Don't Miss!
- News ಲೋಕಸಭೆ ಚುನಾವಣೆ : ಶೇ 100ರಷ್ಟು ಮತದಾನವಾದರೆ ಸಿಗಲಿದೆ ಪ್ರಶಸ್ತಿ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಕ್ರಿಯ ರಾಜಕೀಯಕ್ಕೆ ಕಂಗನಾ: ಹೇಮಾ ಮಾಲಿನಿ ಗರಂ
ರಾಜಕೀಯ ವಿಷಯಗಳ ಬಗ್ಗೆ ಸದಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಹಾಕುತ್ತಲೇ ಇರುವ ನಟಿ ಕಂಗನಾ ಸಕ್ರಿಯ ರಾಜಕಾರಣದಲ್ಲಿಲ್ಲದಿದ್ದರೂ ಪರೋಕ್ಷ ರಾಜಕಾರಣಿಯೇ ಆಗಿದ್ದರು. ಆದರೆ ಈಗ ಸಕ್ರಿಯ ರಾಜಕೀಯಕ್ಕೆ ಧುಮುಕುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ಹಿರಿಯ ನಟಿ, ರಾಜಕಾರಣಿ ಹೇಮಾಮಾಲಿನಿಯ ವಿರೋಧ ವ್ಯಕ್ತವಾಗಿದೆ.
ನಟಿ ಕಂಗನಾ ರನೌತ್ ರಾಜಕೀಯಕ್ಕೆ ಬರುವ ಇಂಗಿತ ವ್ಯಕ್ತಪಡಿಸಿರುವ ಬಗ್ಗೆ ನಟಿ ಹೇಮಾಮಾಲಿನಿಯನ್ನು ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಆ ಬಗ್ಗೆ ಗರಂ ಆಗಿ ಮಾತನಾಡಿದ್ದಾರೆ ಹೇಮಾ ಮಾಲಿನಿ.
ಸೀತಾರಾಮಮ್ ಚಿತ್ರದಲ್ಲಿ ಎಲ್ಲರಿಗಿಂತ ಇವರ ನಟನೆ ಅತ್ಯದ್ಭುತ ಎಂದು ಹೊಗಳಿದ ಕಂಗನಾ ರಣಾವತ್
''ನನ್ನ ನಂಬಿಕೆ ಎಲ್ಲ ಶ್ರೀಕೃಷ್ಣನ ಮೇಲಿದೆ ಆತ ಏನು ಮಾಡುತ್ತಾನೊ ಹಾಗೆ ಆಗಲಿದೆ'' ಎಂದಿದ್ದಾರೆ. ಮುಂದುವರೆದು, ''ಮಥುರಾ ಕ್ಷೇತ್ರದಿಂದ ಸಿನಿಮಾ ತಾರೆಯರೇ ಗೆಲ್ಲಬೇಕು ಎಂದು ನೀವು (ಮಾಧ್ಯಮಗಳಿಗೆ) ತಲೆಗೆ ತುಂಬಿಬಿಟ್ಟಿದ್ದೀರ. ಬರೀ ಸಿನಿಮಾ ತಾರೆಯರು ಮಾತ್ರವೇ ರಾಜಕೀಯಕ್ಕೆ ಬರಬೇಕ? ಇನ್ಯಾರು ರಾಜಕೀಯ ಮಾಡಬಾರದ. ಮುಂದೆ ರಾಖಿ ಸಾವಂತ್ ಸಹ ರಾಜಕೀಯಕ್ಕೆ ಬರಬಹುದೇನೋ. ಆಕೆಯೂ ನಟಿಯೇ ಅಲ್ಲವೆ'' ಎಂದು ಪರೋಕ್ಷವಾಗಿ ಕಂಗನಾಗೆ ಟಾಂಗ್ ನೀಡಿದ್ದಾರೆ ಹೇಮಾ ಮಾಲಿನಿ.
ಹೇಮಾಮಾಲಿನಿ ಸತತ ಎರಡು ಬಾರಿ ಮಥುರಾ ಕ್ಷೇತ್ರದಿಂದ ಸಂಸದೆ ಆಗಿ ಆಯ್ಕೆ ಆಗಿದ್ದಾರೆ. ಈಗ ಕಂಗನಾ ಸಹ ಮಥುರಾದಿಂದಲೇ ರಾಜಕೀಯ ಪ್ರಾರಂಭಿಸುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ಈ ವರೆಗೆ ಅದು ಅಧಿಕೃತಗೊಂಡಿಲ್ಲ.
ವಿಪರ್ಯಾಸವೆಂದರೆ, ಸಿನಿಮಾ ತಾರೆಯರು ರಾಜಕೀಯಕ್ಕೆ ಬರಬಾರದು ಎಂಬರ್ಥದಲ್ಲಿ ಮಾತನಾಡಿರುವ ಹೇಮಾಮಾಲಿ ಸ್ವತಃ ಚಿತ್ರನಟಿ, ಅವರ ಪತಿ ಧರ್ಮೇಂದ್ರ ಸಹ ಚಿತ್ರನಟ ಹಾಗೂ ರಾಜಕಾರಣಿ, ಮತಿಯ ಮೊದಲ ಹೆಂಡತಿಯ ಪುತ್ರ ಸನ್ನಿ ಡಿಯೋಲ್ ಸಹ ಚಿತ್ರನಟ ಹಾಗೂ ಸಂಸದ. ಇಡೀ ಕುಟುಂಬವೇ ರಾಜಕೀಯದಲ್ಲಿದ್ದರೂ ಸಹ ಈಗ ಹೊಸ ಚಿತ್ರನಟರು ರಾಜಕೀಯಕ್ಕೆ ಬರುವುದನ್ನು ವಿರೋಧಿಸುತ್ತಿದ್ದಾರೆ. ಇದು ಟ್ರೋಲ್ಗೆ ಕಾರಣವಾಗಿದೆ.