Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಂಗನಾ ಗೆ ಹಿನ್ನಡೆ: ಕಟ್ಟಡ ಕೆಡವುವ ನೊಟೀಸ್ಗೆ ತಡೆ ನೀಡಲು ಕೋರ್ಟ್ ನಕಾರ
ಸೆಪ್ಟೆಂಬರ್ ತಿಂಗಳಿನಲ್ಲಿ ನಟಿ ಕಂಗನಾ ರಣೌತ್ಗೆ ಸೇರಿದ ಕಚೇರಿಯನ್ನು ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು 'ನಿಯಮ ಬಾಹಿರ ನಿರ್ಮಾಣ'ದ ಕಾರಣ ನೀಡಿ ಧ್ವಂಸ ಮಾಡಿದ್ದರು. ಆದರೆ ಕೋರ್ಟ್ ಮೆಟ್ಟಿಲೇರದ್ದ ಕಂಗನಾ ಗೆ 'ನೈತಿಕ ಗೆಲುವು' ದೊರೆತಿತ್ತು.
ಆದರೆ ಈಗ ಕಂಗನಾ ರ ಮತ್ತೊಂದು ಕಟ್ಟಡಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ಕಂಗನಾ ರಣೌತ್ ಗೆ ಹಿನ್ನಡೆ ಆಗಿದೆ.
ಮುಂಬೈನ ಖಾರ್ ಪ್ರದೇಶದಲ್ಲಿ ಕಂಗನಾಗೆ ದೊಡ್ಡ ಅಪಾರ್ಟ್ಮೆಂಟ್ ಒಂದರಲ್ಲಿ ಮೂರು ಫ್ಲ್ಯಾಟ್ ಇದೆ. ಆದರೆ ಕಂಗನಾ ಈ ಮೂರು ಫ್ಲ್ಯಾಟ್ ಅನ್ನು ಒಂದು ಫ್ಲ್ಯಾಟ್ ಆಗಿ ಪರಿವರ್ತಿಸಿದ್ದಾರೆ. ಇದು ಬೃಹತ್ ಮುಂಬೈ ಮಹಾನಗರ ಪಾಲಿಕೆಯ ಕಣ್ಣು ಕೆಂಪಗೆ ಮಾಡಿದೆ.
ಕಂಗನಾ ರು ಮೂರು ಫ್ಲ್ಯಾಟ್ ಅನ್ನು ಒಂದೇ ಫ್ಲ್ಯಾಟ್ ಆಗಿ ಬದಲಾಯಿಸಿರುವುದು ನಿಯಮ ಬಾಹಿರವಾಗಿದ್ದು, ಆ ಫ್ಲ್ಯಾಟ್ನ ಕೆಲವು ಭಾಗಗಳನ್ನು ಒಡೆಯಬೇಕಾಗಿದೆ ಎಂದು ಬಿಎಂಸಿಯು ಕಂಗನಾ ಗೆ ನೊಟೀಸ್ ನೀಡಿತ್ತು. ಈ ನೊಟೀಸ್ ವಿರುದ್ಧ ಕಂಗನಾ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಬಾಂಬೆಯ ಸಿವಿಲ್ ಕೋರ್ಟ್, ಬಿಎಂಸಿಯ ನೊಟೀಸ್ಗೆ ತಡೆ ನೀಡಲು ನಿರಾಕರಿಸಿದೆ. 'ಕಂಗನಾರ ಫ್ಯ್ಲಾಟ್ನ ಬದಲಾವಣೆಯಲ್ಲಿ ಕೆಲವು ಗಂಭೀರ ನಿಯಮ ಉಲ್ಲಂಘನೆಗಳು ಆಗಿವೆ' ಎಂದು ನ್ಯಾಯಾಧೀಶ ಎಲ್.ಎಸ್.ಚೌಹಾಣ್ ಹೇಳಿದ್ದಾರೆ.
Recommended Video
ಕಂಗನಾ ರೌಣೌತ್ ತಮ್ಮ ಫ್ಯ್ಲಾಟ್ಗಳನ್ನು ಆಲ್ಟರ್ ಮಾಡಬೇಕಾದರೆ ಕಾಮನ್ ಪ್ಯಾಸೇಜ್, ಕೇಬಲ್ ಏರಿಯಾ, ಪೈಪ್ ಏರಿಯಾಗಳನ್ನು ಮುಚ್ಚಿಹಾಕಿದ್ದಾರೆ. ಇವು ಮಾತ್ರವೇ ಅಲ್ಲದೆ ಇನ್ನೂ ಕೆಲವು ಉಲ್ಲಂಘನೆಗಳನ್ನು ಅವರು ಮಾಡಿದ್ದಾರೆ ಎನ್ನಲಾಗಿದೆ.