Don't Miss!
- News Rain Alert: ಮಳೆ.. ಮಳೆ.. ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಗ್ಯಾರಂಟಿ!
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಎಮರ್ಜೆನ್ಸಿ ಪವರ್' ಬಳಸಿ ಮೋದಿ ಕುರಿತ ಡಾಕ್ಯುಮೆಂಟರಿ ನಿಷೇಧಿಸಿದ ಸರ್ಕಾರ! ಅಂಥಹದ್ದೇನಿದೆ ಅದರಲ್ಲಿ?
ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಬಿಬಿಸಿ ಡಾಕ್ಯುಮೆಂಟರಿ ನಿರ್ಮಿಸಿದ್ದು, ಅದರ ಮೊದಲ ಎಪಿಸೋಡ್ ಯೂಟ್ಯೂಬ್ನಲ್ಲಿ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿತ್ತು.
'ಇಂಡಿಯಾ: ದಿ ಮೋದಿ ಕ್ವಶ್ಚನ್' ಹೆಸರಿನ ಈ ಡಾಕ್ಯುಮೆಂಟರಿ ಗುಜರಾತ್ ಗಲಭೆ ಸಂದರ್ಭದಲ್ಲಿ ಸಿಎಂ ಆಗಿದ್ದ ಮೋದಿಯ ವಿಫಲತೆ, ದುರಾಡಳಿತಗಳ ಬಗ್ಗೆ ಈ ಡಾಕ್ಯುಮೆಂಟರಿ ಹೇಳುತ್ತಿದೆ.
'KD'ಗಾಗಿ ದಿನಕ್ಕೆ 10 ಕಿ.ಮೀ ಧ್ರುವ ಸರ್ಜಾ ರನ್ನಿಂಗ್: ಪ್ರೇಮ್ಸ್ ಪ್ಯಾನ್ಸ್ ಇಂಡಿಯಾ ಸಿನಿಮಾಗಾಗಿ ಭರ್ಜರಿ ತಯಾರಿ!
ಡಾಕ್ಯುಮೆಂಟರಿ ಬಗ್ಗೆ ಪರ-ವಿರೋಧ ಚರ್ಚೆ ಜೋರಾಗಿ ನಡೆಯುತ್ತಿದ್ದು, ಮೋದಿಯ ಇಮೇಜು ರಕ್ಷಿಸಲು ಸರ್ಕಾರ ಇದೀಗ ವಿಶೇಷ ಎಮರ್ಜೆನ್ಸಿ ಪವರ್ ಬಳಸಿ ವಿಡಿಯೋವನ್ನು ಬ್ಲಾಕ್ ಮಾಡಿದೆ.
ಭಾರತದ ಯೂಟ್ಯೂಬ್ನಲ್ಲಿ ಬಿಬಿಸಿಯ ಡಾಕ್ಯುಮೆಂಟರಿ ಪ್ರದರ್ಶನವಾಗದಂತೆ ತಡೆಯಲಾಗಿದೆ. ಇದರ ಜೊತೆಗೆ ಈ ವಿಡಿಯೋ ಲಿಂಕ್ ಅನ್ನು ಶೇರ್ ಮಾಡುವ ಟ್ವೀಟ್ಗಳನ್ನು ಬ್ಲಾಕ್ ಮಾಡುವಂತೆ ಕೋರಲಾಗಿದೆ.
ಕೇಂದ್ರ ಸರ್ಕಾರದ ಈ ಕ್ರಮವನ್ನು ವಿಪಕ್ಷಗಳು ಹಾಗೂ ಕೆಲವು ಮಾಧ್ಯಮ ಸಂಸ್ಥೆಗಳು ಟೀಕಿಸಿವೆ. ಇದು ಮಾಧ್ಯಮ ಸ್ವಾತಂತ್ರ್ಯದ ಉಲ್ಲಂಘನೆ ಎಂದಿವೆ. ಒಂದು ಸಾಕ್ಷ್ಯಚಿತ್ರ ಇಡೀಯ ಸರ್ಕಾರವನ್ನೇ ಅಲುಗಾಡಿಸಿಬಿಟ್ಟಿದೆ ಎಂದು ಸಹ ಕೆಲವರು ಟೀಕಿಸಿದ್ದಾರೆ.
ಇನ್ನು ಕೆಲವರು ಬಿಬಿಸಿಯು ಪೂರ್ವಾಗ್ರಹ ಪೀಡಿತವಾಗಿ ಈ ಡಾಕ್ಯುಮೆಂಟರಿಯನ್ನು ನಿರ್ಮಾಣ ಮಾಡಿದೆ. ಇದು ಸಾಕ್ಷ್ಯಚಿತ್ರವಲ್ಲ, ರಾಜಕೀಯ ಪ್ರೇರಿತ ವಿಡಿಯೋ ಎಂದು ಬಿಜೆಪಿ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಬಿಸಿಯ ಡಾಕ್ಯುಮೆಂಟರಿ ಬಗ್ಗೆ ವಿರೋಧಗಳು ವ್ಯಕ್ತವಾದ ಬೆನ್ನಲ್ಲೆ ಬಿಬಿಸಿಯು ತನ್ನ ಡಾಕ್ಯುಮೆಂಟರಿಯನ್ನು ಡಿಫೆಂಡ್ ಮಾಡಿಕೊಂಡಿದ್ದು, ''ನಾವು ಸತತವಾಗಿ ತನಿಖೆ, ಅಧ್ಯಯನಗಳನ್ನು ನಡೆಸಿ ಸಾಕ್ಷ್ಯಗಳನ್ನು ಕಲೆ ಹಾಕಿಯೇ ಡಾಕ್ಯುಮೆಂಟರಿ ನಿರ್ಮಿಸಿದ್ದೇವೆ'' ಎಂದಿದೆ.
ಏನಿದು ಎಮರ್ಜೆನ್ಸಿ ಪವರ್?
2021 ರ ಐಟಿ ಕಾಯ್ದೆಯ 16ನೇ ನಿಯಮದ ಪ್ರಕಾರ ಭಾರತದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಯಾವುದೇ ಮಾಹಿತಿಯನ್ನು ಅಂತರ್ಜಾಲದಿಂದ ತೆಗೆದು ಹಾಕುವ ಹಕ್ಕನ್ನು ಹೊಂದಿದೆ. ಇದೇ ನಿಯಮವನ್ನು ಆಧರಿಸಿ ಇದೀಗ ಮೋದಿ ಬಗೆಗಿನ ಬಿಬಿಸಿ ಡಾಕ್ಯುಮೆಂಟರಿಯನ್ನು ಡಿಲೀಟ್ ಮಾಡಲಾಗಿದೆ.