Just In
- 8 min ago
ಬ್ಯಾಕ್ ಲೆಸ್ ಡ್ರೆಸ್ ಧರಿಸಿ ಪಿಯಾನೋ ನುಡಿಸುತ್ತಿರುವ ಶ್ರುತಿ ಹಾಸನ್; ವಿಡಿಯೋ ವೈರಲ್
- 2 hrs ago
ನಟಿ ಶ್ರೀದೇವಿ ಎರಡನೇ ಪುತ್ರಿ ಖುಷಿ ಬಾಲಿವುಡ್ ಗೆ ಎಂಟ್ರಿ: ಬೋನಿ ಕಪೂರ್ ಹೇಳಿದ್ದೇನು?
- 2 hrs ago
ಅನೀಶ್ 'ರಾಮಾರ್ಜುನ' ಸಿನಿಮಾದ ರಿಲೀಸ್ ಡೇಟ್ ಫಿಕ್ಸ್: ರಕ್ಷಿತ್ ಶೆಟ್ಟಿ ಸಾಥ್
- 3 hrs ago
ಬಾಲಿವುಡ್ ಗೆ ಎಂಟ್ರಿ ಕೊಟ್ಟ 'ದಿಯಾ' ಪೃಥ್ವಿ ಅಂಬರ್; ಯಾವ ಸಿನಿಮಾ?
Don't Miss!
- News
Jesus Calls ಮಿಷನರಿಯ ದಿನಕರನ್ ಮೇಲೆ ಐಟಿ ದಾಳಿ
- Finance
ಪ್ರಧಾನ ಮಂತ್ರಿ ಜನ್ ಧನ್ ಯೋಜನಾಗೆ 41 ಕೋಟಿಗೂ ಹೆಚ್ಚು ಫಲಾನುಭವಿಗಳು
- Sports
ಸರ್ವಶ್ರೇಷ್ಠ ಸರಣಿ ಗೆಲುವು ಎಂದು ಭಾವುಕರಾದ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ
- Automobiles
ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಸ್ವದೇಶಿ ಕಾರು
- Lifestyle
ಚಳಿಗಾಲದಲ್ಲಿ ಕೂದಲ ಆರೈಕೆಗೆ ಇಲ್ಲಿವೆ ಸರಳ ಮನೆಮದ್ದುಗಳು
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟ್ವಿಟ್ಟರ್ ನಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಕಂಗನಾಗೆ ಹಕ್ಕಿದೆ: ಬಾಂಬೆ ಹೈಕೋರ್ಟ್
ಟ್ವಿಟ್ಟರ್ ಅಕೌಂಟ್ ಹೊಂದಲು ಮತ್ತು ಅದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಬಾಲಿವುಡ್ ನಟಿ ಕಂಗನಾಗೂ ಸಹ ಹಕ್ಕಿದೆ ಎಂದು ಬಾಂಬೆ ಹೈ ಕೋರ್ಟ್ ಹೇಳಿದೆ.
ಇತ್ತೀಚಿಗನ ದಿನಗಳಲ್ಲಿ ಕಂಗನಾ ವಿವಾದಾತ್ಮಕ ಟ್ವೀಟ್ ಮಾಡುತ್ತಿದ್ದಾರೆ, ಕೆಲವು ವಿಚಾರಗಳಲ್ಲಿ ಅತಿರೇಕದ ಟ್ವೀಟ್ ಮಾಡುತ್ತಾರೆ ಎಂದು ಅವರ ಟ್ವಿಟ್ಟರ್ ಖಾತೆಯನ್ನು ಬ್ಲಾಕ್ ಮಾಡಬೇಕು ಎಂದು ವಕೀಲ ಅಲಿ ಕಾಶೀಫ್ ಖಾನ್ ದೇಶ ಮುಖ್ ಎನ್ನುವವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಕಂಗನಾ ರಣೌತ್ ಮೇಲೆ ಮತ್ತೊಂದು ಪ್ರಕರಣ ದಾಖಲು
ನಾನು ಮಹಾರಾಷ್ಟ್ರದವನು, ಮುಂಬೈ ನಿವಾಸಿ, ಕಂಗನಾ ನ್ಯಾಯಾಲಯವನ್ನು ಪಪ್ಪುಸೇನಾ ಎಂದು ಕರೆದಿದ್ದಾರೆ, ಇದು ನನಗೆ ನೋವೊಂಟಾಗಿದೆ, ವೈಯಕ್ತಿಕವಾಗಿ ಧಕ್ಕೆಯಾಗಿದೆ. ಅಲ್ಲದೆ ಕಂಗನಾ ಟ್ವೀಟ್ ಮೂಲಕ ಸಮುದಾಯಗಳ ನಡುವೆ ದ್ವೇಷವನ್ನು ಹರಡುತ್ತಿದ್ದಾರೆ, ಧರ್ಮವನ್ನು ನೋಯಿಸುತ್ತಿದ್ದಾರೆ ಎಂದು ದೇಶ್ ಮುಖ್ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಮುಂದೆ ಓದಿ..

ಅರ್ಜಿದಾರರಿಗೆ ನ್ಯಾಯಾಲಯ ಪ್ರಶ್ನೆ
ನಿನ್ನೆ (ಡಿಸೆಂಬರ್ 21) ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಕಂಗನಾಗೆ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದೆ ಎಂದು ಹೇಳಿದೆ. ಜೊತೆಗೆ ಕಂಗನಾ ಟ್ವೀಟ್ ಗಳಿಂದ ಯಾರ ರೀತಿ ವೈಯಕ್ತಿಕ ಧಕ್ಕೆಯಾಗಿದೆ ಮತ್ತು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂಬುದನ್ನು ತೋರಿಸಿ ಎಂದು ಅರ್ಜಿದಾರರಿಗೆ ನ್ಯಾಯಾಲಯ ಪ್ರಶ್ನೆ ಮಾಡಿದೆ.

ಇದೊಂದು ಅಸ್ಪಷ್ಟ ಅರ್ಜಿ ಎಂದ ನ್ಯಾಯಾಲಯ
ಈ ಅರ್ಜಿಯನ್ನು ಪಿಐಎಲ್ಆಗಿ ಮಾರ್ಪಡಿಸಬೇಕು, ಇಲ್ಲವಾದ್ರೆ ಜನರು ಪತ್ರಿಕೆ ಓದಿ, ನಮಗೂ ನೋವಾಗಿದೆ ಅಂತ ಹೇಳಿಕೊಂಡು ಕೋರ್ಟ್ ಗೆ ಬರಲು ಶುರುಮಾಡುತ್ತಾರೆ ಎಂದು ನ್ಯಾಯಮೂರ್ತಿ ಎಸ್ ಎಸ್ ಶಿಂಧೆ ಹಾಗೂ ಎಂ ಎಸ್ ಕಾರ್ಣಿಕ್ ಅವರನ್ನೊಳಗೊಂಡ ವಿಭಾಗೀಯ ಪೀಠ ಮಹಾರಾಷ್ಟ್ರ ಸರ್ಕಾರದ ಪರ ವಕೀಲ ಜಯೇಶ್ ಯಜ್ಞಿಕ್ ಅವರನ್ನು ಕೇಳಿದೆ. ಸಂವಿಧಾನದ ಹಕ್ಕು ಬೇರೆ, ಸಾಂವಿಧಾನಿಕ ಪರಿಹಾರವೇ ಬೇರೆ. ಇದೊಂದು ಅಸ್ಪಷ್ಟ ಅರ್ಜಿ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ನಟಿ ಕಂಗನಾ ರಣೌತ್ ಅಜ್ಜ ನಿಧನ: ಭಾವುಕರಾದ ನಟಿ

ಟ್ವಿಟ್ಟರ್ ಹೊಂದುವ ಮೂಲಭೂತ ಹಕ್ಕು ಕಂಗನಾಗೆ ಇದೆ
ಯಾವುದೇ ವ್ಯಕ್ತಿ ಟ್ವಿಟ್ಟರ್ ಖಾತೆಯನ್ನು ಹೊಂದಬಹುದು. ಆಕೆಯ ಆಲೋಚನೆಗಳನ್ನು ವ್ಯಕ್ತಪಡಿಸಲು ಖಾತೆಯನ್ನು ಹೊಂದುವ ಮೂಲಭೂತ ಹಕ್ಕುನ್ನು ಸಹ ಕಂಗನಾ ಹೊಂದಿದ್ದಾರೆ. ಅದ್ದರಿಂದ ನಿಮ್ಮ ಮೂಲಭೂತ ಹಕ್ಕು ಹೇಗೆ ಉಲ್ಲಂಘಿಸಲಾಗಿದೆ ಎಂಬುದನ್ನು ತೋರಿಸಬೇಕಾಗಿದೆ. ಈ ಪ್ರಕರಣ ಸಮಂಜಸವಾದ ನಿರರ್ಬಂಧಗಳ ಅಡಿ ಬರದಿದ್ದರೆ, ನಿಮ್ಮ ವಿನಂತಿಯನ್ನು ನಾವು ಒಪ್ಪಿಕೊಳ್ಳಬಹುದೇ? ನೀವೇ ನಿರ್ಣಯ ನೀಡುವಂತಿದ್ರೆ ಏನು ಮಾಡುತ್ತಿರೀ? ಎಂದು ಅರ್ಜಿದಾರರನ್ನು ಪ್ರಶ್ನಿಸಿದ್ದರು.

ಮಾನಸಿಕವಾಗಿ ನೊಂದಿದ್ದೇನೆ ಎಂದು ಅರ್ಜಿದಾರ
ಇದಕ್ಕೆ ಉತ್ತರಿಸಿದ ಅರ್ಜಿ ದಾರರು, ವಾಕ್ ಸ್ವಾತಂತ್ರ್ಯ ಹಾಗೂ ದ್ವೇಷ ಭಾಷಣಕ್ಕೂ ವ್ಯತ್ಯಾಸವಿದೆ. ಕಂಗನಾ ಹೇಗೆ ಅನೇಕರ ಭಾವನೆಗಳನ್ನು ನೋಯಿಸುತ್ತಾರೆ ಎಂಬುವುದಕ್ಕೆ ನನ್ನ ಅರ್ಜಿಯಲ್ಲಿ ಅನೇಕ ಉದಾಹರಣೆಗಳಿವೆ. ಅವರ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿದೆ. ನಾನು ವೈಯಕ್ತಿಕವಾಗಿ, ಮಾನಸಿಕವಾಗಿ ನೊಂದಿದ್ದೇನೆ ಎಂದು ಹೇಳಿದ್ದಾರೆ. ಬಳಿಕ ದೇಶ್ ಮುಖ್ ಅರ್ಜಿಯ ವಿಚಾರಣೆಯನ್ನು ಜನವರಿ 7ಕ್ಕೆ ನ್ಯಾಯಾಲಯ ಮುಂದೂಡಿದೆ.