Don't Miss!
- News ಕ್ವಿಟ್ ಎನ್ಡಿಎ ಮತ್ತು ಸೇವ್ ಇಂಡಿಯಾ: ಪ್ರೊ. ಮಹೇಶ್ಚಂದ್ರಗುರು
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಸಿನಿಮಾ ನೀತಿ ಘೋಷಿಸಲಿರುವ ಚತ್ತೀಸ್ಘಡ: ವಿಶೇಷತೆಗಳೇನು?
ಚತ್ತೀಸ್ಘಡ ರಾಜ್ಯ ಸರ್ಕಾರವು ಹೊಸ ಸಿನಿಮಾ ನೀತಿಯನ್ನು ರೂಪಿಸುತ್ತಿದ್ದು, ಕೆಲವೇ ದಿನಗಳಲ್ಲಿ ಘೋಷಿಸಲಿದೆ.
ರಾಜ್ಯದಲ್ಲಿ ಚಿತ್ರೀಕರಣ, ಚಿತ್ರ ನಿರ್ಮಾಣ ಹೆಚ್ಚು ಮಾಡುವ ಮೂಲಕ ಪ್ರವಾಸೋದ್ಯಮವನ್ನು ಹೆಚ್ಚಿಸುವ ಗುರಿಯೊಂದಿಗೆ ಹೊಸ ಸಿನಿಮಾ ನೀತಿ 2021ರ ಕರಡು ತಯಾರಿಸಲಾಗಿದ್ದು, ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆ ಆಗಲಿದೆ.
ಚತ್ತೀಸ್ಘಡ ಮುಖ್ಯಮಂತ್ರಿ ಭೂಪೇಶ್ ಭಗೇಲ್ ನೇತೃತ್ವದಲ್ಲಿ ನಡೆದಿರುವ ಸಂಪುಟ ಸಭೆಯಲ್ಲಿ ರಾಜ್ಯಕ್ಕೆ ಹೊಸ ಸಿನಿಮಾ ನೀತಿ ಜಾರಿ ಮಾಡುವ ಬಗ್ಗೆ ಚರ್ಚೆ ನಡೆದು ಸಿಎಂ ಒಪ್ಪಿಗೆಯನ್ನೂ ಸೂಚಿಸಿದ್ದು, ಹೊಸ ನೀತಿಯ ಕರಡು ಸಿದ್ಧವಾಗುತ್ತಿದೆ.
ಚತ್ತಿಸ್ಘಡ ರಾಜ್ಯ ಸರ್ಕಾರವು ಬಾಲಿವುಡ್ ಹಾಗು ಒಟಿಟಿ ಕಂಟೆಂಟ್ ನಿರ್ಮಾಣ ಮಾಡುವವರನ್ನು ಸೆಳೆಯಲು ಉದ್ದೇಶಿಸಿದ್ದು, ರಾಜ್ಯದ ಶ್ರೀಮಂತ ನೈಸರ್ಗಿಕ ಸಂಪತ್ತು, ಐತಿಹಾಸಿಕ ಸ್ಥಳಗಳಲ್ಲಿ ಚಿತ್ರೀಕರಣ ನಡೆದು ರಾಜ್ಯದ ಗುರುತು ರಾಷ್ಟ್ರಮಟ್ಟದಲ್ಲಿ ಹೆಚ್ಚಾಗಲಿ ಆ ಮೂಲಕ ರಾಜ್ಯದ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿ ಎಂಬುದು ಸರ್ಕಾರದ ಗುರಿ.
ಈ ಬಗ್ಗೆ ಮಾತನಾಡಿರುವ ಸರ್ಕಾರದ ಸಲಹೆಗಾರ ಗೌರವ್ ದ್ವಿವೇದಿ, ''ಚತ್ತೀಸ್ಘಡ ಸರ್ಕಾರದ ಹೊಸ ಸಿನಿಮಾ ಪಾಲಿಸಿಯು ರಾಜ್ಯದಲ್ಲಿ ಯುವಕರಿಗೆ ಸಿನಿಮಾ ನಿರ್ಮಾಣದ ವಿವಿಧ ವಿಭಾಗಗಳಲ್ಲಿ ಉದ್ಯೋಗ ಒದಗಿಸಲಿದೆ. ರಾಜ್ಯ ಸರ್ಕಾರ ಹೊರಡಿಸಲಿರುವ ಹೊಸ ಸಿನಿಮಾ ಪಾಲಿಸಿಯು ಚಿತ್ರರಂಗಕ್ಕೆ ಸಹಕಾರಿಯಾಗುವ ಜೊತೆ-ಜೊತೆಗೆ ರಾಜ್ಯದ ಅಭಿವೃದ್ಧಿಗೂ ಸಹಕಾರಿಯಾಗಲಿದೆ'' ಎಂದಿದ್ದಾರೆ.
ಚತ್ತೀಸ್ಘಡವು ಹೆಚ್ಚು ನೈಸರ್ಗಿಕ ಸಂಪತ್ತನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ. ಹಲವು ಜಲಪಾತಗಳು ಸಹ ರಾಜ್ಯದಲ್ಲಿವೆ. ರಾಜ್ಯದಲ್ಲಿ ಪುರಾತನ ದೇವಾಲಯಗಳು, ಸುಂದರ ಕೋಟೆಗಳು ಸಹ ಇವೆ. ಸಿನಿಮಾ ಚಿತ್ರೀಕರಣಕ್ಕೆ ಬೇಕಾದ ಹಲವು ಸುಂದರ ಸ್ಥಳಗಳು ಚತ್ತೀಸ್ಘಡದಲ್ಲಿವೆ.
ಎಮ್ಮಿ ಎಂಟರ್ಟೈನ್ಮೆಂಟ್ ಸೇರಿದಂತೆ ಇನ್ನೂ ಕೆಲವು ನಿರ್ಮಾಣ ಸಂಸ್ಥೆಗಳು ಚತ್ತೀಸ್ಘಡ ಸರ್ಕಾರದ ಹೊಸ ಸಿನಿಮಾ ನೀತಿ ಜಾರಿ ಮಾಡುವ ಉದ್ದೇಶವನ್ನು ಸ್ವಾಗತಿಸಿವೆ.
ಕೆಲವು ದಿನಗಳ ಹಿಂದಷ್ಟೆ ಜಮ್ಮು ಕಾಶ್ಮೀರವು ಹೊಸ ಸಿನಿಮಾ ನೀತಿಯನ್ನು ಘೋಷಿಸಿತು. ಬಾಲಿವುಡ್ ನಟ ಅಮೀರ್ ಖಾನ್, ರಾಜ್ ಕುಮಾರ್ ಹಿರಾನಿ, ಜಮ್ಮು ಕಾಶ್ಮೀರದ ರಾಜ್ಯಪಾಲ ಮನೋಜ್ ಸಿನ್ಹಾ ಹೊಸ ಸಿನಿಮಾ ನೀತಿಯನ್ನು ಬಿಡುಗಡೆಗೊಳಿಸಿದರು.
ಜಮ್ಮು ಕಾಶ್ಮೀರದಲ್ಲಿ ಚಿತ್ರೀಕರಣ ನಡೆಸಲು ಅವಶ್ಯಕವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ರಾಜ್ಯಪಾಲ ಮನೋಜ್ ಸಿನ್ಹಾ ಹೇಳಿದ್ದಾರೆ. ಜೊತೆಗೆ ಜಮ್ಮು ಕಾಶ್ಮೀರಕ್ಕೆ ಬರುವ ಸಿನಿಮಾ ಕರ್ಮಿಗಳಿಗೆ ವಿಶೇಷ ಭತ್ಯೆಯನ್ನು ಸಹ ಘೋಷಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಸ್ಥಳೀಯವಾಗಿ ಸಿನಿಮಾ ನಿರ್ಮಾಣವನ್ನು ಸಹ ಹೊಸ ನೀತಿಯು ಬೆಂಬಲಿಸಿದೆ. ಸದ್ಯಕ್ಕೆ ಮುಚ್ಚಿರುವ ಚಿತ್ರಮಂದಿರಗಳನ್ನು ತೆರೆಯಲು, ಹಾಳಾಗಿರುವ ಚಿತ್ರಮಂದಿರಗಳನ್ನು ಅಭಿವೃದ್ಧಿಪಡಿಸುವ, ಮಲ್ಟಿಫ್ಲೆಕ್ಸ್ಗಳು ಕಣಿವೆ ರಾಜ್ಯದಲ್ಲಿ ಕಾರ್ಯಾರಂಭ ಮಾಡಲು ಸೂಕ್ತ ಅವಕಾಶವನ್ನು ಮಾಡಿಕೊಡುವುದಾಗಿ ಹೊಸ ಸಿನಿಮಾ ನೀತಿಯನ್ನು ಹೇಳಲಾಗಿದೆ. ಇಡೀ ಜಮ್ಮು ಕಾಶ್ಮೀರದಲ್ಲಿ ಕೇವಲ ಒಂದು ಪಿವಿಆರ್ ಅಷ್ಟೆ ಇದೆ. ಶ್ರೀನಗರದಲ್ಲಿ 10 ಚಿತ್ರಮಂದಿರಗಳು ಇವೆಯಾದರೂ ಎಲ್ಲವೂ ಬಂದ್ ಆಗಿವೆ ಕೆಲವನ್ನು ಆಸ್ಪತ್ರೆಗಳಾಗಿ ಬದಲಾಯಿಸಲಾಗಿದೆ.