Don't Miss!
- News ಕೇಂದ್ರದ ಬಿಜೆಪಿ ಸರ್ಕಾರದಿಂದ ಅನ್ನದಾತರಿಗೆ ಮೋಸ ; ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದ ಸಂಯುಕ್ತಾ ಪಾಟೀಲ್
- Finance ಬೆಂಗಳೂರು, ನೋಯ್ಡಾ, ಪುಣೆಯಲ್ಲಿ ಶೀಘ್ರದಲ್ಲೇ ಹೊಸ ಆಪಲ್ ಸ್ಟೋರ್ ಪ್ರಾರಂಭ
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Automobiles ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
- Lifestyle ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು.! ಹೇಗೆ ಗೊತ್ತಾ?
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೇರಳಗೆ 1 ಕೋಟಿ ಸಹಾಯ ಮಾಡಿದ ಎಆರ್ ರೆಹಮಾನ್
ಜಲ ಪ್ರವಾಹಕ್ಕೆ ತುತ್ತಾಗಿ ಸಂಕಷ್ಟಕ್ಕೆ ಸಿಲುಕಿದ್ದ ಕೇರಳ ರಾಜ್ಯಕ್ಕೆ ಬಾಲಿವುಡ್ ಚಿತ್ರರಂಗದ ಹಲವು ತಾರೆಯರು ನೆರವು ನೀಡಿದ್ದಾರೆ. ಇದೀಗ, ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ತಮ್ಮ ಸಹಾಯವನ್ನ ನೀಡಿದ್ದಾರೆ.
ಹೌದು, ಆಸ್ಕರ್ ವಿಜೇತ ಮ್ಯಾಜಿಕ ಕಂಪೋಸರ್ ಎಆರ್ ರೆಹಮಾನ್ ಕೇರಳ ಸಂತ್ರಸ್ಥರಿಗಾಗಿ ಒಂದು ಕೋಟಿ ರೂಪಾಯಿ ನೀಡಿದ್ದಾರೆ. ಈ ವಿಷ್ಯವನ್ನ ಖುದ್ದು ರೆಹಮಾನ್ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಖಚಿತ ಪಡಿಸಿದ್ದಾರೆ.
ತಮಿಳು ನಟ ವಿಜಯ್ ಕೇರಳಗೆ ಕೊಟ್ಟಿದ್ದು 14 ಕೋಟಿಯಲ್ಲ.! ಮತ್ತೆಷ್ಟು.?
ಸದ್ಯ, ತಮ್ಮ ತಂಡದೊಂದಿಗೆ ಯುಎಸ್ ನಲ್ಲಿರುವ ರೆಹಮಾನ್, 'ಕೇರಳದ ಸಹೋದರ ಹಾಗೂ ಸಹೋದರಿಯರಿಗಾಗಿ ತಮ್ಮಿಂದ ಸಣ್ಣ ಸಹಾಯ. ಇದರಿಂದ ಒಂದು ಸಣ್ಣ ಮಟ್ಟದ ಸಮಾಧಾನ ಸಿಗಬಹುದು' ಎಂದು ಟ್ವೀಟ್ ಮಾಡಿದ್ದಾರೆ.
ಯುಎಸ್ ರಾಷ್ಟ್ರದಲ್ಲಿ ಸುತ್ತಾಡುತ್ತಿರುವ ರೆಹಮಾನ್ ಮತ್ತು ತಂಡ ಹಲವು ಕಡೆ ಲೈವ್ ಕಾರ್ಯಕ್ರಮ ನೀಡುತ್ತಿದ್ದಾರೆ. ವಾಷಿಂಗನ್ ಟನ್ ನಲ್ಲಿ ನೀಡಿದ ಶೋ ನಂತರ ಈ ಸಹಾಯವನ್ನ ಪ್ರಕಟಿಸಿದ್ದಾರೆ.
ಕೇರಳಕ್ಕೆ 12 ಕೋಟಿ ಕೊಟ್ಟ ಸಲ್ಮಾನ್ ಖಾನ್: ಟ್ವೀಟ್ ಮಾಡಿ ಡಿಲೀಟ್ ಮಾಡಿದ ನಟ
ಸೆಪ್ಟೆಂಬರ್ 5 ರಂದು ಯುಎಸ್ ಟೂರ್ ಮುಗಿಸಿ, ಭಾರತಕ್ಕೆ ವಾಪಸ್ ಆಗಲಿರುವ ರೆಹಮಾನ್, ಮಣಿರತ್ನಂ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಚೆಕ್ಕ ಚೀವಂತ ವಾನಂ' ಚಿತ್ರದ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಸಿನಿಮಾಗೆ ಸಂಗೀತ ನೀಡಿರುವುದು ಇವರೇ.
ಎಲ್ಲರಿಗಿಂತ ವಿಭಿನ್ನವಾಗಿ ಕೇರಳಗೆ ನೆರವಾದ ಅನುಷ್ಕಾ-ಕೊಹ್ಲಿ ದಂಪತಿ
ದಾಖಲೆಗಳ ಪ್ರಕಾರ ಕೇರಳ ಪ್ರವಾಹದಲ್ಲಿ ಸುಮಾರು 483 ಜನ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದೆ. ಹಲವು ಜನರು ಮನೆಯನ್ನ, ಆಸ್ತಿಯನ್ನ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಹೀಗಾಗಿ, ದೇಶದ ಹಲವು ಜನರು, ಸಿನಿಮಾ ತಾರೆಯರು ಬೆಂಬಲ ನೀಡಿದ್ದಾರೆ.