Don't Miss!
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೃತಿಕ್ ರೋಷನ್ ಮೇಲೆ ಕ್ರಶ್ ಹೊಂದಿದ್ದಕ್ಕೆ ಪತ್ನಿಯನ್ನೆ ಕೊಂದ ಪತಿ
ಸೆಲೆಬ್ರಿಟಿಗಳ ಮೇಲೆ ಜನಸಾಮಾನ್ಯರಿಗೆ ಕ್ರಶ್ ಆಗುವುದು, ಇಷ್ಟವಾಗುವುದು ಸಹಜ. ಅದರಲ್ಲು ಬಾಲಿವುಡ್ ನ ಗ್ರೀಕ್ ಗಾಡ್ ಹೃತಿಕ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಇತ್ತೀಚಿಗಷ್ಟೆ ವಾರ್ ಸಿನಿಮಾ ನೋಡಿ ಫಿದಾ ಆದ ನಿರೂಪಕಿಯೊಬ್ಬರು ಹೃತಿಕ್ ಗೆ ವೀರ್ಯದಾನ ಮಾಡುವಂತೆ ಹೇಳಿದ್ದರು. ಹೀಗೆ ಹೃತಿಕ್ ಇಷ್ಟಪಡುವವರು ಸಾಕಷ್ಟು ಮಂದಿ ಇದ್ದಾರೆ.
ಅಮೆರಿಕದಲ್ಲಿ ನೆಲೆಸಿದ ಭಾರತದ ಗೃಹಿಣಿಯೋರ್ವಳಿಗೆ ಹೃತಿಕ್ ಮೇಲೆ ಕ್ರಶ್ ಆಗಿದೆ. ಪತ್ನಿ ಹೃತಿಕ್ ಇಷ್ಟಪಡುತ್ತಿರುವುದನ್ನು ಸಹಿಸಿಕೊಳ್ಳದ ಪತಿ ಕೋಪಕೊಂಡು ಆಕೆಯನ್ನು ಕೊಲೆ ಮಾಡಿ ತಾನು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
2019ರ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದ 'ವಾರ್'
ಅಮೆರಿಕದ ನ್ಯೂಯಾರ್ಕ್ ನಗರದ ಕ್ವೀನ್ಸ್ ಪ್ರಾಂತ್ಯದ ಜೆಮಿನಿ ಅಲ್ಟ್ರಾ ಲಾಂಜ್ ಬಾರ್ ನಲ್ಲಿ ಭಾರತದ ಮೂಲದ ಡೋನೆ ದೊಜೋಯ್ ಕೆಲಸ ಮಾಡುತ್ತಿದ್ದರು. ಅಲ್ಲೆ ನೆಲೆಸಿರುವ ದಿನೇಶ್ವರ ಬುದ್ಧಿದತ್ ಎಂಬಾತ ಡೋನೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ ಪತ್ನಿಗೆ ಹೃತಿಕ್ ಮೇಲೆ ಕ್ರಶ್ ಆಗಿದೆ ಎನ್ನುವ ಕಾರಣಕ್ಕೆ ಸಿಟ್ಟಿಗೆದ್ದು ಆಕೆಯನ್ನೆ ಹತ್ಯೆ ಮಾಡಿದ್ದಾನೆ.
'ಕಹೋ ನ ಪ್ಯಾರ್ ಹೈ' ಚಿತ್ರ ನೋಡಿದಾಗಿನಿಂದ ದೊಜೋಯ್ ಗೆ ಹೃತಿಕ್ ಮೇಲೆ ಆಕರ್ಷಣೆ ಆಗಿದೆ. ಹೃತಿಕ್ ಅಭಿನಯದ ಎಲ್ಲಾ ಸಿನಿಮಾಗಳನ್ನು ತಪ್ಪದೆ ನೋಡುತ್ತಿದ್ದರಂತೆ. ಹಾಗಾಗಿ ಗಂಡನಿಗೆ ಆಕೆಯ ಮೇಲೆ ಅಸೂಯೆ ಇತ್ತಂತೆ. ಇದೇ ವಿಚಾರಕ್ಕೆ ಆಗಾಗ ಕಿತ್ತಾಟವಾಗುತ್ತಿತ್ತಂತೆ. ಈ ವಿಚಾರವನ್ನು ದೊಜೋಯ್ ಸ್ನೇಹಿತೆ ರೋಡ್ನಿ ಬಳಿ ಹೇಳಿಕೊಂಡು ನೋವನ್ನು ಹಂಚಿಕೊಂಡಿದ್ದರಂತೆ.
ವೀರ್ಯ ದಾನ ಮಾಡುವಂತೆ ಹೃತಿಕ್ ರೋಷನ್ ಗೆ ಸಲಹೆ ನೀಡಿದ ಖ್ಯಾತ ನಿರೂಪಕಿ
"ಅವನು ಕೆಲಸ ಮುಗಿಸಿ ಮನೆಗೆ ಬಂದಾಗ ದೊಜೋಯ್ ಹೃತಿಕ್ ರೋಷನ್ ಸಿನಿಮಾ ನೋಡುತ್ತ ಕುಳಿತಿದ್ದರೆ, ಕೋಪಗೊಂಡು ಟಿವಿ ಆಫ್ ಮಾಡಲು ಹೇಳುತ್ತಿದ್ದ. ಅಲ್ಲದೆ ಹೃತಿಕ್ ಮೇಲೆ ನನಗೆ ಅಸೂಯೆ ಇದೆ. ಅವನನ್ನು ಇಷ್ಟಪಡುವುದು ನನಗೆ ಇಷ್ಟವಿಲ್ಲ ಎಂದು ರೇಗಾಗುತ್ತಿದ್ದ" ಎಂದು ದೊಜೋಯ್ ಗೆಳತಿ ರೋಡ್ನಿ ಬಳಿ ಹೇಳಿಕೊಂಡಿದ್ದ ನೋವನ್ನು ರೋಡ್ನಿ ಬಹಿರಂಗ ಪಡಿಸಿದ್ದಾರೆ.
ಇನ್ನು ಈ ಘಟನೆ ನಡೆಯುವ ಮುನ್ನ ಇಬ್ಬರು ಸಿನಿಮಾಗೆ ಹೋಗಿದ್ದರು. ಅಮೇಲೆ, ಆಲ್ಬರ್ಟ್ ರಸ್ತೆಯ ಓಜೋನ್ ಪಾರ್ಕ್ ಅಪಾರ್ಟ್ ಮೆಂಟ್ ಗೆ ಕರೆದೊಯ್ದು ದೊಜೋಯ್ ಳನ್ನು ಬುದ್ಧಿದತ್ ಕೊಲೆಗೈದಿದ್ದಾನೆ. ಆ ನಂತರ ಆತ ಹೊವಾರ್ಡ್ ಬಿಚ್ ಹತ್ತಿರ ಮರವೊಂದಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.