Don't Miss!
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿರ್ದೇಶಕ ವಿಕಾಸ್ ವಿರುದ್ಧ ಮತ್ತೊಂದು ಗಂಭೀರ ಆರೋಪ.!
ಲೈಂಗಿಕ ಕಿರುಕುಳದ ವಿರುದ್ಧ ನಟಿ ತನುಶ್ರೀ ದತ್ತಾ ಸಿಡಿದೆದ್ದ ಮೇಲೆ ಬಾಲಿವುಡ್ ನಲ್ಲಿ ನಟಿಯರು ಒಬ್ಬೊಬ್ಬರಾಗಿಯೇ ತಮ್ಮ 'ಕೆಟ್ಟ' ಅನುಭವವನ್ನು ಹೊರಹಾಕುತ್ತಿದ್ದಾರೆ. ನಟ ನಾನಾ ಪಾಟೇಕರ್ ಹಾಗೂ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧ ತನುಶ್ರೀ ದತ್ತಾ ಬಾಂಬ್ ಸಿಡಿಸಿದ್ಮೇಲೆ, ನಿರ್ದೇಶಕ ವಿಕಾಶ್ ಬಾಹ್ಲ್ ವಿರುದ್ಧ ನಟಿ ಕಂಗನಾ ರಣೌತ್ ಗುಡುಗಿದರು.
''ನನ್ನನ್ನ ಬಿಗಿದಪ್ಪಿ ''ನನಗೆ ನಿನ್ನ ಸ್ಮೆಲ್ ಕಂಡ್ರೆ ಇಷ್ಟ'' ಎಂದು ವಿಕಾಸ್ ಹೇಳುತ್ತಿದ್ದರು. ಆತನ ಅಪ್ಪುಗೆಯಿಂದ ಬಿಡಿಸಿಕೊಳ್ಳಲು ನಾನು ಹೆಣಗಾಡಬೇಕಿತ್ತು. ಆತನಲ್ಲಿ ಏನೋ ಸಮಸ್ಯೆ ಇದೆ'' ಅಂತ ನಿರ್ದೇಶಕ ವಿಕಾಸ್ ಬಾಹ್ಲ್ ವಿರುದ್ಧ ಕಂಗನಾ ಹೇಳಿಕೆ ಕೊಟ್ಟರು.
ನಾನಾ ಪಾಟೇಕರ್ ಬಗ್ಗೆ ಲೈಂಗಿಕ ಕಿರುಕುಳದ ಬಾಂಬ್ ಸಿಡಿಸಿದ ತನುಶ್ರೀ ದತ್ತಾ.!
ಇದೀಗ ಅದೇ ವಿಕಾಸ್ ಬಾಹ್ಲ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ''ಕುಡಿದು ತೂರಾಡುವಂತೆ ನಾಟಕ ಆಡುವ ವಿಕಾಸ್, ನನ್ನ ತುಟಿಗೆ ಮುತ್ತಿಡಲು ಪ್ರಯತ್ನಿಸಿದ್ದರು'' ಎಂದು ನಟಿಯೊಬ್ಬರು ಹೇಳಿದ್ದಾರೆ. ಮುಂದೆ ಓದಿರಿ...
ಮುತ್ತು ಕೊಡಲು ಯತ್ನ
''ಒಮ್ಮೆ ಪಾರ್ಟಿಗೆ ಹೋಗಿದ್ದೆ. ಅಲ್ಲಿ ಏನಿಲ್ಲ ಅಂದರೂ 20 ಜನ ಇದ್ದರು. ಕುಡಿದ ನಶೆಯಲ್ಲಿ (ನಾಟಕ ಆಗಿರಬಹುದು) ಒತ್ತಾಯ ಪೂರ್ವಕವಾಗಿ ನನ್ನ ತುಟಿಗೆ ಮುತ್ತು ಕೊಡಲು ವಿಕಾಸ್ ಪ್ರಯತ್ನಿಸಿದರು. ನಾನು ಆತನನ್ನು ತಳ್ಳಿ ಆ ಜಾಗದಿಂದ ಹೊರಗೆ ಬಂದೆ'' ಎಂದು ಹೆಸರು ಹೇಳಲು ಇಚ್ಛಿಸದ ನಟಿಯೊಬ್ಬರು 'ಮಿಸ್ ಮಾಲಿನಿ'ಗೆ ಕೊಟ್ಟ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಖ್ಯಾತ ನಿರ್ದೇಶಕ ವಿಕಾಸ್ ಭಾಲ್ ಮುಖವಾಡ ಕಳಚಿದ ಕಂಗನಾ.!
ನಾಟಕ ಆಡುವುದೇ ಸ್ಟ್ರಾಟೆಜಿ
''ಕುಡಿದ ನಶೆಯಲ್ಲಿ ತೇಲಾಡುವಂತೆ ನಾಟಕ ಆಡುವ ಅಭ್ಯಾಸ ವಿಕಾಸ್ ಗಿದೆ. ಅದೇ ಆತನ ಸ್ಟ್ರಾಟೆಜಿ. ಕುಡಿದಂತೆ ನಾಟಕ ಆಡಿ ಬಳಿಕ ''ನಾನೇನೂ ಮಾಡಲಿಲ್ಲ. ನೀವೇನಾದರೂ ಮಾಡಿದ್ರಾ.?'' ಅಂತ ಪ್ರಶ್ನಿಸುತ್ತಾನೆ ಅಂತಾರೆ 'ಆ' ನಟಿ.
ಲೈಂಗಿಕ ಕಿರುಕುಳ ಪ್ರಕರಣ : ಕಂಗನಾ ಮತ್ತು ಸೋನಮ್ ಮಧ್ಯೆ ಡೈಲಾಗ್ ವಾರ್
ಗುಟ್ಟಾಗಿ ಉಳಿದಿಲ್ಲ
''ವಿಕಾಸ್ ಬಾಹ್ಲ್ ವರ್ತನೆ ಸೀಕ್ರೆಟ್ ಆಗಿ ಉಳಿದಿಲ್ಲ. ಆತನ ಮಾಜಿ ಪತ್ನಿಗೆ ಎಲ್ಲಾ ಗೊತ್ತಿತ್ತು. ಪಾಪ, ಆಕೆಯ ಜೀವನವನ್ನ ಈತ ಹಾಳು ಮಾಡಿದ. ಇಂತಹ ವರ್ತನೆಯಿಂದ ವಿಕಾಸ್ ಕೆಲವು ಕಡೆ ಕೆಲಸ ಕಳೆದುಕೊಂಡಿದ್ದೂ ಇದೆ'' ಎನ್ನುತ್ತಾರೆ ಆ ನಟಿ.
ನಾನಾ ಪಾಟೇಕರ್ ಸೇರಿ 10 ಜನರ ವಿರುದ್ಧ ದೂರು ನೀಡಿದ ತನುಶ್ರೀ ದತ್ತಾ
ಒಬ್ಬೊಬ್ಬರ ಹೆಸರು ಬಹಿರಂಗ
ಇಷ್ಟು ದಿನ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಇದೆ. ಕೆಲ ನಿರ್ದೇಶಕರು, ನಟರು ಕಿರುಕುಳ ಕೊಡ್ತಾರೆ ಎಂಬ ಮಾತುಗಳು ಮಾತ್ರ ಕೇಳಿಬರುತ್ತಿತ್ತು. ಆದ್ರೀಗ, ನಟ, ನಿರ್ದೇಶಕರ ಹೆಸರುಗಳನ್ನು ನಟಿಯರು ಬಹಿರಂಗ ಪಡಿಸುತ್ತಿದ್ದಾರೆ. ಇನ್ನಾದರೂ ಈ ಪಿಡುಗು ಅಂತ್ಯ ಕಾಣಲಿ ಎನ್ನುವುದೇ ಎಲ್ಲರ ಆಶಯ.