twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರೀಕರಣ ಶುರುವಾಗುವ ಮುನ್ನವೇ 3 ಕೋಟಿ ನಷ್ಟ ಅನುಭವಿಸಿದ ಸಿನಿಮಾ!

    |

    ರಾಜಮೌಳಿ-ಪ್ರಭಾಸ್‌ ಕಾಂಬಿನೇಷನ್‌ನಲ್ಲಿ 2005 ರಲ್ಲಿ ತೆರೆಗೆ ಬಂದ ಮೊದಲ ಸಿನಿಮಾ 'ಛತ್ರಪತಿ' ಭಾರಿ ಹಿಟ್ ಆಗಿತ್ತು. ಹಲವು ದಾಖಲೆಗಳನ್ನು ಬರೆದ ಈ ಸಿನಿಮಾದ ಕ್ರೇಜ್ ಈಗಲೂ ಕಡಿಮೆಯಾಗಿಲ್ಲ.

    'ಛತ್ರಪತಿ' ಸಿನಿಮಾವನ್ನು ಕನ್ನಡದಲ್ಲಿಯೂ ರೀಮೇಕ್ ಮಾಡಲಾಯಿತಾದರೂ ಸಿನಿಮಾ ಇನ್ನಿಲ್ಲದಂತೆ ಸೋತಿತು. ಇದೀಗ 16 ವರ್ಷಗಳ ಬಳಿಕ ಮತ್ತೆ ಈ ಸಿನಿಮಾ ರೀಮೇಕ್‌ ಆಗುತ್ತಿದೆ. ಹಿಂದಿ ಭಾಷೆಗೆ. ವಿಶೇಷವೆಂದರೆ ತೆಲುಗು ನಿರ್ದೇಶಕ, ನಾಯಕರೇ ಈ ಸಿನಿಮಾವನ್ನು ಹಿಂದಿಗೆ ರೀಮೇಕ್ ಮಾಡುತ್ತಿದ್ದಾರೆ.

    ತೆಲುಗಿನ ಖ್ಯಾತ ನಿರ್ದೇಶಕ ವಿವಿ ವಿನಾಯಕ್, 'ಛತ್ರಪತಿ' ಸಿನಿಮಾವನ್ನು ಹಿಂದಿಗೆ ರೀಮೇಕ್ ಮಾಡುತ್ತಿದ್ದು, ಬೆಲ್ಲಂಕೊಂಡ ಶ್ರೀನಿವಾಸ್ ನಾಯಕರಾಗಿ ನಟಿಸುತ್ತಿದ್ದಾರೆ. ಆ ಸಿನಿಮಾ ಚಿತ್ರೀಕರಣ ಪ್ರಾರಂಭವಾಗುವ ಮುನ್ನೇ 3 ಕೋಟಿ ನಷ್ಟ ಅನುಭವಿಸಿದೆ.

    3 ಕೋಟಿ ಖರ್ಚು ಮಾಡಿದ್ದ ಸೆಟ್ ಹಾಳಾಗಿದೆ

    3 ಕೋಟಿ ಖರ್ಚು ಮಾಡಿದ್ದ ಸೆಟ್ ಹಾಳಾಗಿದೆ

    ಸಿನಿಮಾದ ಚಿತ್ರೀಕರಣಕ್ಕೆಂದು ಹೈದರಾಬಾದ್‌ ಬಳಿ ಸಿನಿಮಾಕ್ಕಾಗಿ ದೊಡ್ಡ ಹಳ್ಳಿಯ ಸೆಟ್‌ ಹಾಕಲಾಗಿತ್ತು. ಆದರೆ ಕೊರೊನಾ ಬಂದ ಕಾರಣ ಚಿತ್ರೀಕರಣ ಸ್ಥಗಿತವಾಗಿ ಸೆಟ್‌ ಹಾಗೆಯೇ ಇತ್ತು. ಆದರೆ ಇತ್ತೀಚೆಗೆ ತೆಲಂಗಾಣ, ಆಂಧ್ರಗಳಲ್ಲಿ ಭಾರಿ ಮಳೆ ಬಂದು 3 ಕೋಟಿ ಖರ್ಚು ಮಾಡಿ ಹಾಕಲಾಗಿದ್ದ ಸೆಟ್‌ ಹಾಳಾಗಿದೆ.

    'ರಂಗಸ್ಥಳ' ಸೆಟ್‌ ಹಾಕಿದ್ದ ಜಾಗದಲ್ಲಿಯೇ ಸೆಟ್‌

    'ರಂಗಸ್ಥಳ' ಸೆಟ್‌ ಹಾಕಿದ್ದ ಜಾಗದಲ್ಲಿಯೇ ಸೆಟ್‌

    ರಾಮ್ ಚರಣ್ ತೇಜ ನಟಿಸಿದ್ದ 'ರಂಗಸ್ಥಳಂ' ಸಿನಿಮಾದ ಸೆಟ್ ಹಾಕಿದ್ದ ಜಾಗದಲ್ಲಿಯೇ ಹಿಂದಿ 'ಛತ್ರಪತಿ'ಗಾಗಿ ಸೆಟ್ ಹಾಕಲಾಗಿತ್ತು. ಆದರೆ ಈಗ ಸೆಟ್ ಸಂಪೂರ್ಣ ಹಾಳಾಗಿದ್ದು ಸಿನಿಮಾಕ್ಕಾಗಿ ಮತ್ತೆ ಹಾಕಬೇಕಿದೆ. ಸಿನಿಮಾ ನಿರ್ಮಾಪಕ ಬೆಲ್ಲಂಕೊಂಡ ಸುರೇಶ್ ಇದಕ್ಕೆ ತಯಾರಾಗಿದ್ದಾರೆ.

    ಬಾಲಿವುಡ್‌ನಲ್ಲಿ ಲಾಂಚ್ ಮಾಡಲು ಸಿನಿಮಾ

    ಬಾಲಿವುಡ್‌ನಲ್ಲಿ ಲಾಂಚ್ ಮಾಡಲು ಸಿನಿಮಾ

    ನಿರ್ಮಾಪಕ ಬೆಲ್ಲಂಕೊಂಡ ಸುರೇಶ್, ತಮ್ಮ ಮಗ ಬೆಲ್ಲಂಕೊಂಡ ಶ್ರೀನಿವಾಸ್ ಅನ್ನು ಬಾಲಿವುಡ್‌ನಲ್ಲಿ ಲಾಂಚ್ ಮಾಡಲೆಂದೇ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಬೆಲ್ಲಂಕೊಂಡ ಶ್ರೀನಿವಾಸ್ ಈಗಾಗಲೇ ತೆಲುಗಿನಲ್ಲಿ ಎಂಟು ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿದ್ದಾರೆ.

    Recommended Video

    ತೆಲುಗು ನನ್ನ ಮಾತೃಭಾಷೆ ಆದರೆ ಹೃದಯದ ಭಾಷೆ ಕನ್ನಡ ಅಂದ್ರು ಅಕುಲ್ ಹೆಂಡ್ತಿ | Filmibeat Kannada
    'ಛತ್ರಪತಿ' ಸಿನಿಮಾ ರೀಮೇಕ್ ಮತ್ತು ಡಬ್

    'ಛತ್ರಪತಿ' ಸಿನಿಮಾ ರೀಮೇಕ್ ಮತ್ತು ಡಬ್

    2005 ರಲ್ಲಿ ಬಿಡುಗಡೆ ಆಗಿದ್ದ 'ಛತ್ರಪತಿ' ಸಿನಿಮಾದಲ್ಲಿ ಪ್ರಭಾಸ್, ಶ್ರೆಯಾ ನಟಿಸಿದ್ದರು. ಸಿನಿಮಾವು ಹಿಂದಿಗೆ 'ಹುಕೂಮತ್‌ ಕಿ ಜಂಗ್' ಹೆಸರಿನಲ್ಲಿ 2009ರಲ್ಲಿ ಡಬ್ ಆಯಿತು. ತಮಿಳಿನಲ್ಲಿ 'ಚಂದ್ರಮೌಳಿ' ಹೆಸರಿನಲ್ಲಿ ಡಬ್ ಆಗಿ ಬಿಡುಗಡೆ ಆಯಿತು. ಬೆಂಗಾಲಿಯಲ್ಲಿ 'ರೆಫ್ಯೂಜಿ' ಹೆಸರಲ್ಲಿ ರೀಮೇಕ್ ಮಾಡಲಾಯಿತು. ನಂತರ ಕನ್ನಡದಲ್ಲಿ 'ಛತ್ರಪತಿ' ಹೆಸರಿನಲ್ಲಿ 2013 ರೀಮೇಕ್ ಮಾಡಲಾಯಿತು.

    English summary
    Bellamkonda Sai Srinivas's new movie set in Hyderabad vanished in rain. He is acting in Hindi movie which is remake of Telugu movie Chatrapathi.
    Thursday, June 3, 2021, 23:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X