Don't Miss!
- News Gadag: ಕಾಂಗ್ರೆಸ್ ಸರ್ಕಾರದಲ್ಲಿ ಕೊಲೆಗಡುಕರಿಗೆ ರಾಜ ಮರ್ಯಾದೆ: ಮಾಜಿ ಸಿಎಂ
- Automobiles ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿದೆ ಹೋಂಡಾ ಆಕ್ಟಿವಾ: ಎಲೆಕ್ಟ್ರಿಕ್ ಸ್ಕೂಟರ್ಗಳ ರಾಜ ಆಗುತ್ತಾ?
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಿಗ್ಗಜ ಅಥ್ಲೀಟ್ ಮಿಲ್ಕಾ ಸಿಂಗ್ ನಿಧನಕ್ಕೆ ಸಿನಿ ಗಣ್ಯರ ಕಂಬನಿ
'ಫ್ಲೈಯಿಂಗ್ ಸಿಖ್' ಖ್ಯಾತಿಯ ಲೆಜೆಂಡರಿ ಅಥ್ಲೀಟ್ ಮಿಲ್ಕಾ ಸಿಂಗ್ ಶುಕ್ರವಾರ ತಡರಾತ್ರಿ ನಿಧಹೊಂದಿದರು. 91 ವರ್ಷದ ಮಿಲ್ಕಾ ಸಿಂಗ್ ಕೊರೊನಾ ವೈರಸ್ ಗೆ ತುತ್ತಾಗಿದ್ದರು. ಒಂದು ತಿಂಗಳು ಕೊರೊನಾ ವಿರುದ್ಧ ಹೋರಾಟದ ಬಳಿಕ ಮಿಲ್ಕಾ ಸಿಂಗ್ ಕೊನೆಯುಸಿರೆಳೆದರು. ಕಳೆದ ಒಂದು ತಿಂಗಳಿಂದ ಚಂಡೀಗಡದ ಪಿಜಿಐಎಂಆರ್ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಮಿಲ್ಕಾ ಸಿಂಗ್ ಚಿಕಿತ್ಸೆ ದಾಖಲಾಗಿದ್ದರು.
Recommended Video
ಮಿಲ್ಕಾ ಸಿಂಗ್ ಪತ್ನಿ, ಭಾರತದ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲಾ ಕೌರ್ ಇತ್ತೀಚಿಗಷ್ಟೆ ಕೋವಿಡ್ ನಿಂದ ನಿಧರಾಗಿದ್ದರು. ಮಿಲ್ಕಾ ಸಿಂಗ್ ನಿಧನದ ಸುದ್ದಿ ಕೇಳುತ್ತಿದ್ದಂತೆ ಅನೇಕರು ಕಂಬನಿ ಮಿಡಿದಿದ್ದಾರೆ. ಬಾಲಿವುಡ್ ನ ಖ್ಯಾತ ಕಲಾವಿದರು ಸಹ ಮಿಲ್ಕಾ ಸಿಂಗ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ..
ನಟ ಶಾರುಖ್ ಖಾನ್
ಶಾರುಖ್ ಖಾನ್ ಸಂತಾಪ ಸೂಚಿಸಿ, "ಫ್ಲೈಯಿಂಗ್ ಸಿಖ್ ಇನ್ಮುಂದೆ ನಮ್ಮೊಂದಿಗೆ ಇಲ್ಲ, ಆದರೆ ಅವರ ಉಪಸ್ಥಿತಿ ಯಾವಾಗಲೂ ಇರುತ್ತದೆ ಮತ್ತು ಸಾಟಿಯಿಲ್ಲದ ಅವರ ಲೆಗಸಿ ಯಾವಾಗಲೂ ಶಾಶ್ವತ. ನನಗೆ ಮತ್ತು ಲಕ್ಷಾಂತರ ಜನರ ಸ್ಫೂರ್ತಿ. ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಟ್ವೀಟ್ ಮಾಡಿದ್ದಾರೆ.
ನಟ ಅಕ್ಷಯ್ ಕುಮಾರ್
ಇನ್ನು ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿ ಮಿಲ್ಕಾ ಸಿಂಗ್ ಅವರ ಪಾತ್ರವನ್ನು ಮಾಡದೆ ಇರುವುದು ತುಂಬಾ ನೋವಿದೆ ಎಂದಿದ್ದಾರೆ. "ಮಿಲ್ಕಾ ಸಿಂಗ್ ಅವರ ನಿಧನದ ಸುದ್ದಿ ಕೇಳಿ ತುಂಬಾ ದುಃಖವಾಗಿದೆ. ಅವರ ಪಾತ್ರವನ್ನು ಮಾಡದಿರುವುದಕ್ಕೆ ನಾನು ಶಾಶ್ವತವಾಗಿ ವಿಷಾದಿಸುತ್ತೇನೆ. ಫ್ಲೈಯಿಂಗ್ ಸಿಖ್, ನೀವು ಸ್ವರ್ಗದಲ್ಲಿ ಚಿನ್ನದ ಓಟವನ್ನು ಹೊಂದಿರಲಿ. ಓಂ ಶಾಂತಿ" ಎಂದು ಟ್ವೀಟ್ ಮಾಡಿದ್ದಾರೆ.
ನಟಿ ರವೀನಾ ಟಂಡನ್
ನಟಿ ರವೀನಾ ಟಂಡನ್, ಮಿಲ್ಕಾ ಸಿಂಗ್ ಜೊತೆ ಇರುವ ಹಳೆಯ ಫೋಟೋವನ್ನು ಶೇರ್ ಮಾಡಿ ಸಂತಾಪ ಸೂಚಿಸಿದ್ದಾರೆ. ನೀವು ಯಾವಾಗಲು ನಮ್ಮೆಲ್ಲರ ಹೃದಯದಲ್ಲಿ ವಿಶೇಷ ಸ್ಥಾನ ಹೊಂದಿರುತ್ತೀರಿ. ನಮಗೆ ಸ್ಫೂರ್ತಿ ಬೇಕಾದಾಗಲೆಲ್ಲಾ ಭಾಗ್ ಮಿಲ್ಕಾ ಭಾಗ್ ನಮ್ಮ ಕಿವಿಯಲ್ಲಿ ಮೂಡುತ್ತದೆ. ಓಂ ಶಾಂತಿ" ಎಂದು ಟ್ವೀಟ್ ಮಾಡಿದ್ದಾರೆ.
ರಾಹುಲ್ ಬೋಸ್
"ಭಾರತಕ್ಕೆ ಎಂತಹ ದುಃಖದ ದಿನ. ಕ್ರೀಡಾಲೋಕಕ್ಕೆ ದುಃಖದ ದಿನ. ಒಂದು ಸ್ಫೂರ್ತಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸರ್" ಎಂದು ಟ್ವೀಟ್ ಮಾಡಿದ್ದಾರೆ.