Don't Miss!
- Automobiles Bajaj: ಮುಂಬರಲಿರುವ ಬಜಾಜ್ ಪಲ್ಸರ್ NS 400 ನಿರೀಕ್ಷಿತ ಬೆಲೆ, ವಿಶೇಷತೆಗಳು!
- News ರಾಜ್ಯಕ್ಕಾದ ಅನ್ಯಾಯ ಪ್ರಶ್ನಿಸದ ಸಂಸದರನ್ನು ಆಯ್ಕೆ ಮಾಡಬೇಡಿ: ಸಿದ್ದರಾಮಯ್ಯ ಮನವಿ
- Lifestyle ಸರ್ಕಸ್ನಿಂದ ತಪ್ಪಿಸಿಕೊಂಡು ಓಡಿದ ಆನೆ..! ಆಮೇಲೆ ಆಗಿದ್ದೇನು..?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Sports T20 World Cup: ಆರಂಭಿಕ ಸ್ಥಾನಕ್ಕಾಗಿ ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್ ಪೈಪೋಟಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡೈವೋರ್ಸ್ ಪಡೆಯಲು ಭಾರಿ ಮೊತ್ತದ ಜೀವನಾಂಶ ಕೇಳಿದರೇ ನವಾಜುದ್ದೀನ್ ಪತ್ನಿ?
ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಪತ್ನಿ ಆಲಿಯಾ ಸಿದ್ದಿಕಿ ಸಾಂಸಾರಿಕ ಜೀವನ ಅಂತ್ಯದೆಡೆಗೆ ಸಾಗುತ್ತಿದೆ. ವಿಚ್ಚೇದನಕ್ಕಾಗಿ ಈಗಾಗಲೇ ಆಲಿಯಾ ಪತಿಗೆ ನೋಟಿಸ್ ಕಳುಹಿಸಿದ್ದಾರೆ. ವೈವಾಹಿಕ ಸಂಬಂಧ ಕಡಿದುಕೊಳ್ಳುವ ಸಲುವಾಗಿ ಆಲಿಯಾ ಮೇ 7ರಂದು ಸಿದ್ದಿಕಿ ಅವರಿಗೆ ಇ-ಮೇಲ್ ಮತ್ತು ವಾಟ್ಸಾಪ್ ಮೂಲಕ ಲೀಗಲ್ ನೋಟಿಸ್ ಕಳುಹಿಸಿದ್ದರು.
ವಿಚ್ಚೇದನ ಪತ್ರದ ಜತೆಗೆ ನವಾಜುದ್ದೀನ್ ಸಿದ್ದಿಕಿ ತಮಗೆ ಪರಿಹಾರ ರೂಪದಲ್ಲಿ ನೀಡಬೇಕಾದ ಜೀವನಾಂಶದ ಬೇಡಿಕೆಯನ್ನೂ ಇರಿಸಿದ್ದಾರೆ. ಆ ಬೇಡಿಕೆಯ ಪಟ್ಟಿ ಕಂಡು ನವಾಜುದ್ದೀನ್ ಕಂಗಾಲಾಗಿದ್ದಾರೆ ಎನ್ನಲಾಗಿದೆ. ಭಾರಿ ಮೊತ್ತದ ಹಣ ಹಾಗೂ ಆಸ್ತಿಯನ್ನು ಜೀವನಾಂಶವಾಗಿ ನೀಡುವಂತೆ ಆಲಿಯ ಕೇಳಿರುವುದಾಗಿ ಸುದ್ದಿಗಳು ಹರಿದಾಡುತ್ತಿವೆ. ಮುಂದೆ ಓದಿ..
ನವಾಜುದ್ದೀನ್ ಸಿದ್ದಿಕಿ ದಾಂಪತ್ಯದಲ್ಲಿ ಬಿರುಗಾಳಿ: ಸತ್ಯ ಹೇಳೋಕೆ ಟ್ವಿಟ್ಟರ್ ಖಾತೆ ತೆರೆದ ಸಿದ್ದಿಕಿ ಪತ್ನಿ
30 ಕೋಟಿ ರೂ ಜೀವನಾಂಶ?
ವಿಚ್ಚೇದನದ ಗೊಂದಲಕ್ಕೆ ತಾರ್ಕಿಕ ಪರಿಹಾರ ಕಂಡುಕೊಳ್ಳಲು 30 ಕೋಟಿ ರೂ ಹಾಗೂ 4 ಬಿಎಚ್ಕೆಯ ಫ್ಲಾಟ್ ನೀಡುವಂತೆ ಆಲಿಯಾ ಕೇಳಿದ್ದಾರೆ. ಜತೆಗೆ ತಮ್ಮ ಇಬ್ಬರು ಮಕ್ಕಳನ್ನು ತಾವೇ ನೋಡಿಕೊಳ್ಳಬೇಕಿರುವುದರಿಂದ ಇಬ್ಬರ ಹೆಸರಿನಲ್ಲಿಯೂ 20 ಕೋಟಿ ರೂ. ನಿಶ್ಚಿತ ಠೇವಣಿ ಇರಿಸುವಂತೆ ಬೇಡಿಕೆ ಇರಿಸಿದ್ದಾರೆ ಎನ್ನಲಾಗಿದೆ.
ಸುಳ್ಳು ಪತ್ರದ ಸೃಷ್ಟಿ
ಆದರೆ ಈ ವರದಿಗಳನ್ನು ಆಲಿಯಾ ತಳ್ಳಿಹಾಕಿದ್ದಾರೆ. ನವಾಜುದ್ದೀನ್ ಅವರಿಂದ ಇಷ್ಟು ಭಾರಿ ಮೊತ್ತದ ಪರಿಹಾರ ಮತ್ತು ಫ್ಲಾಟ್ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿಚ್ಚೇದನ ಪತ್ರದ ಕಾಪಿ ತಮ್ಮ ಬಳಿ ಇದೆ ಎಂದು ಹೇಳಿಕೊಂಡು ಮಾಧ್ಯಮಗಳಿಂದ ನನ್ನ ವಕೀಲರಿಗೆ ಕರೆಗಳು ಬರುತ್ತಿವೆ. ಅವುಗಳನ್ನು ಪರಿಶೀಲಿಸಿದ ಬಳಿಕ, ಅವು ತಿದ್ದಿದ ಸುಳ್ಳು ಪ್ರತಿಗಳೆಂಬುದು ಗೊತ್ತಾಗಿ ಎಂದು ಹೇಳಿದ್ದಾರೆ.
ಪತ್ನಿಯ ಮೇಲೆ ನಿಗಾ ವಹಿಸಲು ಗೂಢಚಾರರನ್ನು ನೇಮಿಸಿದ್ದರು ಈ ನಟ!
ರಕ್ಷಿಸುವ ಪ್ರಯತ್ನ
'ಇದರ ಹಿಂದೆ ಯಾರಿದ್ದಾರೆ? ಅವಮಾನದಿಂದ ಯಾರನ್ನೋ ಉಳಿಸುವ ಸಲುವಾಗಿ ಮಾಡುತ್ತಿರುವ ಪಿಆರ್ ಪ್ರಯತ್ನ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿದೆ. ಅನೇಕ ಸಂಗತಿಗಳು ಈಗ ಹೊರಬೀಳುತ್ತಿವೆ' ಎಂದು ನವಾಜುದ್ದೀನ್ ಅವರ ಮರ್ಯಾದೆ ಉಳಿಸಲು ಯಾರೋ ಈ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಟಿಯೊಂದಿಗಿನ ಸಂಬಂಧವೇ ನವಾಜುದ್ದಿನ್ ಸಿದ್ಧಿಕಿ ದಾಂಪತ್ಯಕ್ಕೆ ಮುಳುವಾಯಿತೆ?
ನಾನು ಖುದ್ದಾಗಿ ಒಪ್ಪಿಕೊಳ್ಳಬೇಕು
'ನನ್ನ ಟ್ವಿಟ್ಟರ್ ಖಾತೆಯಲ್ಲಿ ಯಾವುದನ್ನೂ ವೈಯಕ್ತಿಕವಾಗಿ ಒಪ್ಪಿಕೊಳ್ಳದ ಅಥವಾ ಯಾವುದೇ ಹೇಳಿಕೆ ಅಥವಾ ಆರೋಪವನ್ನು ನಿರಾಕರಿಸದೆ ಇದ್ದರೆ, ಯಾವುದೇ ಮಾಧ್ಯಮದ ವಿಭಾಗವು ಮಾಡುವ ಆರೋಪ ಅಥವಾ ಹೇಳಿಕೆ ಸಮರ್ಥನೀಯವಲ್ಲ' ಎಂದು ಮತ್ತೊಂದು ಟ್ವೀಟ್ನಲ್ಲಿ ಅವರು ತಿಳಿಸಿದ್ದಾರೆ.