Don't Miss!
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- News Karnataka Rain: ರಾಜ್ಯಕ್ಕೆ ಶೇ.20ರಷ್ಟು ಮಳೆ ಕೊರತೆ: ಏಪ್ರಿಲ್ 25 ದಿನದಲ್ಲಿ ಸುರಿದ ಮಳೆ ವರದಿ ಇಲ್ಲಿದೆ
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ದಾವೂದ್' ವಿರುದ್ಧ ಸಿಡಿದೆದ್ದ ನಟಿ ಶ್ರುತಿ ಹಾಸನ್
ರಂಗಾಚಾರಿ ಎಂಬ ತಮಿಳು ನಿರ್ಮಾಪಕರ ಮೇಲೆ ನಟಿ ಶ್ರುತಿ ಹಾಸನ್ ಗರಂ ಆಗಿದ್ದಾರೆ. ಅವರ ವಿರುದ್ಧ ದಾವಾ ಹೂಡಲು ನಿರ್ಧರಿಸಿದ್ದಾರೆ. ಬಾಲಿವುಡ್ ನ 'ಡಿ-ಡೇ' ಚಿತ್ರ ಈಗ ತಮಿಳಿಗೆ 'ದಾವೂದ್' ಎಂಬ ಹೆಸರಿನಲ್ಲಿ ಡಬ್ ಆಗಿ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ತಮ್ಮ ಅನುಮತಿಯನ್ನು ಪಡೆಯದೆ ಚಿತ್ರವನ್ನು ಡಬ್ ಮಾಡಲಾಗಿದೆ ಎಂದು ಶ್ರುತಿ ಆರೋಪಿಸಿದ್ದಾರೆ.
ಮೂಲ ಚಿತ್ರಕ್ಕೆ ನಿಖಿಲ್ ಅದ್ವಾನಿ ಆಕ್ಷನ್ ಕಟ್ ಹೇಳಿದ್ದರು. ಈ ಚಿತ್ರದಲ್ಲಿ ಶ್ರುತಿ ಹಾಸನ್ ವೇಶ್ಯೆಯ ಪಾತ್ರ ಪೋಷಿಸಿದ್ದರು. ಅರ್ಜುನ್ ರಾಂಪಾಲ್ ಹಾಗೂ ಶ್ರುತಿ ನಡುವಿನ ಹಾಟ್ ಸನ್ನಿವೇಶಗಳು ಚಿತ್ರದಲ್ಲಿ ಬರುತ್ತವೆ. ಈ ಹಾಟ್ ದೃಶ್ಯಗಳಿಂದ ಚಿತ್ರಕ್ಕೆ ಸಾಕಷ್ಟು ಪ್ರಚಾರ ಸಿಕ್ಕಿತ್ತು. ಈಗ ರಂಗಾಚಾರಿ ಇದನ್ನೇ ಎನ್ ಕ್ಯಾಶ್ ಮಾಡಿಕೊಡುತ್ತಿದ್ದಾರೆ. [ಡಿ-ಡೇ ಚಿತ್ರ ವಿಮರ್ಶೆ]
ಇದಿಷ್ಟೇ ಅಲ್ಲದೆ ಚಿತ್ರಕ್ಕೆ 'ದಾವೂದ್' ಎಂದು ಹೆಸರಿಟ್ಟಿರುವುದು ಮಿಸ್ ಲೀಡ್ ಮಾಡಿದಂತಾಗುತ್ತದೆ. ಈ ಸಂಬಂಧ ತಾವು ಕಾನೂನು ಮೊರೆ ಹೋಗುತ್ತೇವೆ ಎಂದಿದ್ದಾರೆ. ಡಿ-ಡೇ ಬಗ್ಗೆ ಶ್ರುತಿ ಮಾತನಾಡುತ್ತಾ, "ಕಥೆಗೆ ತಕ್ಕಂತೆ ತಾನು ಆ ರೀತಿಯ ಸನ್ನಿವೇಶದಲ್ಲಿ ಅಭಿನಯಿಸಿದ್ದೇನೆ. ನನ್ನ ಪಾತ್ರ ಸವಾಲಿನಿಂದ ಕೂಡಿತ್ತು. ಕಥೆ ಕೇಳಿದ ಕೂಡಲೆ ತಕ್ಷಣ ಅಂಗೀಕರಿಸಿದೆ" ಎಂದಿದ್ದಾರೆ.
ಡಿ-ಡೇ ಚಿತ್ರದಲ್ಲಿ ಶ್ರುತಿ ಅವರು ಕರಾಚಿಯ ವೇಶ್ಯೆಯಾಗಿ ಕಾಣಿಸಿಕೊಳ್ಳುತ್ತಾರೆ. ಆ ಪಾತ್ರಕ್ಕೆ ಸಾಕಷ್ಟು ಪ್ರಚಾರ ಹಾಗೂ ಮೆಚ್ಚುಗೆಯೂ ವ್ಯಕ್ತವಾಯಿತು. ಈಗ ತಮ್ಮ ಗಮನಕ್ಕೆ ಬಾರದಂತೆ ಚಿತ್ರವನ್ನು ಡಬ್ ಮಾಡಿ ಬಿಡುಗಡೆ ಮಾಡುತ್ತಿರುವ ಬಗ್ಗೆ ಅತ್ತ ನಿರ್ದೇಶಕ ಇತ್ತ ಶ್ರುತಿ ಹಾಸನ್ ವಿರೋಧ ವ್ಯಕ್ತಪಡಿಸಿದ್ದಾರೆ. ಶ್ರುತಿ ಅವರ ಪಾತ್ರ ಚಿತ್ರದಲ್ಲಿ ಸ್ವಲ್ಪ ಸಮಯ ಮಾತ್ರ ಬರುತ್ತದೆ. ಆದರೂ ಎಲ್ಲರಿಗೂ ನೆನಪಿನಲ್ಲಿ ಉಳಿಯುವಂತೆ ಅಭಿನಯಿಸಿರುವುದು ಗಮನಾರ್ಹ.