Don't Miss!
- News ಕೋವಿಡ್ ಸಮಯದಲ್ಲಿ ನಾನು ತಪ್ಪು ಮಾಡಿದ್ದೇನೆಂಬುದು ಅಪಪ್ರಚಾರ:ಕೆ ಸುಧಾಕರ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊರೊನಾ ಕಾರಣಕ್ಕೆ ರಾಣಾ ದಗ್ಗುಬಾಟಿ ಸಿನಿಮಾ ಬಿಡುಗಡೆ ಮುಂದೂಡಿಕೆ
ಕೊರೊನಾ ಎರಡನೇ ಅಲೆ ಮತ್ತೆ ಆತಂಕ ತಂದಿದೆ. ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳು ಭಾಗಷಃ ಲಾಕ್ಡೌನ್ ಘೋಷಣೆ ಮಾಡಿವೆ. ಚಿತ್ರಮಂದಿರಗಳು, ಮಾಲ್ಗಳು ಇನ್ನಿತರೆ ಸಾರ್ವಜನಿಕರು ಸೇರುವ ಸ್ಥಳಗಳ ಮೇಳೆ ನಿರ್ಭಂದ ವಿಧಿಸಿವೆ.
ಕೊರೊನಾ ಮತ್ತೆ ಹೆಚ್ಚಾಗುತ್ತಿರುವ ಕಾರಣ ಈಗಾಗಲೇ ಬಿಡುಗಡೆ ದಿನಾಂಕ ನಿಗದಿ ಆಗಿದ್ದ ರಾಣಾ ದಗ್ಗುಬಾಟಿ ನಟನೆಯ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ.
ರಾಣಾ ದಗ್ಗುಬಾಟಿ ನಟನೆಯ 'ಹಾಥಿ ಮೇರೆ ಸಾಥಿ' ಸಿನಿಮಾವು ಮಾರ್ಚ್ 26 ರಂದು ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ಉತ್ತರ ಭಾತದ ಕೆಲವು ರಾಜ್ಯಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗಿ ಭಾಗಷಃ ಲಾಕ್ಡೌನ್ ಘೋಷಣೆ ಆದ ಕಾರಣ ಸಿನಿಮಾದ ಹಿಂದಿ ಅವತರಣಿಕೆ 'ಹಾಥಿ ಮೇರೆ ಸಾಥಿ' ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ.
ಈ ಬಗ್ಗೆ ಎರೋಸ್ ಇಂಟರ್ನ್ಯಾಷನಲ್ ಸಂಸ್ಥೆಯು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, 'ಹಾಥಿ ಮೇರೆ ಸಾಥಿ' ಸಿನಿಮಾದ ತೆಲುಗು ಹಾಗೂ ತಮಿಳು ಅವತರಣಿಕೆಗಳಾದ 'ಅರಣ್ಯ', 'ಕಾಡನ್' ಸಿನಿಮಾಗಳು ನಿಗದಿಯಂತೆ ಮಾರ್ಚ್ 26 ರಂದೇ ಬಿಡುಗಡೆ ಆಗಲಿವೆ. ಆದರೆ ಹಿಂದಿ ಸಿನಿಮಾ ಬಿಡುಗಡೆಗೆ ಮಾತ್ರ ಮುಂದೂಡಲಾಗಿದೆ.
'ಹಾಥಿ ಮೇರೆ ಸಾಥಿ' ಸಿನಿಮಾವು ಆನೆಗಳನ್ನು ಪ್ರಧಾನವಾಗಿಟ್ಟುಕೊಂಡು ಮಾನವ-ಅರಣ್ಯ ಸಂಬಂಧ. ಮಾನವನಿಂದಾಗುತ್ತಿರುವ ಅರಣ್ಯ ನಾಶ. ಅರಣ್ಯದ ಅವಶ್ಯಕತೆ, ಕಾಡು ಪ್ರಾಣಿಗಳ ಹಕ್ಕುಗಳು ಇನ್ನಿತರೆ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಿದೆ.
Recommended Video
ಸಿನಿಮಾದಲ್ಲಿ ರಾಣಾ ದಗ್ಗುಬಾಟಿ, ಶ್ರಿಯಾ ಪಿಲ್ಗಾಂಕರ್, ಪುಲ್ಕಿತ್ ಸಮರ್ಥ್, ವಿಷ್ಣು ವಿಶಾಲ್, ಪರಸ್ ಅರೋರ ಮುಂತಾದವರು ನಟಿಸಿದ್ದಾರೆ. ಸಿನಿಮಾವನ್ನು ಪ್ರಭು ಸೋಲೊಮನ್ ನಿರ್ದೇಶನ ಮಾಡಿದ್ದರೆ.