Don't Miss!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- News India weather: ಮಳೆಗಾಗಿ ಕಾಯುತ್ತಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ
- Finance ಅಯೋಧ್ಯೆಯಲ್ಲಿ ಓಲಾ ಕ್ಯಾಬ್ ಸೇವೆ ಆರಂಭ
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫೆಮೀನಾ ಮಿಸ್ ಇಂಡಿಯಾ ನಟಿ ಜೇನ್ಗೆ ಕಲ್ಲೇಟು
ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದ ತಾರೆ ಹಾಗೂ ಮಾಜಿ ಫೆಮೀನಾ ಮಿಸ್ ಇಂಡಿಯಾ ಸರಾಹ್ ಜೇನ್ ಡಯಾಸ್ ಎಂಬ ತಾರೆಗೆ ಕಲ್ಲೇಟು ಬಿದ್ದಿದೆ. ಈ ಘಟನೆ ಫರೀದಾಬಾದ್ ನಲ್ಲಿ ನಡೆದಿದೆ. ಅಪರಿಚಿತನೊಬ್ಬ ಬೀಸಿದ ಕಲ್ಲು ಸೀದಾ ಈಕೆಯ ಮುಖಕ್ಕೆ ಬಡಿದಿದೆ.
ಈಕೆ 'ಗೇಮ್' ಹಾಗೂ 'ಕ್ಯಾ ಸೂಪರ್ ಕೂಲ್ ಹೈ ಹಮ್' ಎಂಬ ಎರಡು ಹಿಂದಿಯ ಚಿತ್ರಗಳ ಜೊತೆಗೆ ತೆಲುಗು ನಟ ಪವನ್ ಕಲ್ಯಾಣ್ ಜೊತೆಗೆ 'ಪಂಜಾ' ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ. ತಮಿಳಿನ 'ಥೀರದ ವಿಲಯಟ್ಟು ಪಿಲ್ಲೈ' ಎಂಬ ಚಿತ್ರದಲ್ಲೂ ಅಭಿನಯಿಸಿದ್ದಾರೆ.
ಫರೀದಾಬಾದ್ ನ ಮಾಲ್ ಒಂದರಲ್ಲಿ ತಮ್ಮ ಚಿತ್ರದ ಪ್ರಚಾರಕಾರ್ಯದಲ್ಲಿರಬೇಕಾದರೆ ಯಾರೋ ಅಪರಿಚಿತನೊಬ್ಬ ಕಲ್ಲು ಬೀಸಿದ್ದಾನೆ. ಈ ಬಗ್ಗೆ ಚಿತ್ರತಂಡ ತೀವ್ರವಾಗಿ ಖಂಡಿಸಿದೆ. ವೇದಿಕೆ ಮೇಲೆ ಚಿತ್ರದ ಸಹ ಕಲಾವಿದರಾದ ರಿತೇಶ್ ದೇಶ್ ಮುಖ್, ತುಷಾರ್ ಕಪೂರ್ ಹಾಗೂ ನೇಹಾ ಶರ್ಮಾ ಕೂಡ ಉಪಸ್ಥಿತರಿದ್ದರು.
ಫರೀದಾಬಾದ್ ನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸಿಕ್ಕಾಪಟ್ಟೆ ಜನ ಬಂದಿದ್ದರಂತೆ. ಜನಸಂದಣಿಯಿಂದ ಯಾರೋ ಒಬ್ಬ ಕಲ್ಲು ಬೀಸಿದ್ದಾನೆ. ಅದು ಸೀದಾ ಬಂದು ಸರಾಹ್ ಜೇನ್ ಮುಖಕ್ಕೆ ಬಡಿದಿದೆ. ಚಿತ್ರದ ಪ್ರಚಾರದ ಬಳಿಕ ಸರಾಹ್ ಅಭಿಮಾನಿಗಳ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದರು.
ಅಷ್ಟರಲ್ಲಾಗಲೇ ಆಕೆಯ ಮುಖಕ್ಕೆ ಕಲ್ಲು ಬಿದ್ದು ಪ್ರೋಗ್ರಾಂ ಕ್ಯಾನ್ಸಲ್ ಆಗಿದೆ. ಈ ಬಗ್ಗೆ ಟ್ವೀಟಿಸಿ ಸರಾಹ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ, "ಫರೀದಾಬಾದ್ ನಲ್ಲಿ ನನ್ನ ಮೇಲೆ ಕಲ್ಲು ಎಸೆಯಲಾಯಿತು. ಅದು ನನಗೆ ಬಿದ್ದು ತುಟಿಗೆ ಗಾಯವಾಗಿದೆ..."
"ಇನ್ನೂ ನೋವನ್ನು ಅನುಭವಿಸುತ್ತಿದ್ದೆನೆ. ಮೊಟ್ಟ ಮೊದಲ ಬಾರಿಗೆ ನನಗೆ ವೇದಿಕೆ ಮೇಲೆ ಹೀಗಾಗುತ್ತಿರುವುದು. ನಿಜಕ್ಕೂ ಇದೊಂದು ನಾಚಿಕೆಗೇಡಿನ ಸಂಗತಿ. ನನ್ನ ತೇಜೋವಧೆ ಮಾಡುವ ಪ್ರಯತ್ನ ಇದು. ಆದರೆ ನನ್ನ ವಿರೋಧಿಗಳಿಗೆ ಖಂಡಿತ ಇದು ಸಾಧ್ಯವಾಗುವುದಿಲ್ಲ" ಎಂದಿದ್ದಾರೆ ಸರಾಹ್. (ಏಜೆನ್ಸೀಸ್)