿ ಅವರನ್ನು ಕಳುಹಿಸಿಕೊಟ್ಟಿದ್ದಾರೆ.
ಚಿತ್ರೀಕರಣ ಸೆಟ್ ನಲ್ಲಿ ಸಿಡಿದೆದ್ದ ಅನಿಲ್ ಕಪೂರ್
ಬೋನಿ ಕಪೂರ್ ನಿರ್ಧಾರ, ಸಹೋದರ ಅನಿಲ್ ಕಪೂರ್ ಗೆ ಸ್ಪಲ್ಪವು ಹಿಡಿಸಿರಲಿಲ್ಲ. ಹಾಗಾಗಿ ಮಿ.ಇಂಡಿಯಾ ಸಿನಿಮಾ ಚಿತ್ರೀಕರಣದ ಸೆಟ್ ನಲ್ಲಿಯೆ ಅನಿಲ್ ಕಪೂರ್ ಸಿಡಿದೆದ್ದರು. ಕೋಪ ಮಾಡಿಕೊಂಡು ಚಿತ್ರೀಕರಣ ಅರ್ಧಕ್ಕೆ ಬಿಟ್ಟು ಹೊರಟೋದರು. ಆ ನಂತರ ನಿರ್ದೇಶಕ ಶೇಖರ್ ಕಪೂರ್, ಅನಿಲ್ ಕಪೂರ್ ಮನವಲಿಸಿ ಮತ್ತೆ ಚಿತ್ರೀಕರಣಕ್ಕೆ ಕರೆದುಕೊಂಡು ಬಂದು ಚಿತ್ರೀಕರಣ ಮಾಡಿ ಮುಗಿಸಿದ್ದಾರೆ.
ಮಿ.ಇಂಡಿಯಾ ದೊಡ್ಡ ಮಟ್ಟದಲ್ಲಿ ಯಶಸ್ಸುಕಂಡ ಸಿನಿಮಾ
ಕಿತ್ತಾಟ, ಮನಸ್ತಾಪದ ನಡುವೆ ಮಿ.ಇಂಡಿಯಾ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿ ತೆರೆಗೆ ಬಂತು. ಮೇ 29ಕ್ಕೆ ಸಿನಿಮಾ ರಿಲೀಸ್ ಆಗಿದ್ದು, ದೊಡ್ಡ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಯಿತು. ಶ್ರೀದೇವಿ ಅಭಿನಯ, ಅಮ್ರೀಶ್ ಪುರಿ ಪಾತ್ರ, ಹಾಡುಗಳು ಭಾರತೀಯ ಚಿತ್ರಾಭಿಮಾನಿಗಳ ನಿದ್ದೆಗೆಡಿಸಿತ್ತು. ಆ ಕಾಲಕ್ಕೆ ಮಿ.ಇಂಡಿಯಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿ ದಾಖಲೆ ಬರೆದ ಸಿನಿಮಾವಾಗಿದೆ.