Don't Miss!
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಂಗನಾ ರಣಾವತ್ ಬಳಿಕ ಮತ್ತೊಬ್ಬ ಸೆಲೆಬ್ರಿಟಿಗೆ ನೋಟಿಸ್ ನೀಡಿದ ಬಿಎಂಸಿ
ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಕಚೇರಿ ನೆಲಸಮ ಮಾಡಲು ಮುಂದಾಗಿದ್ದ ಬಿಎಂಸಿ ವಿರುದ್ಧ ಹಲವರು ಕಿಡಿ ಕಾರಿದ್ದರು. ನಟಿ ಮೇಲಿನ ವೈಯಕ್ತಿಕ ದ್ವೇಷದ ಹಿನ್ನೆಲೆ ಕಷ್ಟಪಟ್ಟು ಕಟ್ಟಿದ ಕಟ್ಟಡವನ್ನು ನೆಲಕ್ಕೆ ಉರುಳಿಸಲು ಮುಂದಾಗಿದೆ ಎಂದು ಟೀಕಿಸಿದರು. ಮಧ್ಯಾಹ್ನದ ವೇಳೆಗೆ ಕಂಗನಾ ಪರ ವಕೀಲರು ಬಾಂಬೆ ಹೈ ಕೋರ್ಟ್ನಿಂದ ತಡೆಯಾಜ್ಞೆ ತಂದು ಕಚೇರಿ ನೆಲಸಮ ಮಾಡುವುದನ್ನು ತಡೆದರು.
ಇದರ ಬೆನ್ನಲ್ಲೆ ಮತ್ತೊಬ್ಬ ಬಾಲಿವುಡ್ ಸೆಲೆಬ್ರಿಟಿಗೆ ಬಿಎಂಸಿ (ಮುಂಬೈ ಮಹಾನಗರ ಪಾಲಿಕೆ) ನೋಟಿಸ್ ನೀಡಿದೆ. ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ, ಏಳು ದಿನಗಳಲ್ಲಿ ಉತ್ತರ ನೀಡಬೇಕು ಎಂದು ಸೂಚಿಸಿದೆ. ಮುಂದೆ ಓದಿ.....
'ಕಂಗನಾ ರಣಾವತ್ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ' ಎಂದ ನಿರ್ದೇಶಕ
ಮನೀಶ್ ಮಲ್ಹೋತ್ರಾ ಮೇಲೆ ಬಿಎಂಸಿ ಕಣ್ಣು!
ಬಾಲಿವುಡ್ನ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಕಟ್ಟಡ ನಟಿ ಕಂಗನಾ ರಣಾವತ್ ಕಚೇರಿಯ ಪಕ್ಕದಲ್ಲಿದೆ ಎಂದು ತಿಳಿದು ಬಂದಿದೆ. ಮನೀಶ್ ಬಂಗಲೆಯನ್ನು ಕಾನೂನುಬಾಹಿರವಾಗಿ ಮಾರ್ಪಡು ಮಾಡಲಾಗಿದೆ ಎಂದು ಆರೋಪಿಸಿದ ಬಿಎಂಸಿ ಸ್ಪಷ್ಟನೆ ಕೇಳಿದೆ.
ವಾಣಿಜ್ಯಕ್ಕಾಗಿ ಮಾರ್ಪಡು ಮಾಡಿರುವ ಆರೋಪ
ಮುಂಬೈನ ಪಾಲಿ ಹಿಲ್ನ ನರ್ಗಿಸ್ ದತ್ ರಸ್ತೆಯಲ್ಲಿರುವ ಮನೀಶ್ ಮಲ್ಹೋತ್ರಾ ಅವರ ಕಚೇರಿ ನಿರ್ಮಾಣದಲ್ಲಿ ಉಲ್ಲಂಘನೆಯಾಗಿರುವ ಬಗ್ಗೆ ನೋಟಿಸ್ನಲ್ಲಿ ತಿಳಿಸಲಾಗಿದೆ. ಖಾಸಗಿ ಮನೆಯನ್ನು ವಾಣಿಜ್ಯ ವ್ಯವಹಾರಕ್ಕಾಗಿ ಮಾರ್ಪಡು ಮಾಡಲಾಗಿದೆ ಎಂದು ಪ್ರಮುಖ ಆರೋಪ ಕೇಳಿ ಬಂದಿದೆ.
ಏಳು ದಿನಗಳಲ್ಲಿ ಉತ್ತರ ಕೇಳಿದ ಪಾಲಿಕೆ
ಮನೀಶ್ ಮಲ್ಹೋತ್ರಾ ಅವರ ಕಟ್ಟಡದಲ್ಲಿ ಅಕ್ರಮ ನಡೆದಿದೆ ಎನ್ನುವ ವಿಚಾರಕ್ಕೆ ಏಳು ದಿನಗಳಲ್ಲಿ ಸ್ಪಷ್ಟನೆ ನೀಡಬೇಕು ಎಂದು ಮುಂಬೈ ಮಹಾನಗರ ಪಾಲಿಕೆ ಆದೇಶಿಸಿದೆ. ಸದ್ಯಕ್ಕೆ ಕೊರೊನಾ ವೈರಸ್ ಪ್ರೋಟೋಕಾಲ್ನಲ್ಲಿ ಸೆಪ್ಟೆಂಬರ್ 30ರವರೆಗೂ ಯಾವುದೇ ಕಟ್ಟಡಗಳನ್ನು ತೆರವು ಕಾರ್ಯಾಚರಣೆ ಮಾಡುವುದನ್ನು ನಿಷೇಧಿಸಲಾಗಿದೆ.
Recommended Video
ಮಹಾ ಸರ್ಕಾರದ ವಿರುದ್ಧ ಕಂಗನಾ ಟೀಕೆ
ಸುಶಾಂತ್ ಸಿಂಗ್ ರಜಪೂತ್ ತನಿಖೆಯಲ್ಲಿ ಮುಂಬೈ ಪೊಲೀಸರನ್ನು ಪ್ರಶ್ನಿಸಿದ್ದರು. ಡ್ರಗ್ಸ್ ವಿಚಾರದಲ್ಲಿ ಬಾಲಿವುಡ್ ಸ್ಟಾರ್ಗಳ ವಿರುದ್ಧ ಟೀಕೆ ಮಾಡಿದರು. ಮುಂಬೈ ನಗರವನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ದೂರಿದರು. ಇದೆಲ್ಲದರ ಪರಿಣಾಮ ಮುಂಬೈ ನಗರ ಪಾಲಿಕೆ ಉದ್ದೇಶಪೂರ್ವಕವಾಗಿ ಕಂಗನಾ ಕಚೇರಿಯನ್ನು ತೆರವುಗೊಳಿಸುವ ಕಾರ್ಯಕ್ಕೆ ಕೈ ಹಾಕಿತ್ತು ಎಂದು ಹೇಳಲಾಗಿದೆ. ಸರ್ಕಾರದ ಹಾಗೂ ಪಾಲಿಕೆಯ ನಡೆಯನ್ನು ಖಂಡಿಸಿರುವ ನಟಿ ''ಇದು ಶಿವಸೇನೆ ಅಲ್ಲ, ಸೋನಿಯಾ ಸೇನೆ'' ಎಂದಿದ್ದಾರೆ.