Don't Miss!
- News ಲೋಕಸಭಾ ಚುನಾವಣೆಯಲ್ಲಿ ಕೊಡಗಿನಲ್ಲಿ ಮತ್ತೆ ‘ಕೈ’ ಕಮಾಲ್?: ಒಂದಷ್ಟು ನಾಯಕರು ಮೌನವಾಗಿದ್ದೇಕೆ?
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎರಡು ದಶಕಗಳ ಹಿಂದೆಯೇ ಸಂಬಂಧ ಮುರಿದು ಬಿದ್ದಿತ್ತು: ನಟ ಅರ್ಬಾಜ್ ಖಾನ್
ಬಾಲಿವುಡ್ ನಟ ಅರ್ಬಾಜ್ ಖಾನ್ ಮತ್ತು ಮಲೈಖಾ ಅರೋರ ವಿಚ್ಛೇಧನ ಪಡೆದು ಮೂರು ವರ್ಷಗಳೇ ಆಗಿವೆ. ಸುಮಾರು ಎರಡು ದಶಕಗಳಿಗೂ ಅಧಿಕಾ ಕಾಲ ಒಟ್ಟಿಗೆ ಸಂಸಾರ ಮಾಡಿದ್ದ ಈ ಜೋಡಿ ದಿಢೀರನೆ ದೂರ ಆಗಿದ್ದು ಬಾಲಿವುಡ್ ಮಂದಿಗೆ ಶಾಕ್ ಆಗಿತ್ತು. ಆದ್ರೀಗ ಬೇರೆ ಬೇರೆ ಆಗಿ ಮೂರು ವರ್ಷಗಳಾದರೂ ಅರ್ಬಾಜ್ ಮತ್ತು ಮಲೈಖಾ ವಿಚ್ಛೇಧನ ವಿಷಯ ಇವತ್ತಿಗೂ ಚರ್ಚೆಯಾಗುತ್ತಿದೆ.
ಇಬ್ಬರು ದೂರ ದೂರ ಆದ ಬಗ್ಗೆ ಅಥವಾ ಇಬ್ಬರ ದಾಂಪತ್ಯ ಜೀವನದ ಬಗ್ಗೆಯಾಗಲಿ ಅರ್ಬಾಜ್ ಅಥವಾ ಮಲೈಖಾ ಎಲ್ಲಿಯೂ ಮಾತನಾಡಿರಲ್ಲಿಲ. ಆದ್ರೀಗ ಮಲೈಖಾ ಎರಡನೇ ಮದುವೆ ವಿಚಾರ ಸದ್ದು ಮಾಡುತ್ತಿದೆ. ಈ ನಡುವೆ ಅರ್ಬಾಜ್ ಖಾನ್ ಸಂದರ್ಶನ ಒಂದರಲ್ಲಿ ವಿಚ್ಛೇಧನದ ಬಗ್ಗೆ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ.
ಮಾಜಿ ಪತ್ನಿ ಮಲೈಕಾ ಮದುವೆ ಬಗ್ಗೆ ಅರ್ಬಾಜ್ ಖಾನ್ ಹೇಳಿದ್ದೇನು?
ಎರಡು ದಶಕಗಳ ಹಿಂದೆಯೇ ಅರ್ಬಾಜ್ ಮತ್ತು ಮಲೈಖಾ ಇಬ್ಬರ ಸಂಬಂಧ ಮುರಿದು ಬಿದ್ದಿತ್ತು ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ. "ನೋಡೋಕೆ ಎಲ್ಲವು ಚೆನ್ನಾಗಿ ಇತ್ತು. ಆದ್ರೆ ಅದೂ ಮುರಿದು ಬಿತ್ತು" ಎಂದು ಹೇಳುತ್ತಲೇ ಇಬ್ಬರ ಮದುವೆ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. "ಗಂಡ ಹೆಂಡತಿ ಇಬ್ಬರು ಅವರವರ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ, ಅವರಿಗೆ ಬೇಕಾದ ಹಾಗೆ ಜೀವನ ನಡೆಸಲು ಹೊರಟರೆ ಮದುವೆ ಎನ್ನುವ ಪದಕ್ಕೆ ಅರ್ಥವೆ ಇರಲ್ಲ. ಇಬ್ಬರ ಜೀವನದಲ್ಲೂ ಆಗಿದ್ದು ಹಾಗೆ. ಇಬ್ಬರ ಸಂಬಂಧ ಮುರಿದು ಬಿದ್ದಿದ್ದು ಎರಡು ದಶಕಗಳೆ ಕಳೆದಿವೆ" ಎಂದು ಹೇಳಿದ್ದಾರೆ.
ಏಪ್ರಿಲ್ 19ಕ್ಕೆ ಅರ್ಜುನ್ ಕಪೂರ್ ಜೊತೆ ಮಲೈಕಾ ಮದುವೆ?
ಇದರ ಜೊತೆಗೆ ಎರಡನೇ ಮದುವೆಯ ಬಗ್ಗೆಯೂ ಸುಳಿವು ನೀಡಿದ್ದಾರೆ. "ಮತ್ತೊಮ್ಮೆ ಜೀವನದಲ್ಲಿ ಮದುವೆ ಆಗುವ ಅವಕಾಶ ಬಂದರೆ ಖಂಡಿತ ಮದುವೆ ಆಗುವೆ" ಎಂದು ಹೇಳಿದ್ದಾರೆ. ಅರ್ಬಾಜ್ ಈಗ ಮಾಡೆಲ್ ಜಾರ್ಜಿಯಾ ಆಂಡ್ರಿಯಾನಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಹಾಗಾಗಿ ಸಧ್ಯದಲ್ಲೇ ಜಾರ್ಜಿಯಾ ಜೊತೆ ಅರ್ಬಾಜ್ ಮದುವೆ ಆಗಲಿದ್ದಾರಾ ಎನ್ನುವ ಅನುಮಾನ ಮೂಡಿದೆ.