ವಿವಾದಕ್ಕೆ ಕಾರಣವಾಯ್ತು ದೀಪಿಕಾ-ರಣ್ವೀರ್ ಮದ್ವೆ.!
Recommended Video

ಬಾಲಿವುಡ್ ನಟ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜೋಡಿ ನವೆಂಬರ್ 14 ಮತ್ತು 15 ರಂದು ಇಟಲಿಯ ಲೇಕ್ ಕೊಮೊದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.
ಕೊಂಕಣಿ ಮತ್ತು ಸಿಂಧಿ ಸಂಪ್ರದಾಯದಂತೆ ದೀಪ್-ವೀರ್ ಜೋಡಿ ಮದುವೆಯಾಗಿದ್ದು, ಈಗ ಆ ವಿವಾಹ ವಿವಾದಕ್ಕೆ ಕಾರಣವಾಗಿದೆ. ಹೌದು, ಸಿಂಧಿ ಸಂಪ್ರದಾಯದಲ್ಲಿ ನಡೆದ ಮದುವೆ ಈಗ ಸಿಖ್ಖರ ಕೆಂಗಣ್ಣಿಗೆ ಗುರಿಯಾಗಿದೆ.
ಆನಂದ್ ಕಾರಂಜ್ ಸಂಪ್ರದಾಯ ಎಂದು ಕರೆಯುವ ಇದರಲ್ಲಿ ಗುರು ಗ್ರಂಥ ಸಾಹೀಬ್ ನ್ನು ಗುರುದ್ವಾರ ಹೊರತುಪಡಿಸಿ ಬೇರೆಲ್ಲೂ ಕೊಂಡೊಯ್ದು ಆಚರಿಸುವಂತಿಲ್ಲ ಎಂದು ಸಿಖ್ಖರ ಪರಮೋಚ್ಚ ಧರ್ಮಪೀಠ ಅಕಾಲ್ ತಖ್ತ್ ಹೇಳುತ್ತದೆ. ಅಕಾಲ್ ತಖ್ತ್ ನಿಯಮಗಳನ್ನು ಉಲ್ಲಂಘಿಸಿ ದೀಪಿಕಾ ಮತ್ತು ರಣವೀರ್ ಇಟಲಿಯ ಲೇಕ್ ಕೊಮೊದಲ್ಲಿ ಮದುವೆಯಾಗಿರುವುದು ಸಿಖ್ ಧಾರ್ಮಿಕ ನಾಯಕರ ಕೋಪಕ್ಕೆ ಕಾರಣವಾಗಿದೆ.

ಹೀಗಾಗಿ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಖ್ ಮುಖಂಡರು ಒತ್ತಾಯಿಸಿದ್ದಾರೆ. ದೀಪಿಕಾ ಪಡುಕೋಣೆ ಕೊಂಕಣಿ ಸಮುದಾಯದವರಾಗಿದ್ದು, ರಣ್ವೀರ್ ಸಿಂಗ್ ಸಿಖ್ ಸಮುದಾಯಕ್ಕೆ ಸೇರಿದ್ದಾರೆ.
ಇಟಲಿಯಲ್ಲಿ ಮದುವೆ ಆದ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ನವೆಂಬರ್ 18 ರಂದು ಭಾರತಕ್ಕೆ ಬಂದರು. ನವೆಂಬರ್ 21 ರಂದು ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದ್ದು, ನವೆಂಬರ್ 28 ರಂದು ಮುಂಬೈನಲ್ಲಿ ಆರತಕ್ಷತೆ ನಡೆಯಲಿದೆ.


Click it and Unblock the Notifications











