Don't Miss!
- News Rain Alert: ಹುಬ್ಬಳ್ಳಿ-ಧಾರವಾಡ ಸೇರಿ ವಿವಿಧೆಡೆ ವ್ಯಾಪಕ ಮಳೆ ಆರ್ಭಟ
- Automobiles ಅತ್ಯಾಧುನಿಕ ಅಡಾಸ್ನೊಂದಿಗೆ ಬರಲಿದೆ ಈ ಕಿಯಾ ಕಾರು: ಟಾಟಾ ಪಂಚ್ಗೆ ಇನ್ನು ದೇವರೇ ಗತಿ!
- Technology ಬಜೆಟ್ ಬೆಲೆಗೆ ಲಭ್ಯವಿರುವ ಈ ಫೋನ್ಗಳ ಫೀಚರ್ಸ್ ತಿಳಿದ್ರೆ, ವಾವ್ ಅಂತೀರಾ!
- Lifestyle ವೀಲ್ಚೇರ್ನಲ್ಲಿ ಮಾವನ ಹೆಣವಿಟ್ಟು ಬ್ಯಾಂಕ್ಗೆ ತಂದ ಸೊಸೆ..! ಲೋನ್ ಮಾಡಿಸುವಾಗ ಸಿಕ್ಕಿಬಿದ್ಲು..!
- Finance ಅಂಬುಜಾ ಸಿಮೆಂಟ್ ಮೇಲೆ ಅದಾನಿ ಗ್ರೂಪ್ನಿಂದ 8,339 ಕೋಟಿ ರೂ. ಹೂಡಿಕೆ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾಕ್ಕೆ ಬಳಸುತ್ತಿದ್ದ ವ್ಯಾನಿಟಿ ವ್ಯಾನ್ಗಳು ಕೋವಿಡ್ ರೋಗಿಗಳ ಚಿಕಿತ್ಸೆಗೆ
ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿದ್ದು ಶಿಸ್ತಿನ ಕರ್ಫ್ಯೂ ವಿಧಿಸಲಾಗಿದೆ. ಹಾಗಾಗಿ ಬಾಲಿವುಡ್ನಲ್ಲಿ ಹಲವು ಸಿನಿಮಾಗಳ ಚಿತ್ರೀಕರಣ ಬಂದ್ ಆಗಿವೆ. ಸ್ಟಾರ್ ನಟ-ನಟಿಯರು ಸಹ ಮುಂಬೈ ಬಿಟ್ಟು ಹೊರದೇಶಗಳಿಗೆ ತೆರಳಿಬಿಟ್ಟಿದ್ದಾರೆ.
ಚಿತ್ರೀಕರಣವೇ ಇಲ್ಲದಿರುವ ಕಾರಣ ಸಿನಿಮಾಕ್ಕೆ ಬಳಸುವ ವ್ಯಾನಿಟಿ ವ್ಯಾನ್ಗಳು ಇತರೆ ವಾಹನಗಳು ಖಾಲಿ ಇದ್ದು ಅವುಗಳನ್ನು ವ್ಯಾನಿಟಿ ವ್ಯಾನ್ ಮಾಲೀಕರು ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲು ನೀಡಿದ್ದಾರೆ.
'ಗಂಗೂಭಾಯಿ ಕಾಠಿಯಾವಾಡಿ', 'ಸರ್ಕಸ್' ಹಾಗೂ 'ರಕ್ಷಾ ಬಂಧನ್' ಸಿನಿಮಾಕ್ಕೆ ಬಳಕೆ ಆಗುತ್ತಿದ್ದ ವ್ಯಾನಿಟಿ ವ್ಯಾನ್ಗಳನ್ನು ಮುಂಬೈನಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಿಕೊಳ್ಳಲು ನೀಡಲಾಗಿದೆ.
ವ್ಯಾನಿಟಿ ವ್ಯಾನ್ ಬಾಡಿಗೆಗೆ ನೀಡುವ ವ್ಯವಹಾರ ಮಾಡುವ ಕೇತನ್ ರವಾಲ್ ಹಲವು ಬಿಗ್ ಬಜೆಟ್ ಸಿನಿಮಾಗಳಿಗೆ ವ್ಯಾನಿಟಿ ವ್ಯಾನ್ ಅನ್ನು ಬಾಡಿಗೆಗೆ ನೀಡುತ್ತಾರೆ. 'ಗಂಗೂಭಾಯಿ ಕಾಠಿಯಾವಾಡಿ', 'ಸರ್ಕಸ್' ಹಾಗೂ 'ರಕ್ಷಾ ಬಂಧನ್' ಮೂರೂ ಸಿನಿಮಾಕ್ಕೆ ಅವರೇ ವ್ಯಾನಿಟಿ ವ್ಯಾನ್ ನೀಡಿದ್ದರು. ಇದೀಗ ಕೋವಿಡ್ ಕಾರಣ ಈ ಮೂರು ಸಿನಿಮಾಗಳ ಚಿತ್ರೀಕರಣ ಬಂದ್ ಆಗಿದ್ದು ಆ ವ್ಯಾನಿಟಿ ವ್ಯಾನ್ಗಳನ್ನು ಕೋವಿಡ್ ಚಿಕಿತ್ಸೆಗೆ ಉಚಿತವಾಗಿ ನೀಡಿದ್ದಾರೆ ಕೇತನ್ ರವಾಲ್.
'ನನ್ನ ಬಳಿ ಸಾಕಷ್ಟು ವ್ಯಾನಿಟಿ ವ್ಯಾನ್ಗಳು ಇವೆ ಅವುಗಳನ್ನು ನಾನು ಕೋವಿಡ್ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ, ಪೊಲಿಸರಿಗೆ ಬಳಸಿಕೊಳ್ಳಲು ಕೊಟ್ಟಿದ್ದೇನೆ. ವ್ಯಾನಿಟಿ ವ್ಯಾನ್ನಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ಸಹ ನೀಡುತ್ತಿದ್ದಾರೆ' ಎಂದಿದ್ದಾರೆ ಕೇತನ್ ರವಾಲ್.
Recommended Video
ಕಳೆದ ವರ್ಷವೂ ಸಹ ಕೇತನ್ ರವಾಲ್ ಅವರು ವ್ಯಾನಿಟಿ ವ್ಯಾನ್ಗಳನ್ನು ಕೋವಿಡ್ ಸಿಬ್ಬಂದಿಯ ಬಳಕೆಗೆ ಉಚಿತವಾಗಿ ನೀಡಿದ್ದರು.