Don't Miss!
- News Rain Alert: ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ: ಈ ಜಿಲ್ಲೆಗಳಲ್ಲಿ ಭಾರಿ ಬಿಸಿಲು
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರ್ಯನ್ ಖಾನ್ ಡ್ರಗ್ಸ್ ಕೇಸ್: ಮತ್ತೆ ಕೆಲವರ ಬಂಧನ
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಹಾಗೂ ಇನ್ನಿಬ್ಬರು ಬಂಧನಕ್ಕೆ ಒಳಗಾಗಿರುವ ಕ್ರೂಸ್ ಶಿಪ್ ಡ್ರಗ್ಸ್ ಕೇಸ್ಗೆ ಸಂಬಂಧಿಸಿದಂತೆ ಇನ್ನೂ ನಾಲ್ವರನ್ನು ಎನ್ಸಿಬಿ ಬಂಧಿಸಿದೆ.
ಕ್ರೂಸ್ ಶಿಪ್ನಲ್ಲಿ ಪಾರ್ಟಿ ಆರ್ಗನೈಜ್ ಮಾಡಿದ್ದ ದೆಹಲಿ ಮೂಲದ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ನಾಲ್ಕು ಸಿಬ್ಬಂದಿಯನ್ನು ಎನ್ಸಿಬಿ ಇಂದು ಬಂಧಿಸಿದೆ.
ದೆಹಲಿ ಮೂಲದ ನಾಮಸ್ಕ್ರೇ (Namas'cray) ಎಕ್ಸ್ಪೀರಿಯನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯು ಅಕ್ಟೋಬರ್ 2 ರಿಂದ ನಾಲ್ಕರ ವರೆಗೆ ಮುಂಬೈನಲ್ಲಿ ಕೋರ್ಡೇಲಿಯಾ ಕ್ರೂಸ್ ಶಿಪ್ನಲ್ಲಿ ಪಾರ್ಟಿ ಅರೇಂಜ್ ಮಾಡಿತ್ತು. ಆ ಪಾರ್ಟಿಯ ಮೇಲೆ ದಾಳಿ ನಡೆಸಿದ್ದ ಪೊಲೀಸರು ಎಂಟು ಜನರನ್ನು ವಶಕ್ಕೆ ಪಡೆದಿದ್ದರು, ಡ್ರಗ್ಸ್ ಅನ್ನೂ ಸಹ ವಶಪಡಿಸಿಕೊಳ್ಳಲಾಗಿತ್ತು. ನಂತರ ಶಾರುಖ್ ಪುತ್ರ ಆರ್ಯನ್ ಖಾನ್, ಆತನ ಗೆಳೆಯ ಅರ್ಬಾಜ್ ಸೇಠ್ ಹಾಗೂ ಮಾಡೆಲ್ ಮುನ್ಮುನ್ ಧಮೇಚಾ ಅನ್ನು ಬಂಧಿಸಲಾಗಿತ್ತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇವೆಂಟ್ ಮ್ಯಾನೇಜ್ಮೆಂಟ್ನ ಕೆಲವು ಉದ್ಯೋಗಿಗಳು ಹಾಗೂ ಪಾರ್ಟಿಯಲ್ಲಿ ಹಾಜರಿದ್ದ ಒಬ್ಬನನ್ನು ಎನ್ಸಿಬಿ ಬಂಧಿಸಿದೆ. ಇಂದು ಬಂಧಿಸಲ್ಪಟ್ಟವರನ್ನು ಗೋಪಾಲ್ ಜಿ ಆನಂದ್, ಸಮೀರ್ ಸೆಹ್ಗಲ್, ಮನವ್ ಸಿಂಘಾಲ್, ಭಾಸ್ಕರ್ ಅರೋರಾ ಎಂದು ಗುರುತಿಸಲಾಗಿದೆ.
ಇದಕ್ಕೂ ಮುನ್ನಾ ಮುಂಬೈನ ಮೋಹಕ್ ಜಸ್ವಾಲ್ ಎಂಬುವರನ್ನು ಬಂಧಿಸಲಾಗಿದ್ದು ಆತನಿಂದ ಕೆಲವು ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಆತನ ವಿಚಾರಣೆಯ ಬಳಿಕ ಇಶ್ಮೀತ್ ಸಿಂಗ್ ಛಡ್ಡಾ ಎಂಬಾತನನ್ನು ಗುರಗ್ರಾಮದಲ್ಲಿ ಬಂಧಿಸಲಾಗಿದೆ. ಆ ನಂತರ ಶ್ರೇಯಸ್ ಸುರೇಂದರ್ ನಾಯರ್ ಎಂಬಾತನನ್ನೂ ಎನ್ಸಿಬಿ ಬಂಧಿಸಿದೆ. ಕ್ರೂಸ್ ಶಿಪ್ನಲ್ಲಿ ನಡೆದ ಪಾರ್ಟಿಗೆ ಅತಿಥಿಯಾಗಿ ಆಹ್ವಾನಿತನಾಗಿದ್ದ ಮನೀಷ್ ರಾಜ್ಗಾರಿಯಾ ಎಂಬಾತನನ್ನೂ ಎನ್ಸಿಬಿ ಬಂಧಿಸಿದ್ದು, ಈತನ ಬಳಿ ಯಾವುದೇ ಮಾದಕ ವಸ್ತು ಸಿಕ್ಕಿಲ್ಲ ಆದರೆ ಈತ ಮಾದಕ ವಸ್ತು ಸೇವನೆ ಮಾಡಿದ್ದ ಎಂದು ಆರೋಪಿಸಲಾಗಿದೆ.
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್, ಆತನ ಗೆಳೆಯ ಅರ್ಬಾಜ್ ಸೇಠ್ ಮರ್ಚೆಂಟ್, ಮಾಡೆಲ್ ಮುನ್ಮುನ್ ಧಮೇಚಾ ಅವರುಗಳನ್ನು ಭಾನುವಾರವೇ ಎನ್ಸಿಬಿ ಬಂಧಿಸಿದ್ದು, ಮೂವರು ಬಂಧಿತರನ್ನು ಅಕ್ಟೋಬರ್ 07ರವರೆಗೆ ಎನ್ಸಿಬಿ ವಶಕ್ಕೆ ನೀಡಿ ನ್ಯಾಯಾಲಯವು ಆದೇಶ ನೀಡಿದೆ.