Don't Miss!
- News ಲೋಕಸಭಾ ಚುನಾವಣೆಯಲ್ಲಿ ಕೊಡಗಿನಲ್ಲಿ ಮತ್ತೆ ‘ಕೈ’ ಕಮಾಲ್?: ಒಂದಷ್ಟು ನಾಯಕರು ಮೌನವಾಗಿದ್ದೇಕೆ?
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಂಬೆ ಹೈಕೋರ್ಟ್ ನಲ್ಲಿ ಹಿನ್ನಡೆ: ಸಂಕಷ್ಟದಲ್ಲಿ ಸೋನು ಸೂದ್
ಕೊರೊನಾ ಲಾಕ್ಡೌನ್ ಕಾಲದಲ್ಲಿ ಸಹಸ್ರಾರು ಜನರಿಗೆ ಸಹಾಯ ಮಾಡಿ 'ಮಸ್ಸೀಹಾ' (ದೇವರು) ಎನಿಸಿಕೊಂಡಿದ್ದ ನಟ ಸೋನು ಸೂದ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಟ ಸೋನು ಸೂದ್ ಗೆ ಸೇರಿದ ಮುಂಬೈನಲ್ಲಿನ ಸ್ಟಾರ್ ಹೋಟೆಲ್ಗೆ ಮುಂಬೈ ಮಹಾನಗರ ಪಾಲಿಕೆಯು ನೊಟೀಸ್ ಜಾರಿ ಮಾಡಿದ್ದು. ಸೋನು ಸೂದ್ ಅವರ ಹೋಟೆಲ್ ಕಟ್ಟಡವು ಅಕ್ರಮವಾಗಿ ಕಟ್ಟಲ್ಪಟ್ಟಲಾಗಿದೆ ಎಂದು ಬಿಎಂಸಿ ಆರೋಪಿಸಿದೆ.
ಬಿಎಂಸಿಯ ನೊಟೀಸ್ ಅನ್ನು ಪ್ರಶ್ನಿಸಿ, ಬಿಎಂಸಿ ನೊಟೀಸ್ ಗೆ ತಡೆ ನೀಡಬೇಕು ಎಂದು ಕೋರಿ ನಟ ಸೂನು ಸೂದ್ ಬಾಂಬೆ ಹೈಕೋರ್ಟ್ ಮೆಟ್ಟಲೇರಿದ್ದರು. ಆದರೆ ಬಾಂಬೆ ಹೈಕೋರ್ಟ್ ನಲ್ಲಿ ಸೋನು ಸೂದ್ ಗೆ ಹಿನ್ನಡೆ ಆಗಿದೆ.
ಬಿಎಂಸಿ ಯ ನೊಟೀಸ್ ಗೆ ಉತ್ತರ ನೀಡಲು 10 ವಾರಗಳ ಗಡುವನ್ನು ಸೋನು ಸೂದ್ ಪರ ವಕೀಲರು ಕೇಳಿದ್ದರು. ಆದರೆ ಅದನ್ನು ನಿರಾಕರಿಸಿದ ನ್ಯಾಯಾಲಯವು 'ಕಾನೂನು ಪರಿಶ್ರಮ ಪಡುವವರಿಗೆ ಸಹಾಯ ಮಾಡುತ್ತದೆ' ಎಂದು ಹೇಳಿದ್ದಾರೆ.
'ನೀವು ತಡವಾಗಿದ್ದೀರಿ. ಈಗ ಚೆಂಡು ಬಿಎಂಸಿ ಕಚೇರಿಯಲ್ಲಿದೆ. ಅವರೊಂದಿಗೆ ಮಾತನಾಡಿಕೊಳ್ಳಿ. ನೀವು ಸಾಕಷ್ಟು ತಡವಾಗಿದ್ದೀರಿ. ತಪ್ಪನ್ನು ಸರಿಮಾಡಿಕೊಳ್ಳುವ ಅವಕಾಶ ನಿಮಗೆ ಸಾಕಷ್ಟು ಇತ್ತು ಆದರೆ ಅದನ್ನು ನೀವು ಕೈಚೆಲ್ಲಿದ್ದೀರಿ' ಎಂದಿದ್ದಾರೆ ನ್ಯಾಯಮೂರ್ತಿ ಪೃಥ್ವಿರಾಜ್ ಚವಾಣ್.
ಸೋನು ಸೂದ್ ಅವರು ವಾಸತಿಗೃಹವನ್ನು ಹೋಟೆಲ್ ಆಗಿ ಬದಲಾಯಿಸಿದ್ದಾರೆ. ಈ ಬದಲಾವಣೆಗಾಗಿ ನಿಯಮಬಾಹಿರವಾಗಿ ಮನೆಯ ಕೆಲವು ಭಾಗಗಳನ್ನು ಒಡೆದಿದ್ದಾರೆ ಎಂದು ಬಿಎಂಸಿ ಆರೋಪಿಸಿದೆ.
Recommended Video
ಈ ಹಿಂದೆ ಕಂಗನಾ ರಣೌತ್ ಅವರ ಕಚೇರಿಯನ್ನು ಸಹ ಅಕ್ರಮ ನಿರ್ಮಾಣ ಎಂದು ಆರೋಪಿಸಿ ಕೆಡವಿತ್ತು ಬಿಎಂಸಿ. ಆದರೆ ಬಿಎಂಸಿಯ ವರ್ತನೆಯನ್ನು ಸುಪ್ರೀಂಕೋರ್ಟ್ ಟೀಸಿತ್ತು.