Don't Miss!
- Sports ಟಿ20 ವಿಶ್ವಕಪ್ 2024: ಟೀಮ್ ಇಂಡಿಯಾಗೆ ದೊಡ್ಡ ಚಿಂತೆಯಾದ ಈ ಆರಂಭಿಕನ ಫಾರ್ಮ್
- Technology iPhone: ಐಫೋನ್ 16 ಸರಣಿಯ ಕ್ಯಾಮೆರಾ ಫೀಚರ್ಸ್ ಲೀಕ್! ಏನೆಲ್ಲಾ ವಿಶೇಷತೆ ಇವೆ?..
- News Tamarind Fruit Juice: ಬಾಯಾರಿಕೆ ನೀಗಿಸಲು ಹುಣಸೆ ಹಣ್ಣಿನ ಪಾನಕ ಪರಿಚಯಿಸಿದ ಆಯುಷ್ ಇಲಾಖೆ, ಮಾಡುವುದು ಹೇಗೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಂಗನಾ ರಣೌತ್ ಹೊಸ ಸಿನಿಮಾ ಆರಂಭಕ್ಕೆ ಮುನ್ನವೇ ವಿಘ್ನ!
ಈ ಹಿಂದೆ ಕಂಗನಾ ರಣೌತ್ ನಟಿಸಿದ್ದ ಬಾಲಿವುಡ್ ಸಿನಿಮಾ 'ಮಣಿಕರ್ಣಿಕಾ; ದಿ ಕ್ವೀನ್ ಆಫ್ ಝಾನ್ಸಿ' ಸಿನಿಮಾದ ಮುಂದುವರೆದ ಭಾಗದಲ್ಲಿ ತಾವೇ ನಟಿಸುವುದಾಗಿ ಕೆಲವು ದಿನಗಳ ಹಿಂದಷ್ಟೆ ಕಂಗನಾ ಹೇಳಿದ್ದರು. 'ಮಣಿಕರ್ಣಿಕಾ; ದಿ ಲಿಜೆಂಡ್ ಆಫ್ ದಿದ್ದಾ' ಎಂದು ಸಿನಿಮಾಕ್ಕೆ ಹೆಸರಿಡಲಾಗಿತ್ತು.
ಆದರೆ ಈ ಸಿನಿಮಾ ಪ್ರಾರಂಭವಾಗುವ ಮೊದಲೇ ಸಿನಿಮಾಕ್ಕೆ ವಿಘ್ನ ಎದುರಾಗಿದೆ. ಬರಹಗಾರರೊಬ್ಬರು, ಕಂಗನಾ ವಿರುದ್ಧ ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.
ಕಂಗನಾ ತಮ್ಮ ಹೊಸ ಸಿನಿಮಾದ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಬರಹಗಾರ ಆಶಿಶ್ ಕೌಲ್, ಕಂಗನಾ ರಣೌತ್ ತಮ್ಮ ಕತೆಯನ್ನು ಕದ್ದಿದ್ದಾರೆ' ಎಂದು ಆರೋಪಿಸಿದ್ದಾರೆ.
'ದಿದ್ದಾ; ಕಶ್ಮೀರ್ ಕಿ ಯೋಧಾ ರಾಣಿ' ಹೆಸರಿನ ಪುಸ್ತಕ ಬರೆದಿರುವ ಆಶಿಶ್, ರಾಣಿ ದಿದ್ದಾ ಬಗೆಗೆ ಆರು ವರ್ಷ ಸಂಶೋಧನೆ ಮಾಡಿ ಕತೆ ಬರೆದಿದ್ದೇನೆ. ಕಂಗನಾ ತಮ್ಮ ಅನುಮತಿ ಇಲ್ಲದೆ ರಾಣಿ ದಿದ್ದಾ ಬಗ್ಗೆ ಸಿನಿಮಾ ಮಾಡುತ್ತಿದ್ದಾರೆ. ದಿದ್ದಾಳ ಕತೆಯ ಮೇಲಿನ ಹಕ್ಕು ನನ್ನ ಬಳಿ ಮಾತ್ರವೇ ಇದೆ' ಎಂದಿದ್ದಾರೆ ಬರಹಗಾರ ಆಶಿಶ್.
ನಾನು, ನನ್ನ ಪುಸ್ತಕ 'ದಿದ್ದಾ; ಕಶ್ಮೀರ್ ಕಿ ಯೋಧಾ ರಾಣಿ' ಪುಸ್ತಕಕ್ಕೆ ಮುನ್ನುಡಿ ಬರೆದುಕೊಡುವಂತೆ ಕಂಗನಾ ರಣೌತ್ಗೆ ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಇ-ಮೇಲ್ ಮಾಡಿದ್ದೆ. ಇ-ಮೇಲ್ನಲ್ಲಿಯೇ ರಾಣಿ ದಿದ್ದಾಳ ಸಾಹಸಗಾಥೆಗಲ ಬಗ್ಗೆ ವಿವರಣೆ ನೀಡಿದ್ದೆ, ನನಗೆ ಪ್ರತಿಕ್ರಿಯೆ ಬರಲಿಲ್ಲ, ಆದರೆ ಈಗ ನಾನೇ ಬರೆದಿರುವ ಕತೆಯನ್ನು ಸಿನಿಮಾ ಮಾಡುವುದಾಗಿ ಕಂಗನಾ ಘೋಷಿಸಿದ್ದಾರೆ ಎಂದಿದ್ದಾರೆ ಆಶಿಶ್.
Recommended Video
ಆರು ವರ್ಷ ನಾನು ಹಲವು ಜಾಗಗಳಿಗೆ ಸುತ್ತಿ ಸಂಶೋಧನೆ ನಡೆಸಿ, ದಾಖಲೆಗಳನ್ನು ಕಲೆ ಹಾಕಿ ಪುಸ್ತಕ ಬರೆದಿದ್ದೇನೆ. ಆದರೆ ಕಂಗನಾ ನನ್ನ ಕತೆಯನ್ನು ನನ್ನ ಅನುಮತಿ ಇಲ್ಲದೆ ಸಿನಿಮಾ ಮಾಡುವುದಾಗಿ ಹೇಳುತ್ತಿದ್ದಾರೆ ಎಂದಿದ್ದಾರೆ ಆಶಿಶ್.