Don't Miss!
- News Bagalkote: ಸಂಯುಕ್ತ ಪಾಟೀಲ್ ನಾಮಪತ್ರ ಸಲ್ಲಿಕೆ: ಮೆರವಣಿಗೆಯಲ್ಲಿ ಕಾಶಪ್ಪನವರ್ ಭರ್ಜರಿ ಡಾನ್ಸ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಿಯಾ ಚಕ್ರವರ್ತಿ ವಿರುದ್ಧ ಸಿಬಿಐ ಎಫ್ಐಆರ್, ಇಡಿ ಇಂದ ನೋಟಿಸ್
ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ಕುಣಿಕೆ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಕೊರಳಿಗೆ ಸ್ವಲ್ಪ-ಸ್ವಲ್ಪವಾಗಿ ಬಿಗಿಯಾಗುತ್ತಿರುವಂತೆ ತೋರುತ್ತಿದೆ.
ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸಿಬಿಐ ಮೊದಲನೇಯದಾಗಿ ರಿಯಾ ಚಕ್ರವರ್ತಿ ವಿರುದ್ಧ ಪ್ರಕರಣ ದಾಖಲಿಸಿದೆ. ರಿಯಾ ಚಕ್ರವರ್ತಿಯೇ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿದ್ದರು, ಇದೀಗ ಸಿಬಿಐ ರಿಯಾ ವಿರುದ್ಧವೇ ಎಫ್ಐಆರ್ ದಾಖಲಿಸಿದೆ.
ರಿಯಾ ಚಕ್ರವರ್ತಿಗೆ ಅಂಡರ್ವರ್ಲ್ಡ್ ಸಂಪರ್ಕವಿದೆ ಎಂದ ಬಿಹಾರದ ಮಾಜಿ ಮುಖ್ಯಮಂತ್ರಿ
ಮತ್ತೊಂದು ಕಡೆಯಿಂದ ಜಾರಿ ನಿರ್ದೇಶನಾಲಯ (ಇಡಿ) ಸಹ ರಿಯಾ ಗೆ ನೋಟಿಸ್ ಕಳುಹಿಸಿದ್ದು, ಶೀಘ್ರವೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಬಿಹಾರ ಪೊಲೀಸರ ದೂರು ಆಧರಿಸಿ ಎಫ್ಐಆರ್
ಬಿಹಾರ ಪೊಲೀಸರ ಮನವಿ ಆಧರಿಸಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದ್ದು. ಬಿಹಾರ ಪೊಲೀಸರ ದೂರನ್ನು ಆಧರಿಸಿಯೇ ರಿಯಾ ಚಕ್ರವರ್ತಿ ಹಾಗೂ ಅವರ ಕುಟುಂಬದವರ ವಿರುದ್ಧ ದೂರು ಸಿಬಿಐ ಎಫ್ಐಆರ್ ದಾಖಲಿಸಿದೆ.
ಸಿಬಿಐನ ವಿಶೇಷ ತಂಡದಿಂದ ತನಿಖೆ
ವಿಜಯ್ ಮಲ್ಯ ಪ್ರಕರಣ, ಆಗಸ್ಟಾ ವೆಸ್ಟ್ಲ್ಯಾಂಡ್ ಪ್ರಕರಣ ತನಿಖೆ ನಡೆಸುತ್ತಿರುವ ಸಿಬಿಐನ ವಿಶೇಷ ತನಿಖಾ ತಂಡ (ಎಸ್ಐಟಿ) ವೇ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣವನ್ನೂ ಸಹ ತನಿಖೆ ಮಾಡಲಿದೆ.
ದಿಶಾ ಸಾಲಿಯಾನ್ ಆತ್ಮಹತ್ಯೆ: ಆಘಾತಕಾರಿ ಸಂಗತಿಗಳನ್ನು ತೆರೆದಿಟ್ಟ ಪೋಸ್ಟ್ ಮಾರ್ಟಂ ವರದಿ
ಇಡಿ ಸಹ ಸಮನ್ಸ್ ನೀಡಿದೆ
ಸುಶಾಂತ್ ಖಾತೆಯಿಂದ ಕೋಟ್ಯಂತರ ಮೊತ್ತದ ಹಣ ರಿಯಾ ಖಾತೆಗೆ ವರ್ಗಾವಣೆ ಆಗಿದೆ ಎಂಬ ಮಾಹಿತಿ ಆಧರಿಸಿ ಪ್ರಕರಣದಲ್ಲಿ ಆಸಕ್ತಿ ತೋರಿರುವ ಜಾರಿ ನಿರ್ದೇಶನಾಲಯ ಸಹ ರಿಯಾ ಗೆ ನೊಟೀಸ್ ಜಾರಿ ಮಾಡಿದ್ದು, ಶೀಘ್ರವೇ ವಿಚಾರಣೆಗೆ ಹಾಜರಾಗುವಂತೆ ಹೇಳಿದೆ.
ಸುಶಾಂತ್- ರಿಯಾ ಮೊದಲ ಭೇಟಿಯಾಗಿದ್ದು ಎಲ್ಲಿ?: ನಂತರ ನಡೆದಿದ್ದು ಆಘಾತ ಮೂಡಿಸುವ ಘಟನೆಗಳು
ತನಿಖಾಧಿಕಾರಿಗೆ ಕ್ವಾರಂಟೈನ್
ಸುಶಾಂತ್ ಪ್ರಕರಣದ ವಿಚಾರಣೆಗೆಂದು ಮುಂಬೈಗೆ ಬಂದ ಐಪಿಎಸ್ ವಿನಯ್ ತಿವಾರಿಯನ್ನು ಮುಂಬೈ ಮಹಾನಗರ ಪಾಲಿಕೆಯವರು ಹೋಂ ಕ್ವಾರಂಟೈನ್ಗೆ ಹಾಕಿದ್ದಾರೆ. ಇದನ್ನು ವಿನಯ್ತಿವಾರಿ ತೀವ್ರವಾಗಿ ಖಂಡಿಸಿದ್ದಾರೆ. ಉದ್ದೇಶಪೂರ್ವಕವಾಗಿ ನನ್ನನ್ನು ಕ್ವಾರಂಟೈನ್ಗೆ ಹಾಕಲಾಗಿದೆ ಎಂದಿದ್ದಾರೆ.