Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೃತಿಕ್ ರೋಷನ್ ಮೇಲೆ ಕ್ರಶ್ ಹೊಂದಿದ್ದಕ್ಕೆ ಪತ್ನಿಯನ್ನೆ ಕೊಂದ ಪತಿ
ಸೆಲೆಬ್ರಿಟಿಗಳ ಮೇಲೆ ಜನಸಾಮಾನ್ಯರಿಗೆ ಕ್ರಶ್ ಆಗುವುದು, ಇಷ್ಟವಾಗುವುದು ಸಹಜ. ಅದರಲ್ಲು ಬಾಲಿವುಡ್ ನ ಗ್ರೀಕ್ ಗಾಡ್ ಹೃತಿಕ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಇತ್ತೀಚಿಗಷ್ಟೆ ವಾರ್ ಸಿನಿಮಾ ನೋಡಿ ಫಿದಾ ಆದ ನಿರೂಪಕಿಯೊಬ್ಬರು ಹೃತಿಕ್ ಗೆ ವೀರ್ಯದಾನ ಮಾಡುವಂತೆ ಹೇಳಿದ್ದರು. ಹೀಗೆ ಹೃತಿಕ್ ಇಷ್ಟಪಡುವವರು ಸಾಕಷ್ಟು ಮಂದಿ ಇದ್ದಾರೆ.
ಅಮೆರಿಕದಲ್ಲಿ ನೆಲೆಸಿದ ಭಾರತದ ಗೃಹಿಣಿಯೋರ್ವಳಿಗೆ ಹೃತಿಕ್ ಮೇಲೆ ಕ್ರಶ್ ಆಗಿದೆ. ಪತ್ನಿ ಹೃತಿಕ್ ಇಷ್ಟಪಡುತ್ತಿರುವುದನ್ನು ಸಹಿಸಿಕೊಳ್ಳದ ಪತಿ ಕೋಪಕೊಂಡು ಆಕೆಯನ್ನು ಕೊಲೆ ಮಾಡಿ ತಾನು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
2019ರ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದ 'ವಾರ್'
ಅಮೆರಿಕದ ನ್ಯೂಯಾರ್ಕ್ ನಗರದ ಕ್ವೀನ್ಸ್ ಪ್ರಾಂತ್ಯದ ಜೆಮಿನಿ ಅಲ್ಟ್ರಾ ಲಾಂಜ್ ಬಾರ್ ನಲ್ಲಿ ಭಾರತದ ಮೂಲದ ಡೋನೆ ದೊಜೋಯ್ ಕೆಲಸ ಮಾಡುತ್ತಿದ್ದರು. ಅಲ್ಲೆ ನೆಲೆಸಿರುವ ದಿನೇಶ್ವರ ಬುದ್ಧಿದತ್ ಎಂಬಾತ ಡೋನೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ ಪತ್ನಿಗೆ ಹೃತಿಕ್ ಮೇಲೆ ಕ್ರಶ್ ಆಗಿದೆ ಎನ್ನುವ ಕಾರಣಕ್ಕೆ ಸಿಟ್ಟಿಗೆದ್ದು ಆಕೆಯನ್ನೆ ಹತ್ಯೆ ಮಾಡಿದ್ದಾನೆ.
'ಕಹೋ ನ ಪ್ಯಾರ್ ಹೈ' ಚಿತ್ರ ನೋಡಿದಾಗಿನಿಂದ ದೊಜೋಯ್ ಗೆ ಹೃತಿಕ್ ಮೇಲೆ ಆಕರ್ಷಣೆ ಆಗಿದೆ. ಹೃತಿಕ್ ಅಭಿನಯದ ಎಲ್ಲಾ ಸಿನಿಮಾಗಳನ್ನು ತಪ್ಪದೆ ನೋಡುತ್ತಿದ್ದರಂತೆ. ಹಾಗಾಗಿ ಗಂಡನಿಗೆ ಆಕೆಯ ಮೇಲೆ ಅಸೂಯೆ ಇತ್ತಂತೆ. ಇದೇ ವಿಚಾರಕ್ಕೆ ಆಗಾಗ ಕಿತ್ತಾಟವಾಗುತ್ತಿತ್ತಂತೆ. ಈ ವಿಚಾರವನ್ನು ದೊಜೋಯ್ ಸ್ನೇಹಿತೆ ರೋಡ್ನಿ ಬಳಿ ಹೇಳಿಕೊಂಡು ನೋವನ್ನು ಹಂಚಿಕೊಂಡಿದ್ದರಂತೆ.
ವೀರ್ಯ ದಾನ ಮಾಡುವಂತೆ ಹೃತಿಕ್ ರೋಷನ್ ಗೆ ಸಲಹೆ ನೀಡಿದ ಖ್ಯಾತ ನಿರೂಪಕಿ
"ಅವನು ಕೆಲಸ ಮುಗಿಸಿ ಮನೆಗೆ ಬಂದಾಗ ದೊಜೋಯ್ ಹೃತಿಕ್ ರೋಷನ್ ಸಿನಿಮಾ ನೋಡುತ್ತ ಕುಳಿತಿದ್ದರೆ, ಕೋಪಗೊಂಡು ಟಿವಿ ಆಫ್ ಮಾಡಲು ಹೇಳುತ್ತಿದ್ದ. ಅಲ್ಲದೆ ಹೃತಿಕ್ ಮೇಲೆ ನನಗೆ ಅಸೂಯೆ ಇದೆ. ಅವನನ್ನು ಇಷ್ಟಪಡುವುದು ನನಗೆ ಇಷ್ಟವಿಲ್ಲ ಎಂದು ರೇಗಾಗುತ್ತಿದ್ದ" ಎಂದು ದೊಜೋಯ್ ಗೆಳತಿ ರೋಡ್ನಿ ಬಳಿ ಹೇಳಿಕೊಂಡಿದ್ದ ನೋವನ್ನು ರೋಡ್ನಿ ಬಹಿರಂಗ ಪಡಿಸಿದ್ದಾರೆ.
ಇನ್ನು ಈ ಘಟನೆ ನಡೆಯುವ ಮುನ್ನ ಇಬ್ಬರು ಸಿನಿಮಾಗೆ ಹೋಗಿದ್ದರು. ಅಮೇಲೆ, ಆಲ್ಬರ್ಟ್ ರಸ್ತೆಯ ಓಜೋನ್ ಪಾರ್ಕ್ ಅಪಾರ್ಟ್ ಮೆಂಟ್ ಗೆ ಕರೆದೊಯ್ದು ದೊಜೋಯ್ ಳನ್ನು ಬುದ್ಧಿದತ್ ಕೊಲೆಗೈದಿದ್ದಾನೆ. ಆ ನಂತರ ಆತ ಹೊವಾರ್ಡ್ ಬಿಚ್ ಹತ್ತಿರ ಮರವೊಂದಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.