Don't Miss!
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- News ಮಗಳ ಹತ್ಯೆ ಬಗ್ಗೆ ತಂದೆ ನಿರಂಜನ್ ಹಿರೇಮಠ ಪ್ರತಿಕ್ರಿಯೆ: ಒಂದು ಟ್ವೀಟ್ಗೆ ಸಿಎಂ ಜವಾಬ್ದಾರಿ ಮುಗಿಯಿತೇ?: ಮಾಜಿ ಸಿಎಂ
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Sports ಟಿ20 ವಿಶ್ವಕಪ್ 2024: ಟೀಮ್ ಇಂಡಿಯಾಗೆ ದೊಡ್ಡ ಚಿಂತೆಯಾದ ಈ ಆರಂಭಿಕನ ಫಾರ್ಮ್
- Technology iPhone: ಐಫೋನ್ 16 ಸರಣಿಯ ಕ್ಯಾಮೆರಾ ಫೀಚರ್ಸ್ ಲೀಕ್! ಏನೆಲ್ಲಾ ವಿಶೇಷತೆ ಇವೆ?..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಶ್ಮೀರದ ಬಾಲಕಿಯ ಅತ್ಯಾಚಾರ ವಿರುದ್ಧ ಧ್ವನಿ ಎತ್ತಿದ ಬಾಲಿವುಡ್ ನಟಿಯರು
ಕೆಲ ದಿನಗಳ ಹಿಂದೆ ಕಾಶ್ಮೀರದಲ್ಲಿ ನಡೆದ ಒಂದು ಘಟನೆ ಇಡೀ ಮನುಕುಲವನ್ನು ತಲೆ ತಗ್ಗಿಸುವಂತೆ ಮಾಡಿದೆ. ಎಂಟು ವರ್ಷದ ಬಾಲಕಿಗೆ ಡ್ರಗ್ಸ್ ನೀಡಿ ಆರು ಮಂದಿ ಕೀಚಕರು ಸೇರಿ ಮೂರು ದಿನಗಳ ಕಾಲ ಲೈಂಗಿಕವಾಗಿ ಕಿರುಕುಳ ನೀಡಿ, ಅತ್ಯಾಚಾರ ಎಸಗಿ ಬಳಿಕ ಹತ್ಯೆ ಮಾಡಿದ್ದರು. ಇಂತಹ ಅಮಾನವಿಯ ಘಟನೆಗೆ ಈಗ ಇಡೀ ದೇಶವೇ ನ್ಯಾಯ ಕೇಳುತ್ತಿದೆ.
8 ವರ್ಷದ ಬಾಲಕಿಯ ಸಾವಿಗೆ ನ್ಯಾಯ ಕೇಳುತ್ತಿದೆ ಕನ್ನಡ ಚಿತ್ರರಂಗ
ಸ್ಯಾಂಡಲ್ ವುಡ್, ಬಾಲಿವುಡ್ ಸೇರಿದಂತೆ ಈಗ ಚಿತ್ರರಂಗದ ನಟ ನಟಿಯರು ಸಹ ನ್ಯಾಯಕ್ಕಾಗಿ ಹೋರಾಟಕ್ಕೆ ನಿಂತಿದ್ದಾರೆ. #justiceforasifa ಮತ್ತು #SpeakUpIndia ಎಂಬ ಹ್ಯಾಶ್ ಟ್ಯಾಗ್ ಬಳಸಿ ಅನೇಕ ಕಲಾವಿದರು ಟ್ವೀಟ್ ಮಾಡುತ್ತಿದ್ದಾರೆ. ಈ ಮೂಲಕ ಘಟನೆಯ ವಿರುದ್ಧ ಧ್ವನಿ ಎತ್ತಿದ್ದಾರೆ. ಬಾಲಿವುಡ್ ನಟಿಯರಾದ ಜೂಹಿ ಚಾವ್ಲಾ, ರವಿನಾ ಟಂಡನ್, ಪ್ರಿಯಾಂಕ ಚೋಪ್ರಾ, ಕರೀನಾ ಕಪೂರ್, ಸೋನಮ್ ಕಪೂರ್, ಕಲ್ಕಿ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ನ್ಯಾಯ ಕೇಳುತ್ತಿದ್ದಾರೆ.
ಪ್ಲೇ ಕಾರ್ಡ್ ಪ್ರದರ್ಶಿಸುವ ಮೂಲಕ ಕರೀನಾ ಕಪೂರ್, ಸೋನಮ್ ಕಪೂರ್, ಕಲ್ಕಿ ಎಂಟು ವರ್ಷವ ಕಂದನಿಗೆ ಆಗಿರುವ ಅತ್ಯಾಚಾರವನ್ನು ವಿರೋಧಿಸಿದ್ದಾರೆ. ಬಾಲಿವುಡ್ ಮಾತ್ರವಲ್ಲದೆ ಕನ್ನಡದ ನಟಿಯರಾದ ಅಮೂಲ್ಯ, ನಭಾ ನಟೇಶ್, ಶಾನ್ವಿ ಶ್ರೀವಾಸ್ತವ್, ರಾಗಿಣಿ ದ್ವಿವೇದಿ, ಶರ್ಮಿಳಾ ಮಾಂಡ್ರೆ ಮತ್ತು ಗಾಯಕ ರಘು ದೀಕ್ಷಿತ್ ಈಗಾಗಲೇ ಈ ಬಗ್ಗೆ ಮಾತನಾಡಿದ್ದಾರೆ. ನಟ, ನಟಿಯರು, ಚಿತ್ರರಂಗದ ಗಣ್ಯರು ಮಾತ್ರವಲ್ಲದೆ ಲಕ್ಷಾಂತರ ಜನರು ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ.
ಘಟನೆಯ
ವಿವರ
ಜಮ್ಮು
ಕಾಶ್ಮೀರದಲ್ಲಿ
ಎಂಟು
ವರ್ಷದ
ಬಾಲಕಿಯ
ಮೇಲೆ
ಆರು
ಮಂದಿ
ಕೀಚಕರು
ಸೇರಿ
ಡ್ರಗ್ಸ್
ನೀಡಿ
ಮೂರು
ದಿನಗಳ
ಕಾಲ
ಲೈಂಗಿಕವಾಗಿ
ಕಿರುಕುಳ
ನೀಡಿದ್ದರು.
ಬಾಲಕಿಯನ್ನು
ಕಿಡ್ನಾಪ್
ಮಾಡಿ
ದೇವಿಸ್ಥಾನ್
ಎಂಬ
ದೇವಾಲಯದಲ್ಲಿಟ್ಟು
ಅತ್ಯಾಚಾರವೆಸಗಿ
ಬಳಿಕ
ಹತ್ಯೆ
ಮಾಡಿದ್ದರು.
ಸದ್ಯ
ಸಾಮಾಜಿಕ
ಜಾಲತಾಣದಲ್ಲಿ
ಮಗುವಿಗೆ
ನ್ಯಾಯ
ಸಿಗಬೇಕು
ಎಂದು
ಹೋರಾಟ
ಹೆಚ್ಚಾಗಿದೆ.