Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಗಸ್ಟ್ 2...ಅಮಿತಾಭ್ ಬಚ್ಚನ್ ಗೆ ಎರಡನೇ ಜನ್ಮ ಸಿಕ್ಕಿದ್ದ ದಿನ
ಅಕ್ಟೋಬರ್ 11.....ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರ ಬರ್ತಡೇ. ಬಚ್ಚನ್ ಗೆ ಆ ಹುಟ್ಟುಹಬ್ಬಕ್ಕಿಂತ ಎರಡನೇ ಬರ್ತಡೇ ಮುಖ್ಯವಾದದು. ಯಾಕಂದ್ರೆ, ಎರಡನೇ ಹುಟ್ಟುಹಬ್ಬ ಬಚ್ಚನ್ ಗೆ ಮರುಜನ್ಮ ನೀಡಿತ್ತು.
ಹೌದು, ಆಗಸ್ಟ್ 2 ಅಮಿತಾಭ್ ಬಚ್ಚನ್ ಜೀವನದಲ್ಲಿ ಇನ್ನೊಂದು ಜನ್ಮ ಪಡೆದ ದಿನ. ಈ ದಿನಾಂಕದ ಹಿಂದೆ ಬಿಗ್ ಬಿ ಬದುಕಿನಲ್ಲಿ ಮರೆಯಲಾಗದ ಘಟನೆಯೊಂದಿದೆ. ಆ ವಿಷ್ಯ ತಿಳಿಯಲು ಸುಮಾರು 37 ವರ್ಷಕ್ಕೆ ಹಿಂದಕ್ಕೆ ಹೋಗಬೇಕು.
ಈ ಘಟನೆಯನ್ನ ಅಮಿತಾಭ್ ಬಚ್ಚನ್ ನೆನಪಿಸಿಕೊಂಡಿದ್ದು, ಟ್ವಿಟ್ಟರ್ ನಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ. ''ಪ್ರೀತಿ, ಗೌರವ, ಪ್ರಾರ್ಥನೆಗಳಿಂದ ತುಂಬಿದ ಈ ದಿನ ಬಹಳಷ್ಟು ಮಂದಿಗೆ ನೆನಪಿರುತ್ತೆ. ಅಂದು ಅವರು ತೋರಿದ ಪ್ರೀತಿ ನನ್ನೊಂದಿಗಿದೆ. ಇದು ನಾನು ಎಂದಿಗೂ ತೀರಿಸಿದ ಋಣ'' ಎಂದು ಧನ್ಯವಾದ ತಿಳಿಸಿದ್ದಾರೆ.
ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ವ್ಯಕ್ತಿಗಳ ಪಟ್ಟಿಯಲ್ಲಿ ಅಮಿತಾಭ್, ದೀಪಿಕಾ
37 ವರ್ಷದ ಹಿಂದೆ ಅಂದ್ರೆ ಜುಲೈ 26, 1982ರಲ್ಲಿ ಕೂಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆಕ್ಷನ್ ದೃಶ್ಯದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಅಮಿತಾಭ್ ಬಚ್ಚನ್ ಗೆ ತೀವ್ರ ಗಾಯವಾಗಿತ್ತು.
37 ವರ್ಷದ ಹಳೇ ಚಿತ್ರ ರೀಮೇಕ್ ಮಾಡ್ತಿದ್ದಾರೆ ಶಾರೂಖ್ ಖಾನ್.!
ಕೂಡಲೇ ಮುಂಬೈಗೆ ಅಮಿತಾಭ್ ಅವರನ್ನ ಸ್ಥಳಾಂತರಿಸಲಾಯಿತು. ತುರ್ತು ನಿಘಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಯಿತು. ಐಸಿಯುನಲ್ಲಿರುವಾಗ ಅಮಿತಾಭ್ ಜೀವಂತವಾಗಿಲ್ಲ ಎಂದು ವೈದ್ಯರು ತಿಳಿಸಿದ್ದರು ಎಂದು ಬಿಗ್ ಬಿ ಬ್ಲಾಗ್ ನಲ್ಲಿ ಬರೆದುಕೊಂಡಿದ್ದರಂತೆ.
ಈ ಸಂದರ್ಭದಲ್ಲಿ ಅಮಿತಾಭ್ ಅವರಿಗೆ ಏನು ಆಗಬಾರದು, ದೇವರ ಒಳ್ಳೆಯದು ಮಾಡಲಿ ಎಂದು ಜನರು ಪ್ರಾರ್ಥಿಸಿದ್ದರು. ಮಸೀದಿ, ದೇವಸ್ಥಾನ, ಚರ್ಚೆಗಳಲ್ಲಿ ಬಚ್ಚನ್ ಗಾಗಿ ಪೂಜೆ ಸಲ್ಲಿಸಿದ್ದರು. ನಂತರ ಆಗಸ್ಟ್ 2 ರಂದು ಪ್ರಜ್ಞೆ ಬಂದಿತ್ತು.