Don't Miss!
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೋಮ ಮಾಡಲು ಹೇಳಿ ಪೇಚಿಗೆ ಸಿಲುಕಿದ ನಟಿ ಹೇಮಾ
ನಟಿ, ಬಿಜೆಪಿ ಸಂಸದೆ ಹೇಮಾ ಮಾಲಿನಿ ಪೇಚಿಗೆ ಸಿಲುಕಿದ್ದಾರೆ. ಕೊರೊನಾ ಹೋಗಲಾಡಿಸಲು 'ಐಡಿಯಾ' ಕೊಟ್ಟು ನೆಟ್ಟಿಗರಿಂದ ನಿಂದನೆಗೆ ಒಳಗಾಗಿದ್ದಾರೆ.
ಕೊರೊನಾ ಹೋಗಲಾಡಿಸಲು ಮನೆಯಲ್ಲಿಯೇ ಸರಳವಾದ ಹೋಮ, ಹವನ ಮಾಡಿರೆಂದು 'ಕರೆ' ನೀಡಿದ್ದಾರೆ ಸಂಸದೆ ಹೇಮಾ ಮಾಲಿನಿ. ಅವರ ಈ ಹೇಳಿಕೆಗೆ ನೆಟ್ಟಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪರಿಸರ ದಿನಾಚರಣೆಯಂದು ಈ ಬಗ್ಗೆ ಮಾತನಾಡಿರುವ ಹೇಮಾ ಮಾಲಿನಿ, 'ಪರಿಸರ ಸ್ವಚ್ಛವಾಗಿರಿಸಿಕೊಳ್ಳಲು ಮನೆಯಲ್ಲಿಯೇ ಸರಳ ಹವನ ಮಾಡಬೇಕು. ಇದರಿಂದ ಕೊರೊನಾ ಸೇರಿದಂತೆ ಹಲವು ರೋಗಗಳಿಂದ ನಾವು ರಕ್ಷಿಸಿಕೊಳ್ಳಬಹುದು' ಎಂದಿದ್ದರು.
ಅಷ್ಟೇ ಅಲ್ಲದೆ, ತಾವು ಮಾಡಿದ ಹೋಮಕ್ಕೆ ಬೇವು, ತುಪ್ಪ, ಉಪ್ಪು, ಸಾಸಿವೆ ಇನ್ನೂ ಕೆಲವು ವಸ್ತುಗಳನ್ನು ಹಾಕಿದ್ದಾಗಿ ಹೇಳಿದ್ದಾರೆ. ಈ ರೀತಿಯ ಹವನವನ್ನು ಹಲವು ವರ್ಷಗಳಿಂದಲೂ ಹೇಮಾ ಮಾಲಿನಿ ಮಾಡುತ್ತಾ ಬಂದಿದ್ದಾರಂತೆ.
'ಕೋವಿಡ್ ಬಂದ ಮೇಲೆ ಈ ಸರಳ ಹೋಮವನ್ನು ದಿನಕ್ಕೆ ಎರಡು ಬಾರಿ ಮಾಡುತ್ತೇನೆ. ಇದರಿಂದ ಪರಿಸರ ಸ್ವಚ್ಛವಾಗುತ್ತದೆ ಮತ್ತು ಕೊರೊನಾ ಸೇರಿ ಇತರ ರೋಗಗಳು ದೂರವಾಗುತ್ತವೆ' ಎಂದಿದ್ದಾರೆ.
ಮತ್ತೊಂದು ಪ್ರತ್ಯೇಕ ವಿಡಿಯೋದಲ್ಲಿ ಮಾತನಾಡಿರುವ ಹೇಮಾ ಮಾಲಿನಿ, 'ಇಡೀಯ ವಿಶ್ವ ಕೊರೊನಾ ಮಹಾಮಾರಿ ಹಾಗೂ ಪರಿಸರ ಹಾನಿಯಿಂದ ತತ್ತರಿಸಿದೆ. ಹಾಗಾಗಿ ಭಾರತದ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಹವನ ಮಾಡಿರೆಂದು ನಾನು ಕೋರಿಕೊಳ್ಳುತ್ತೇನೆ. ಕೊರೊನಾ ಹೋಗುವವರೆಗೂ ಪ್ರತಿಯೊಬ್ಬರೂ ಪ್ರತಿದಿನ ಮನೆಗಳಲ್ಲಿ ಹೋಮ ಮಾಡಿರಿ' ಎಂದಿದ್ದಾರೆ.
'ಜಾತಿ, ಧರ್ಮದ ಭೇದವಿಲ್ಲದೆ ಪ್ರತಿಯೊಬ್ಬರ ಮನೆಯಲ್ಲಿಯೂ ಹೋಮ ಮಾಡಿ ಎಂದಿರುವ ಹೇಮಾಮಾಲಿನಿ, ಮಥುರಾದ ಆರ್ಎಸ್ಎಸ್ ಘಟಕವು ವಿಶ್ವ ಪರಿಸರ ದಿನಕ್ಕೆ ಎಲ್ಲ ಮನೆಗಳಲ್ಲಿ ಹೋಮ ಮಾಡಿಸುವ ಅಭಿಯಾನ ನಡೆಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
Recommended Video
ಆದರೆ ಹೇಮಾಮಾಲಿನಿ ಹೇಳಿಕೆಯನ್ನು ನೆಟ್ಟಿಗರು ತೀವ್ರವಾಗಿ ಖಂಡಿಸಿದ್ದಾರೆ. 'ಎಂಥಹಾ ಬುದ್ಧಿಹೀನ ಸಂಸದೆಯನ್ನು ಆಯ್ಕೆ ಮಾಡಿದ್ದೇವೆ' ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.