Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾ ಮತ್ತು ಕೊರೊನಾ ರೋಗಿಗಳು: ಚಿನ್ನದಂತಾ ಮಾತು ಹೇಳಿದ ಸೋನು ಸೂದ್
ಕಳೆದ ವರ್ಷ ಭಾರತದಲ್ಲಿ ಕೊರೊನಾ ಸಮಸ್ಯೆ ಕಾಣಿಸಿಕೊಂಡಾಗ ಕಾರ್ಮಿಕರಿಗೆ ಸಹಾಯ ಹಸ್ತ ಚಾಚುವ ಮೂಲಕ ಸಮಾಜ ಸೇವೆ ಆರಂಭಿಸಿದ ಸೋನು ಸೂದ್ ದಣಿವರಿಯದೆ ಸಹಾಯ ಮಾಡುತ್ತಲೇ ಇದ್ದಾರೆ.
ಇದೀಗ ಭಾರತದ ವೈದ್ಯಕೀಯ ವ್ಯವಸ್ಥೆಯ ಹುಳುಕಿನಿಂದಾಗಿ ಕೋವಿಡ್ ರೋಗಿಗಳು ಆಸ್ಪತ್ರೆ ಬೆಡ್ ಸಿಗದೆ ಆಮ್ಲಜನಕ ಸಿಗದೆ ಕಷ್ಟಪಡುತ್ತಿರುವ ಹೊತ್ತಿನಲ್ಲಿ ತಮ್ಮ ಕೈಲಾದ ಮಟ್ಟಿಗೆ ಆಸ್ಪತ್ರೆ ಬೆಡ್ಗಳು, ಆಮ್ಲಜನಕ ಪೂರೈಸುವ ಕಾರ್ಯವನ್ನು ಗೆಳೆಯರೊಟ್ಟಿಗೆ ಸೇರಿ ಸೋನು ಸೂದ್ ಮಾಡುತ್ತಿದ್ದಾರೆ.
ಮಧ್ಯರಾತ್ರಿ 12 ಗಂಟೆಗೆ ಟ್ವೀಟ್ ಮಾಡಿರುವ ಸೋನು ಸೂದ್, 'ಮಧ್ಯ ರಾತ್ರಿ ಹಲವಾರು ಕರೆಗಳನ್ನು ಮಾಡಿ ಅಗತ್ಯವಿರುವ ರೋಗಿಗಳಿಗೆ ಬೆಡ್ ಕೊಡಿಸವುದು, ಅಗತ್ಯವಿರರುವವರಿಗೆ ಆಮ್ಲಜಕನ ಕೊಡಿಸುವುದರಲ್ಲಿ ಇರುವ ನೆಮ್ಮದಿ 100 ಕೋಟಿ ಬಜೆಟ್ನ ಸಿನಿಮಾದಲ್ಲಿ ನಟಿಸುವುದರಲ್ಲಿಯೂ ಇಲ್ಲ. ರೋಗಿಗಳು ಆಸ್ಪತ್ರೆ ಮುಂದೆ ಸಾಲುಗಟ್ಟಿ ನಿಂತಿರುವಾಗ ನಾವು ಮಲಗಿ ನಿದ್ರಿಸಲು ಸಾಧ್ಯವಿಲ್ಲ' ಎಂದಿದ್ದಾರೆ ಸೋನು ಸೂದ್.
ಕಳೆದ ವರ್ಷದಿಂದಲೂ ಸೋನು ಸೂದ್ ಕೊರೊನಾ ಸಂಕಷ್ಟದಲ್ಲಿ ಸಹಾಯ ಮಾಡುತ್ತಲೇ ಬರುತ್ತಿದ್ದಾರೆ. ಲಾಕ್ಡೌನ್ ಸಮಯದಲ್ಲಿ ದೇಶದ ವಿವಿಧ ಮೂಲೆಗಳಲ್ಲಿ ಸಿಲುಕಿದ್ದ ಕಾರ್ಮಿಕರನ್ನು ತಮ್ಮ ಹುಟ್ಟೂರಿಗೆ ತಲುಪಿಸುವ ಕಾರ್ಯ ಆರಂಭಿಸಿದ ಸೋನು ಸೂದ್, ಬಸ್ಸು, ವಿಶೇಷ ರೈಲು, ವಿಮಾನಗಳ ಮೂಲಕ ಸ್ವಗೃಹಗಳಿಗೆ ತಲುಪಿಸುವ ಕಾರ್ಯ ಮಾಡಿ ಮಸೀಯಾ (ದೇವರು) ಎಂದು ಕಾರ್ಮಿಕರಿಂದ ಕರೆಸಿಕೊಂಡರು.
ಕೊರೊನಾ ಕಡಿಮೆ ಆದಾಗಲೂ ಸಹ ಸೋನು ಸೂದ್ ತಮ್ಮ ಒಳ್ಳೆಯ ಕಾರ್ಯವನ್ನು ನಿಲ್ಲಿಸಲಿಲ್ಲ. ಯಾವುದೇ ರೀತಿ ಸಹಾಯ ಕೋರಿ ತಮಗೆ ಟ್ವೀಟ್ ಮಾಡಿದವರಿಗೆ ಪತ್ರ ಬರೆದವರಿಗೆ ಕೂಡಲೇ ಸಹಾಯ ಮಾಡಿದರು ಸೋನು ಸೂದ್.
Recommended Video
ಇದೀಗ ಆಸ್ಪತ್ರೆ ಬೆಡ್ ಹಾಗೂ ಆಮ್ಲಜನಕಗಳನ್ನು ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಪಂಜಾಬ್ ರಾಜ್ಯದ ಕೊರೊನಾ ಲಸಿಕೆ ಅಭಿಯಾನದ ರಾಯಭಾರಿಯೂ ಆಗಿದ್ದಾರೆ ಸೋನು ಸೂದ್.